Monday, February 11, 2013

Daily Crime Incidents For Feb 11, 2013

ಅಪಘಾತ ಪ್ರಕರಣ:

ಕೊಣಾಜೆ ಠಾಣೆ 

  • ದಿನಾಂಕ 08.02.2013 ರಂದು ಬೆಳಿಗ್ಗೆ 10:45 ಗಂಟೆಗೆ ಫಿರ್ಯಾದಿದಾರರು ತನ್ನ ತಮ್ಮನ ಬಾಬ್ತು ಮೋಟಾರ್‌ ಸೈಕಲ್‌ ಕೆಎಲ್‌-14ಕೆ-7901 ರಲ್ಲಿ ಸಹಸವಾರಬಾಗಿ ಕುಳಿತುಕೊಂಡು ಹೋಗುತ್ತಿದ್ದಾಗ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಮೊಂಟೆಪದವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಸವಾರನು ಅಜಾಗರೂಕತೆಯಿಂದ ಚಲಾಯಿಸಿ ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಬೈಕ್‌ ರಸ್ತೆಗೆ ಬಿದ್ದಾಗ ರಸ್ತೆಗೆ ಎಸೆಯಲ್ಪಟ್ಟ ಫಿರ್ಯಾದಿದಾರರ ಎಡಭುಜಕ್ಕೆ, ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಆರೋಪಿ ಸವಾರನಿಗೆ ಕೂಡಾ ಕಾಲಿನ ಮಂಡಿಗೆ, ಮತ್ತಿತ್ತರ ಕಡೆಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಮಹಮ್ಮದ್‌ (38) ತಂದೆ: ದಿ.ಇಬ್ರಾಹಿಂ ವಾಸ: ಪುಂಡಿಕೈಪಡ್ಪುಮನೆ ನರಿಂಗಾನ ಗ್ರಾಮ ಬಂಟ್ವಾಳ ರವರು ನೀಡಿದ ದೂರಿನಂತೆ ಕೊಣಾಜೆ ಠಾಣೆ ಅಪರಾದ ಕ್ರಮಾಂಕ . 17/2013 ಕಲಂ: 279, 338 ಐ.ಪಿ.ಸಿ ರಣತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ 


  • ದಿನಾಂಕ: 09-02-2013 ರಂದು 08-30 ಗಂಟೆ ಸಮಯಕಕೆ, ಮಂಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ಎಂಬಲ್ಲಿ ಮೂಡಬಿದ್ರಿ-ಮಂಗಳೂರು ಎನ್.ಹೆಚ್ ರಸ್ತೆಯಲ್ಲಿ ಬಸ್ಸು ನಂ: ಕೆಎ 19 ಡಿ 5630 ನೇದ್ದನ್ನು ಅದರ ಚಾಲಕ  ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ , ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗೆ ತಾಗಿದ ಪರಿಣಾಮ ಅವರ ಬಲ ಸೊಂಟಕ್ಕೆ ಗಾಯವುಂಟಾಗಿರುತ್ತದೆ ಎಂಬುದಾಗಿ ಉಷಾ, 40 ವರ್ಷ, ಗಂಡ: ಉಮೇಶ, ವಾಸ: ಕುಂದೋಡಿ ಮನೆ, ತೆಂಕ ಎಡಪದವು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 32/2013 ಕಲಂ: 279, 338 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 08-02-2013 ರಂದು ಸಮಯ ಮುಂಜಾನೆ ಸುಮಾರು 04.30 ಗಂಟೆಗೆ ಕಾರು ನಂಬ್ರ ಏಂ-05 ಒಉ- 3167 ನ್ನು ಅದರ ಚಾಲಕ ಅಮೋಘ್ರವರು ತನ್ನ ಸ್ನೇಹಿತರಾದ ಪಿರ್ಯಾದುದಾರರು ಮತ್ತು ಸುದೇವ್ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕೋಡಿಯಾಲ್ಬೈಲ್ ಕಡೆಯಿಂದ ಜ್ಯೋತಿ ಬಸ್ಸು ನಿಲ್ದಾಣದ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕರಂಗಲ್ಪಾಡಿಯ ತಂದೂರ್ ಬಾರ್ನ್ ಕ್ರಾಸ್ ಬಳಿ ತಲುಪುವಾಗ ಕಾರಿನ ವೇಗವನ್ನು ನಿಯಂತ್ರಿಸಲಾಗದೆ, ರಸ್ತೆ ಬದಿಯ ಆವರಣ ಗೋಡೆಗೆ ಕಾರು ಡಿಕ್ಕಿಯಾಗಿ ಜಂಖಗೊಂಡು ಕಾರಿನಲ್ಲಿದ್ದ ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಗಾಯವಾಗಿ ಸುದೇವ್ರವರ ಹಣೆಗೆ ರಕ್ತಗಾಯವಾಗಿ ಗಾಯಾಳುಗಳು ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಾದಪ್ಪ (22) ತಂದೆ : ದೇವಯ್ಯ ಾಸ: ನಾಪ್ಲೋಕು ಗ್ರಾಮ ಮತ್ತು ಅಂಚೆ, ಮಡಿಕೇರಿ, ಹಾಲಿ ವಿಳಾಸ ವಿಘ್ನೇಶ್ ವಿಹಾರ್, ಬೆಸೆಂಟ್ ಕಾಲೇಜ್ ಬಳಿ, ಕೋಡಿಯಲ್ ಬೈಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೊರ್ವಠಾಣೆ ಅಪರಾದ ಕ್ರಮಾಂಕ 29/2013 279 , 337, 338 ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ; 

  • ದಿನಾಂಕ:09/2/2013 ರಂದು ಜಪ್ಪಿನಮೊಗರು ಕಡೆಕಾರ್ ಎಂಬಲ್ಲಿರುವ ಸ್ಥಳವನ್ನು ಸಮತಟ್ಟುಗೊಳಿಸಲೆಂದು ಟಿಪ್ಪರ್ ನಲ್ಲಿ  ಮಣ್ಣು ತರಿಸಿ ಇಸ್ಮಾಯಿಲ್ ಅಖ್ತರ್ ಎಂಬವರಿಂದ ಮಣ್ಣಿನ ರಾಶಿಯನ್ನು ಸಮತಟ್ಟುಗೊಳಿಸುತ್ತಿದ್ದ  ವೇಳೆ ಮಣ್ಣಿನ ರಾಶಿಯಿಂದ ಮಣ್ಣು ಜಾರಿ ಪಕ್ಕದಲ್ಲಿರುವ ಅವರ ತಂದೆಯ ಹೆಸರಿನಲ್ಲಿರುವ ಸ್ಥಳಕ್ಕೆ ಬಿದ್ದಿದ್ದನ್ನು ಕಂಡ  ಆರೋಪಿ ಜೇಮ್ಸನು ಫಿರ್ಯಾದಿದಾರರನ್ನುದ್ದೇಶಿಸಿ  ತಂದೆಯ ಜಾಗಕ್ಕೂ ಮಣ್ನೂ ಹಾಕಿಸಿ ಅದನ್ನು ಒಳಗೆ ಹಾಕಲು ಪ್ರಯತ್ನಿಸುತ್ತಿದ್ದೀಯಾ ಎಂದು ಹೇಳಿ ಫಿರ್ಯಾದಿದಾರರ ಸ್ಥಳಕ್ಕೆ ಅಕ್ರಮಪ್ರವೇಶ ಮಾಡಿ  ಫಿರ್ಯಾದಿದಾರರ ಬಾಬ್ತು ಕಾರು ನಂಬ್ರ: ಕೆಎ-19-ಪಿ-4962 ನೇಯದಕ್ಕೆ ಕಲ್ಲುಗಳಿಂದ ಹೊಡೆದು ಕಾರಿನ ಮುಂಬದಿ ಗಾಜು, ಬಾನೆಟ್ ಗೆ ಹಾನಿಯನ್ನುಮಟು ಮಾಡಿ ಸುಮಾರು 5000/ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದ್ದಲ್ಲದೇ ಬೇವರ್ಸಿ ರಂಡೇಮಗಾ ನಿನ್ನನ್ನು ಇದೇ ರೀತಿ ಪುಡಿ ಮಾಡುತ್ತೇನೆ ಎಂದು ಹೇಳಿ ಮರದ ಸೋಂಟೆಯಿಂದ ಫಿರ್ಯಾದಿದಾರರ ತಲೆಗೆ ಹೊಡೆಯಲು ಬೀಸಿದಾಗ ಫಿರ್ಯಾದಿದಾರರು ಕೈ ಅಡ್ಡ ಹಿಡಿದು ತಡೆದುದರಿಂದ ಅವರ ಬಲಗೈ ಉಂಗುರಬೆರಳು, ಎಡಕೆನ್ನೆಗೆ ತಾಗಿ ನೋವಾಗಿರುತ್ತದೆ. ನಂತರ ಆರೋಪಿಯು ಅಲ್ಲಿಂದ ಹೋಗುತ್ತಾ ಇನ್ನು ಜಾಗದ ವಿಷಯದಲ್ಲಿ ತಲೆಹಾಕಿದರೆ ನಿನ್ನನ್ನು ಕೊಮದೇ ಬಿಡುತ್ತೆನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.  ಈ ಘಟನೆಯು ಈ ದಿನ ತಾರೀಕು 09/2/13 ರಂದು 12-00 ಗಂಟೆಯಿಂದ 12-15 ಗಂಟೆಯ ಮಧ್ಯೆ ನಡೆದಿರುತ್ತದೆ ಎಂಬುದಾಗಿ ºÉgÁ¯ïØ r¸ÉÆÃeÁ vÀAzÉ ¦ü°¥sï r¸ÉÆÃeÁ CvÁÛªÀgÀ ªÀÄAUÀ¼ÀÆgÀÄ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ;  ಅಪರಾದ ಕ್ರಮಾಂಕ 34/12 PÀ®A: 447,504,427,324,506  L¦¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯಕಾಣೆ:

ಬಕರ್ೆ ಠಾಣೆ


  • ದಿನಾಂಕ 05-02-2013 ರಂದು  ಮಧ್ಯಾಹ್ಯ 14-15 ಗಂಟೆಗೆ ಪಿರ್ಯಾದಿದಾರರು ಬೊಕ್ಕಪಟ್ಣ  ಕಾರ್ನಲ್ ಗಾಡರ್್ನಲ್ಲಿರುವ ಸ್ಟಾರ್ ಶಿಫ್ ಯಾಡರ್್ನಲ್ಲಿ ವೆಲ್ಡಿಂಗ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಿಥುನ್ ರಾಜ್(24) ಎಂಬಾತನು ತನ್ನ ಊರಾದ ಕೊಚ್ಚಿಗೆ ಹೋಗಲು ಪಿರ್ಯಾದಿದಾರರಿಂದ ಹಣ ಪಡೆದು ಕೊಚ್ಚಿಗೆಂದು ಹೋಗಿದ್ದು ಆದರೆ ಅವನು ಊರಿಗೆ ಹೋಗದೇ ವಾಪಾಸು ಕೆಲಸಕ್ಕೂ ಬಾರದೇ ಕಾಣೆಯಾಗಿರರುತ್ತಾನೆ ಎಂಬುದಾಗಿ ಧನೇಶ್(29) ತಂದೆ ದಿ| ಮುಕುಂದನ್ ವಾಸ: ಕಂಡತ್ತಿಪರಂಬ್ ಹೌಸ್ ಎಡಕೊಚ್ಚಿ ವಿಲೇಜ್ ಕೊಚ್ಚಿ ತಾಲೂಕು ಎನರ್ಾಕುಲಂ ಜಿಲ್ಲೆ ಕೇರಳ ರಾಜ್ಯ ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 08/2013 ಕಲಂ. ಮನುಷ್ಯಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment