Friday, January 30, 2015

Daily Crime Reports 30-01-2015

ದೈನಂದಿನ ಅಪರಾದ ವರದಿ.
ದಿನಾಂಕ 30.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
7
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2015ರಂದು ಸಂಜೆ 5-30 ಗಂಟೆ ಸಮಯಕ್ಕೆ ಜಿಲ್ಲಾ ಕಾರಾಗೃಹದ ಎ ಬ್ಲಾಕಿನ ರೂಂ ನಂಬ್ರ 3ರಲ್ಲಿದ್ದ ಈ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಅಶ್ರಫ್ (ವಿಚಾರಣಾಧೀನ  ಬಂಧಿ) ರವರು ಸ್ನಾನಕ್ಕೆಂದು ಕಾರಾಗೃಹದ 4ನೇ ರೂಮಿನ ಎದುರು ವರಾಂಡದಲ್ಲಿ ಹೋಗುತ್ತಿದ್ದಾಗ 4ನೇ ರೂಮಿನಲ್ಲಿದ್ದ ವಿಚಾರಣಾಧೀನ ಬಂಧಿಗಳಾದ ಆರೋಪಿ ಸತಾರ್, ಸಿರಾಜ್, ಉರ್ಫಾನ್ ಎಂಬವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಕೈ ಹಿಡಿದೆಳೆದು ಅವರ ರೂಮಿನೊಳಗಡೆ ತಳ್ಳಿ ಕೈಗಳಿಂದ ಆತನ ಬೆನ್ನು, ಹೊಟ್ಟೆ, ಎದೆ ಭಾಗಕ್ಕೆ ಹೊಡೆದು, ಕಾಲುಗಳಿಂದ ತುಳಿದು, ತಲೆಯನ್ನು ಗೋಡೆಗೆ ಚಚ್ಚಿ ಹಲ್ಲೆ ಮಾಡಿದ್ದಾಗಿರುತ್ತದೆ. ಪಿರ್ಯಾದಿದಾರರು ಈ ಹಿಂದೆ ಆರೋಪಿತರುಗಳಿದ್ದ ರೂಮಿನಲ್ಲಿ ಅವರ ಜೊತೆ ಇದ್ದು, ಅವರುಗಳು ಈತನನ್ನು ಕೆಲಸಮಾಡುವಂತೆ ಒತ್ತಾಯಿಸುತ್ತಿದ್ದುದರಿಂದ ಆ ರೂಮನ್ನು ಬಿಟ್ಟು ರೂಂ ನಂಬ್ರ 3ಕ್ಕೆ ಬಂದಿದ್ದುದರಿಂದ ದ್ವೇಷಗೊಂಡ ಆರೋಪಿತರುಗಳು ಈ ಕೃತ್ಯವನ್ನು ವೆಸಗಿರುವುದಾಗಿದೆ.
 
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.01.2015 ರಂದು 17:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರಸಾದ್ ಶೆಟ್ಟಿ ರವರು ಮನೆಯ ಪಕ್ಕದಲ್ಲಿರುವ ಕಡಂದಲೆ ಬಿಲ್ಲವ ಸಂಘದಲ್ಲಿ ನಾಟಕ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿ ದಿನಾಂಕ 30.01.2015 ರಂದು 01:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ  ಮನೆಯ ಅಡುಗೆ ಕೋಣೆಯ ಬಾಗಿಲ ಚಿಲಕವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಕಿತ್ತು ಬಾಗಿಲನ್ನು ತೆರೆದು, ಒಳಪ್ರವೇಶಿಸಿ ಪಿರ್ಯಾದಿದಾರರ ಹಾಗೂ ಅವರ ತಾಯಿಯವರ ಕೋಣೆಯಲ್ಲಿದ್ದ ಕಪಾಟಿನಲ್ಲಿದ್ದ, ಬಂಗಾರದ ಚೈನು-4, ಬಂಗಾರದ ಬ್ರಾಸ್ ಲೆಟ್ ಗಳು -2, ಲೇಡಿಸ್ ಉಂಗುರಗಳು -4, ಬಂಗಾರದ ನಾಣ್ಯ -1,  ಬಂಗಾರದ ಬಳೆಗಳು-2, ಒಟ್ಟು ಸುಮಾರು 3,50,000 ರೂಪಾಯಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
 
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 29-01-2015 ರಂದು ಮಧ್ಯಾಹ್ನ 12:00 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮುಡಿಪು ಇರಾ ಕ್ರಾಸ್ ಬಳಿಯಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಮಟ್ಕಾ ಜೂಜಾಟ ಆಡಲು ಕರೆಯುತ್ತಿದ್ದಾನೆ ಎಂಬುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕಾದ ಶ್ರೀ ರಾಘವ ಪಡೀಲ್ ರವರು ಸಿಬ್ಬಂದಿಗಳು ಹಾಗೂ ಪಂಚಾಯತುದಾರರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ-19-ಜಿ-309ನೇದರಲ್ಲಿ ಹೋಗಿ ಮುಡಿಪು -ಇರಾ ಕ್ರಾಸ್ ಬಳಿಯಲ್ಲಿ ಅವಿತು ಕುಳಿತಿದ್ದ ಆರೋಪಿ ಲೂವಿಸ್ ಪೇರಸ್ ಎಂಬವನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ 6,570/- ರೂಪಾಯಿ ನಗದು ಹಣ, ನಂಬ್ರ ಬರೆಯುತ್ತಿದ್ದ ಚೀಟಿಗಳು-2, ಮೊಬೈಲ್ ಫೋನ್-2, ಬಿಳಿ ಪ್ಲಾಸ್ಟಿಕ್ ಚೀಲ-1, ಪೆನ್-1 ಮತ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಎಲ್-9495ನೇದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
 
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 27-01-2015 ರಂದು ಬೆಳಿಗ್ಗೆ 11-15 ಗಂಟೆ ಸಮಯ ಕೂಳೂರು-ಜೋಕಟ್ಟೆ ರಸ್ತೆಯಲ್ಲಿ ಫಿರ್ಯಾದಿದಾರರಾದ ಶ್ರೀ ದೀಪಕ್ ಆರ್.ಎಲ್. ರವರು ತನ್ನ ಬಾಬ್ತು ಕೆ ಎ 19 ವೈ 1226 ನೇ ಬೈಕ್ ನ್ನು ಚಲಾಯಿಸಿಕೊಂಡು ಎಸ್ ಈ ಝೆಡ್ ಕಡೆಗೆ ಹೋಗುತ್ತಾ ಅದಾನಿ ಕಂಪನಿಯ ಬಳಿಗೆ ತಲುಪಿದಾಗ ಕೆ ಎ 19 ಎಮ್ ಎ 7730 ನೇ ನಂಬ್ರದ ಜೆ ಸಿ ಬಿ ವಾಹನವನ್ನು ಅದರ ಚಾಲಕ ಇಹ್ಸಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು; ಗಂಭೀರ ರೀತಿಯಲ್ಲಿ ಎಡಗಾಲಿಗೆ ಮೂಳೆಮುರಿತದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾರೆ ಸೂಚನಾ ಪತ್ರವು ಫಿರ್ಯಾದಿದಾರರ ಚಿಕ್ಕಪ್ಪನವರಾದ ಉಮೇಶ ಕೋಟ್ಯಾನ್ ರವರ ಕೈಯಲ್ಲಿದ್ದು, ತಡವಾಗಿ ಈ ದಿನ ದೂರು ನೀಡಿದ್ದಾಗಿದೆ. 
 
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಪಿರ್ಯಾದಿದಾರರಾದ ಶ್ರೀ ವೆಂಕಟರಮಣ ಭಟ್ ರವರು ತನ್ನ ಬಾಬ್ತು ಕಾರು ನಂ KA- 20 P-6252 ನ್ನು ಮಂಗಳೂರು ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತ ರಾತ್ರಿ 7-35 ಗಂಟೆಗೆ ಗುರುಪುರ ಪೇಟೆಯಿಂದ ಸ್ವಲ್ಪ ಮುಂದೆ ಹಂಪ್ಸನ ಬಳಿ ತಲುಪುವಾಗ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ TN -34 D-9043 ನೇ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬಾಗಕ್ಕೆ ಬಂದು ಪಿರ್ಯಾದಿದಾರರ ಕಾರಿನ ಎಡಬಾಗಕ್ಕೆ ಮತ್ತು ರಸ್ತೆಯ ಬದಿಯ ಕಾಲು ದಾರಿಯಲ್ಲಿದ್ದ ವಿದ್ಯುತ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರ ಕಾರಿಗೆ ಜಖಂ ಉಂಟಾಗಿದ್ದು, ವಿದ್ಯುತ ಕಂಬ ಮುರಿದು ಬಿದ್ದಿರುವದರಿಂದ ಮೆಸ್ಕಾಂ ಸಂಸ್ಥೆಗೆ ನಷ್ಟ ಉಂಟಾಗಿರುವುದಾಗಿದೆ.
 
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಸಾಯಂಕಾಲ 04-50 ಗಂಟೆ ಸಮಯ ಫಿರ್ಯಾದಿದಾರರಾದ ಶ್ರೀ ಜಯಪ್ರಕಾಶ್ ಆರ್. ರವರು ತನ್ನ ಬಾಬ್ತು ಕೆ ಎ 19 ಈ ಕೆ 9982 ನ್ನು ಚಲಾಯಿಸಿಕೊಂಡು ಸುರತ್ಕಲ್-ಚೊಕ್ಕಬೆಟ್ಟು ಕ್ರಾಸ್ ರಸ್ತೆಯ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ತನ್ನ ಬಲಭಾಗದಿಂದ ಲಾರಿಯ ನಂಬ್ರ ಕೆ ಎ 19 ಎ ಸಿ 9563 ನೇ ಯನದನ್ನು ಅದರ ಚಾಲಕ ರಘುವೀರ್ ಎಂಬವರು ತನ್ನ ಲಾರಿಯನ್ನು ಏಕಾಏಕಿ ಎಡಕ್ಕೆ ತಿರುಗಿಸಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಬೈಕ್ ಲಾರಿಯ ಅಡಿಗೆ ಸಿಲುಕಿ, ಫಿರ್ಯಾದಿದಾರರ ಸೊಂಟಕ್ಕೆ ಗುದ್ದಿದ ಗಂಭೀರ ಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿತ್ತಾರೆ.
 
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ಶಶಿ ರವರ ತಮ್ಮ ಶಶಿಧರ ಪ್ರಾಯ 46 ವರ್ಷ ರವರು ದಿನಾಂಕ 014-10-2014 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೊದವರು ಈ ತನಕ ಮನೆಗೆ ಬಂದಿರುವುದಿಲ್ಲ. ಆದರೆ ಸುಮಾರು 15 ದಿನಗಳ ತನಕ ಅವರ ಮೊಬೈಲ್ ಪೋನಿಗೆ ಕರೆ ಮಾಡಿದಲ್ಲಿ ಮಾತನಾಡುತ್ತಿದ್ದು, ಇತ್ತೀಚೆಗೆ 15 ದಿನಗಳಿಂದ ಮೊಬೈಲ್ ಕರೆಯನ್ನು ಸ್ವೀಕರಿಸದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.
 
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಸಾಯಂಕಾಲ 06-10 ಗಂಟೆ ಸಮಯ ಫಿರ್ಯಾದಿದಾರರಾದ ಶ್ರೀ ಕಪಿಲ್ ವಿ. ರವರು ತನ್ನ ಬಾಬ್ತು ಕೆ ಎ 19 ಎಮ್ ಬಿ 362 ನೇ ನಂಬ್ರದ ಕಾರಿನಲ್ಲಿ ಕೂಳೂರು 04-ನೇ ಮೈಲಿನಲ್ಲಿ ಹೋಗುತ್ತಿರುವಾಗ ಅವರ ಪರಿಚಯದ ಮುತ್ತುಕೃಷ್ಣ ಎಂಬವರು ನಡೆದುಕೊಂಡು ಹೋಗುತ್ತಿದ್ದು, ಫಿರ್ಯಾದಿದಾರರ ಕಾರಿನ ಎದುರಿನಿಂದ ಕೆ ಎ 19 ಬಿ 4215 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಲಕ್ಷ್ಮಣ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮುತ್ತುಕೃಷ್ಣ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯವಾಗಿ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿತ್ತಾರೆ.
 
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಪಿರ್ಯಾದಿದಾರರಾದ ಶ್ರೀ ನಾಗೇಶ್ ಕುಲಾಲ್ ರವರು ಕಾರ್ ನಂಬ್ರ ಕೆಎ 19 ಎಮ್ ಡಿ 0702 ನ್ನು ಕುಳಾಯಿ ಕಡೆಯಿಂದ ಮುಲ್ಕಿ ಕಡೆಗೆ ಚಲಾಯಿಸಿಕೊಂಡು ಎನ್ ಹೆಚ್ 66 ರಲ್ಲಿ ಮುಕ್ಕ ಚೇಳ್ಯಾರು ಪದವು ಕ್ರಾಸ್ ಬಳಿ ಬರುತ್ತಿರುವಾಗ್ಗೆ ರಾತ್ರಿ 10-20 ಗಂಟೆ ಸಮಯಕ್ಕೆ ಟ್ಯಾಂಕರ್ ನಂಬ್ರ ಕೆಎ 21 1739 ನ್ನು ಅದರ ಚಾಲಕ ಮಾನವ ಜೀವಕ್ಕೆ ಅಪಾಯಕಾರಿಯದ ರೀತಿಯಲ್ಲಿ ಓವರ್ ಟೇಕ್ ಮಾಡಿ ಮುಂದಿನಿಂದ ಹೋಗುತ್ತಿದ್ದ ದ್ವಿ ಚಕ್ರ ವಾಹನ ನಂಬ್ರ ಕೆ ಎ 19 ಇಕೆ 7925 ರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನವು ರಸ್ತೆಗೆ ಎಸೆಯಲ್ಪಟ್ಟು ಅದರ ಮೇಲೆ ಹಾಗೂ ಸವಾರ ದೀಪಕ್ ರವರ ತಲೆಯ ಮೇಲೆ ಹರಿದು ಹೋದ ಪರಿಣಾಮ ದೀಪಕ್ ಮೃತಪಟ್ಟಿದ್ದು ಟ್ಯಾಂಕರ್ ಚಾಲಕ ವಾಹನವನ್ನು ಮುಂದಕ್ಕೆ ನಿಲ್ಲಿಸಿ ಪರಾರಿಯಾಗಿರುವುದಾಗಿದೆ.
 
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.01.2015 ರಂದು ರಾತ್ರಿ 8.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗೇಶ್ ಆಚಾರ್ಯ ರವರು ಅವರ ಬಾಬ್ತು ಕೆಎ-19 ಯು-7892ನೇ ಮೋಟಾರ್ಸೈಕಲ್ನಲ್ಲಿ ಕುಲಶೇಖರ ಡೈರಿಯಿಂದ ಬಜಪೆ ಕಡೆಗೆ ಹೋಗುತ್ತಾ ಸಿಲ್ವರ್ಗೇಟ್ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಮೋಟಾರ್ಸೈಕಲ್ನಂಬ್ರ ಕೆಎ-19 ಇಎಮ್‌-28 ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಎದರುನಿಂದ ಹೋಗುತ್ತಿದ್ದ ಒಂದು ಜೀಪನ್ನು ಓವರ್ಟೇಕ್ಮಾಡುವ ಪ್ರಯತ್ನದಲ್ಲಿ ರಸ್ತೆಯ ತೀರ ಬಲಬದಿಗೆ ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಎಡ ಬುಜಕ್ಕೆ ಗುದ್ದಿದ ಗಾಯ ತಲೆಗೆ ರಕ್ತ ಗಾಯ ಹಾಗೂ ಬಲ ಕೈ ಕಿರುಬೆರಳಿಗೆ ಮೂಳೆ ಮುರಿತದ ಗಾಯಾವಾಗಿರುತ್ತದೆ.
 
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.01.2015 ರಂದು ಫಿರ್ಯಾದಿದಾರರಾದ ಶ್ರೀ ಅವಿನಾಶ್ ರವರ ಚಿಕ್ಕಮ್ಮನ ಮಗ ಹಂಸರಾಜ್ಎಂಬಾತನು ಮೋಟಾರ್ಸೈಕಲ್ನಂಬ್ರ: ಕೆ19 ಇಜೆ-9835 ನ್ನು ಅತೀವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸುತ್ತಾ ಕುಲಶೇಖರ ದಿಂದ ಶಕ್ತಿನಗರ ಕಡೆ ಬರುತ್ತಾ ಶಕ್ತಿನಗರದ ಕೋರ್ಡೆಲ್ಎಂಬಲ್ಲಿ ಎದುರಿನಿಂದ ಬಂದ ಜೀಪೊಂದನ್ನು ಕಂಡು ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ಎಡಕ್ಕೆ ತಿರುಗಿಸಿ ರಸ್ತೆಯ ಬದಿಯ ಕಂಪೌಂಡ್ಗೋಡೆ ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ ಗಂಬೀರ ಸ್ವರೂಪದ ಗಾಯ ಹಾಗೂ ಎದೆಗೆ ಮತ್ತು ಕೈಕಾಲುಗಳಿಗೆ  ಗಾಯಾವಾಗಿ ಪ್ರಜ್ಷಾಹೀನ ಸ್ಥಿತಿಯಲ್ಲಿರುತ್ತಾರೆ.
 

Thursday, January 29, 2015

Daily Crime Reports : 29-01-2015

ದೈನಂದಿನ ಅಪರಾದ ವರದಿ.
ದಿನಾಂಕ 29.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
1
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
0





























1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಬಾಬುಲಾಲ್ ಪಟೇಲ್ ರವರ ಹೆಂಡತಿಯ ಅಣ್ಣನ ಮಗನಾದ ದರ್ಶನ್ ಕಿಶೋರ್ ಪಟೇಲ್ (16) ಎಂಬಾತನು ಮಂಗಳೂರು ನಗರದ ರಾಮಕೃಷ್ಣ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿ.ಯು.ಸಿ. ವ್ಯಾಸಂಗ ಮಾಡಿಕೊಂಡಿದ್ದು, ಸದ್ರಿಯವರ ತಂದೆ ತಾಯಿ ಮೃತಪಟ್ಟಿದ್ದರಿಂದ ಪಿರ್ಯಾದುದಾರರೇ ಅವರನ್ನು ನೋಡಿಕೊಳ್ಳುತ್ತಿರುವುದಾಗಿದೆ. ಹೀಗಿರುವಲ್ಲಿ ದರ್ಶನ್ ಕಿಶೋರ್ ಪಟೇಲನು ದಿನಾಂಕ 23-01-2015ರಂದು ಎಂದಿನಂತೆ ಕಾಲೇಜಿನಿಂದ ಸಂಜೆ 4-30 ಗಂಟೆಗೆ ಮನೆಗೆ ವಾಪಾಸ್ಸಾಗಿದ್ದು, ತಿಂಡಿ ತಿಂದು ಮನೆಯ ಟ್ಯಾರೀಸಿನಲ್ಲಿ ಓದಲೆಂದು ಹೋದವನು ನಂತರ ಮನೆಗೆ ವಾಪಾಸ್ಸಾಗದೇ ಇದ್ದುಈತನನ್ನು ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಈತನು ಪತ್ತೆಯಾಗದೇ ಇರುವುದಾಗಿದೆ.

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.01.2015 ರಂದು ಬೆಳಿಗ್ಗೆ 10 30 ಗಂಟೆಗೆ  ಮಂಗಳೂರು ನಗರದ ಕೊಡಿಯಾಲ ಬೈಲ್ - ಹಂಪನಕಟ್ಟೆ ಸಾರ್ವಜನಿಕ  ಕಾಂಕ್ರೀಟು ಏಕ ಮುಖ ರಸ್ತೆಯನ್ನು  ಹಳೇ ಬಸ್ಸು ನಿಲ್ದಾಣ ಕಡೆಯಿಂದ  ಪೂಂಜಾ ಆರ್ಕೆಡ್ ಕಡೆಗೆ ಶಾಲಾ ಬಾಲಕ  ಇತರರೊಂದಿಗೆ ರಸ್ತೆಯನ್ನು ದಾಟುತ್ತಾ ರಸ್ತೆ ವಿಭಾಜಕದ ಬಳಿ ತಲುಪುತ್ತಿದ್ದಂತ್ತೆ ಕೊಡಿಯಾಲ ಬೈಲು ಕಡೆಯಿಂದ ಹಂಪನಕಟ್ಟೆ ಕಡೆಗೆ ಬಸ್ಸು ಕೆಎ.19.ಎಎ.4655ನೇದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಬಾಲಕನ ತಲೆಯ ಮೇಲೆ  ಬಸ್ಸಿನ ಬಲ ಬದಿಯ ಎದುರಿನ ಚಕ್ರ ಹಾದು ಉಂಟಾದ ತೀವೃ ಗಾಯದಿಂದ ಬಾಲಕ ಆನಂದ ರಾಜು ಅಪಘಾತ ಸ್ಥಳದಲ್ಲೇ ಮೃತ ಪಟ್ಟದ್ದಾಗಿದೆ.

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-01-2015 ರಂದು ರಾತ್ರಿ 11-40 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿ.ಜೆ. ನೀಲಿಯಾರ್ ರವರು ಮಂಗಳೂರು ನಗರದ ಶಿವಭಾಗ ಬಳಿ ಇರುವ  ಕೆನರಾ ಕ್ಲಬ್ ನಿಂದ ಮನೆಗೆ ಹೋಗುವರೇ  ಕೆನರಾ ಕ್ಲಬ್ ನ ಹಿಂಬದಿ ದ್ವಾರದಿಂದ ಹೊರಗೆ ಬರುತ್ತಾ ಇದ್ದಾಗ  ಪಿರ್ಯಾದಿದಾರರ ಪರಿಚಯದ ಡಾ|| ಭುಜಂಗ ಶೆಟ್ಟಿ ಪಿರ್ಯಾದಿದಾರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ "ನೀನು ಈ ಹಿಂದೆ ಅಧ್ಯಕ್ಷನಾಗಿದ್ದಾಗ ನನ್ನನ್ನು ಕೆನರಾ ಕ್ಲಬ್ ನಿಂದ ಸಸ್ಪೆಂಡ್ ಮಾಡಿಸಿದ್ದಿ" ಎಂದು ಅವಾಚ್ಯವಾಗಿ ಬೈದು ಪಿರ್ಯಾದಿದಾರರ ಎಡಕೈಯನ್ನು ಬಲವಾಗಿ ಎಳೆದು ಕೈಯಿಂದ ಗುದ್ದಿ ಹಲ್ಲೆ ನಡೆಸಿದಲ್ಲದೇ "ನಿನನ್ ಯಾನ್ ತೂಪೆ" ಎಂದು ತುಳು ಭಾಷೆಯಲ್ಲಿ ಬೆದರಿಸಿ ಅಲ್ಲಿಗೆ ಕ್ಲಬ್ ನ ಸದಸ್ಯರಾದ ಶರಣ್ ಶೆಟ್ಟಿ ಮತ್ತು ಇತರರು ಬರುವುದನ್ನು ಕಂಡು ಭುಜಂಗ ಶೆಟ್ಟಿ ಪಿರ್ಯಾದಿದಾರರನ್ನು ಉದ್ದೇಶಿಸಿ " ನಿನ್ನನ್ ಯಾನ್ ಕೆರೆಂದೆ ಬುಡ್ಪುಜಿ" ಎಂದು ತುಳು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿರುತ್ತಾನೆ.

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-15 ರಂದು ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರು ತನ್ನ ಮಾವ ದಯಾನಂದರವರ ಪಾರ್ಟಿ ಇದೆಯೆಂದು ತನ್ನ ಸ್ನೇಹಿತನಾದ  ಪ್ರೀತೇಶ್ ಎಂಬವರೊದಿಗೆ ಇಂಚರ ಬಾರ್ & ರೆಸ್ಟೊರೆಂಟ್ ಗೆ ತೆರಳಿದ್ದು ಅಲ್ಲಿ ಪಿರ್ಯಾದಿಯ ಮಾವ ಹಾಗೂ 4 ಜನ ಅವರ ಸ್ನೇಹಿತರು ಊಟ ಮಾಡಿಕೊಂಡಿದ್ದು ಪಿರ್ಯಾದಿರರು ಅವರೊಂದಿಗೆ ಕುಳಿತು ಊಟ ಮಾಡಿಕೊಂಡಿದ್ದ ಸಮಯ ಪಿರ್ಯಾದಿಯ ಮಾವ ಮತ್ತು ಅವರ 4 ಜನ ಸ್ನೇಹಿತರಿಗೆ ಯಾವುದೋ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ದ್ವೇಷದಿಂಧ ಸ್ನೇಹಿತರು ಹೊರಟು ಹೋಗಿದ್ದು ನಂತರ ರಾತ್ರಿ 10-00 ಗಂಟೆ ಸಮಯಕ್ಕೆ ಊಟ ಮುಗಿಸಿ ಬಿಲ್ಲನ್ನು ನೀಡಿ ಬಾರ್ ನ 1 ನೇ ಮಹಡಿಯಿಂದ ಕೆಳಗೆ ಬರುತ್ತಿರುವಾಗ ದಯಾನಂದರವರ ಸ್ನೇಹಿತರು ಸೇರಿ ಪಿರ್ಯಾದಿ, ಅವರ ಸ್ನೇಹಿತ ಪ್ರೀತೆಶ್ ಮತ್ತು ಮಾವ ದಯಾನಂದರವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ "ನೀನು ಬಾರಿ ದೊಡ್ಡ ಜನನ " ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ದೂಡಿ ಹಾಕಿ ಪಿರ್ಯಾದಿ ಮಾವ ದಯಾನಂದ ರವರಿಗೆ ಚಾಕುವಿನಿಂದ ತಿವಿದು ಓಡಿ ಹೋಗಿರುತ್ತಾರೆ. ಚಾಕುವಿನಿಂದ ತಿವಿದ ಮತ್ತು ಇತರರು ಕೈಯಿಂದ ಹೊಡೆದ ಪರಿಣಾಮ ಪಿರ್ಯಾದಿ ಮಾವ ದಯಾನಂದರವರಿಗೆ ಹೊಟ್ಟೆಗೆ, ಕಿಬ್ಬೊಟ್ಟೆಗೆ, ತಲೆಗೆ, ಕೈಗಳಿಗೆ  ತೀವೃತರದ ರಕ್ತಗಾಯವಾಗಿರುವುದಾಗಿದೆ.

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಪಾಲ್ ಗೋವಿಯಸ್ ರವರು  ತನ್ನ  ಮಗ  ಸ್ಟಾನಿ ಗೋವಿಯಸ್‌‌ರೊಂದಿಗೆ ದಿನಾಂಕ 28.01.2015  ರಂದು  ಬೆಳಿಗ್ಗೆ 8:05  ಗಂಟೆಗೆ ಅತ್ತೂರು  ವಾರ್ಷಿಕ ಹಬ್ಬಕ್ಕೆ ಕಾರ್ಕಳದ ಅತ್ತೂರಿನಲ್ಲಿ  ಸಂಬಂದಿಕರ ಮನೆಯಲ್ಲಿರುವಾಗ  ಪಿರ್ಯಾದಿದಾರರ  2  ನೇ  ಮಗಳಾದ  ಜಾನೆಟ್‌  ಎಂಬವಳು  ದೂರವಾಣಿ  ಮಾಡಿ  ಮನೆಯಲ್ಲಿದ್ದ  ಅಮ್ಮ  ಪೋನ್‌  ತೆಗೆಯುದಿಲ್ಲ  ಎಂದು  ಹೇಳಿದ್ದುಆಗ  ಮಗ ಸ್ಟಾನಿ  ಕೂಡಾ ಮನೆಗೆ ದೂರವಾಣಿ  ಮಾಡಿದಾಗ  ತಾಯಿ  ಪೋನ್ತೆಗೆಯದಿರುವುದನ್ನು ನೋಡಿ  ಹತ್ತಿರದ ಮನೆಯವರಿಗೆ ತಿಳಿಸಿ  ಅವರ  ಮೂಲಕ  ಪರಿಶೀಲನೆ  ಮಾಡಿಸಿದಾಗ  ಹೆಂಡತಿ  ಲಿಲ್ಲಿ  ಗೋವಿಯಸ್‌  ಅಡುಗೆ ಮನೆಯಲ್ಲಿ  ನೇಣು  ಬಿಗಿದು  ನೇತಾಡುತ್ತಿದ್ದಮಾಹಿತಿ  ತಿಳಿದು  ಮನೆಗೆ ಬಂದು  ನೋಡಿದ್ದಾಗಿಯು  ಪಿರ್ಯಾದಿದರರ  2ನೇ  ಮಗ  ಡಾಲ್ಪಿ  ಗೋವಿಯಸ್‌  ಪಿರ್ಯಾದಿದಾರರಲ್ಲಿ  ಸ್ಟಾನಿಯಲ್ಲಿ , ಮತ್ತು  ತಾಯಿಯಲ್ಲಿ  ಹಲವಾರು  ಸಲ ಹೊಡೆದಾಡಿ  ಒಂದು  ವರ್ಷದ ಒಳಗೆ  ನಿಮ್ಮ  ಮೂವರಲ್ಲಿ  ಒಬ್ಬರನ್ನು  ಕೊಲೆ ಮಾಡುತ್ತೆನೆ  ಎಂದು  ಜೀವ ಬೆದರಿಕೆ ಹಾಕಿದ್ದಾನೆ  ಎಂದುಆತನೇ  ದಿನಾಂಕ 28.01.2015  ರಂದು  ಬೆಳಿಗ್ಗೆ 8:45  ಗಂಟೆಯಿಂದ  ಮದ್ಯಾಹ್ನ  1:45  ಗಂಟೆ ನಡುವೆ ಪಿರ್ಯಾದಿದಾರರ  ಹೆಂಡತಿ  ಲಿಲ್ಲಿ  ಗೋವಿಯಸ್ಳನ್ನು  ಕೊಲೆ  ಮಾಡಿ  ಹೆಣವನ್ನು  ನೇತಾಡಿಸಿದ್ದಾನೆ ಎಂದು ಪಿರ್ಯಾದಿ ನೀಡಿರುವುದಾಗಿದೆ.

6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2015ರಂದು ಪಿರ್ಯಾಧಿದಾರರಾದ ಶ್ರೀ ರಾಮ ಕೆ.ಶೆಟ್ಟಿ ಯವರು ತನ್ನ ಮಿತ್ರರಾದಂತಹ ಧನಂಜಯ ಪೂಜಾರಿಯವರೊಂದಿಗೆ ತನ್ನ ಮನೆಯಿಂದ ಮೋಟಾರು ಸೈಕಲು ನಂಬ್ರ ಕೆಎ-19-3859ನೇದರಲ್ಲಿ ಹೊರಟು ಚೇಳಾರು ಎಂಬಲ್ಲಿ ನಡೆಯುತಿದ್ದ ಯಕ್ಷಗಾನವನ್ನು ನೋಡಿ ಮರಳಿ ಮನೆಯ ಕಡೆಗೆ ಬರುತ್ತಾ ರಾತ್ರಿ 10:30 ಗಂಟೆಗೆ ಮುಕ್ಕ ಜಂಕ್ಷನ್ ಬಳಿಗೆ ತಲುಪಿದಾಗ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಲಾರಿ ನಂಬ್ರ ಎಪಿ-31-ಟಿ.ಸಿ-0549ನೇಯದನ್ನು ಅದರ ಚಾಲಕ ಮಲ್ಲಿಕಾರ್ಜುನ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ಪಿರ್ಯಾಧಿದಾರರಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರುಗಳು ರಸ್ತೆಗೆ ಬಿದ್ದು, ಪಿರ್ಯಾಧಿದಾರರ ತಲೆಗೆ ಅಲ್ಪ ತರದ ಗಾಯವಾಗಿ, ಧನಂಜಯರವರ ಎಡ ಕೈಗೆ ಗಾಯವಾಗಿದ್ದು, ಈ ಬಗ್ಗೆ  ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2015 ರಂದು ಸಂಜೆ 05-00 ಗಂಟೆಗೆ ಚೊಕ್ಕಬೆಟ್ಟು-ಕಾನ ಬಳಿ ಫಿರ್ಯಾದಿದಾರರಾದ ಶ್ರೀ ಮಹೇಂದ್ರ ರವರ ಜೊತೆಯಲ್ಲಿ ಅವರ ತಮ್ಮನಾದ ಕೃಷ್ಣ ಎಂಬವರು ರಸ್ತೆ ದಾಟುತ್ತಿರುವಾಗ ಎಮ್ ಆರ್ ಪಿ ಎಲ್ ರಸ್ತೆಯ ಕಡೆಯಿಂದ ಸುರತ್ಕಲ್ ಕಡೆಗೆ ಕೆ ಎ- 19 - 8375 ನೇ ನಂಬ್ರದ ಅಟೋರಿಕ್ಷಾವನ್ನು ಅದರ ಚಾಲಕ ಅಬ್ದುಲ್ ರೆಹಮಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೃಷ್ಣನಿಗೆ ಡಿಕ್ಕಿಹೊಡೆದ ಪರಿಣಾಮವರು ರಸ್ತೆಗೆ ಬಿದ್ದು, ಗಂಭೀರ ರೀತಿಯಲ್ಲಿ ತಲೆಗೆ, ಎಡಭಾಗದ ಕೆನ್ನೆಗೆ ರಕ್ತ ಗಾಯವಾಗಿ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-12-2014 ರಂದು 11-00 ಗಂಟೆಯಿಂದ 12-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಫಳ್ನೀರ್ ಶಿವಾಲಿ ಆರ್ಕೇಡ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಲೂಡ್ರಿಕ್ ಎಂಟರ್ ಪ್ರೈಸಸ್ ಕಂಪನಿಯ ಬಾಬ್ತು 2010 ನೇ ಮೋಡಲ್ ನ, ಸಿಲ್ವರ್ ಬಣ್ಣದ ಅಂದಾಜು ರೂಪಾಯಿ 40,000/- ಬೆಲೆ ಬಾಳುವ ಕೆ. 19 .ಬಿ 4822 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ದ್ಚಿ ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ಚಿಚಕ್ರ ವಾಹನವನ್ನು ಈವರೆಗೂ ಆಸುಪಾಸಿನಲ್ಲಿ ಹಾಗೂ ಇತರ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಕಳವಾದ ವಾಹನದ ಬಗ್ಗೆ ಕಂಪನಿಯ ಮಾಲಕರಾದ ರೊಯಿ ರೋಡ್ರಿಗಸ್ ಇವರಲ್ಲಿ ಚರ್ಚಿಸಿ ದಿನಾಂಕ 28-01-2015 ರಂದು ದೂರು ನೀಡಿರುವುದಾಗಿದೆ.

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 28-1-2015 ರಂದು ಫಿರ್ಯಾದಿದಾರರಾದ ಶ್ರೀ ವಿಲ್ಸನ್ಫೆರ್ನಾಂಡೀಸ್ ರವರು ತನ್ನ ಬಾಬ್ತು ಹೊಸ ಯಮಹ ಎಫ್ಝಡ್ಎಸ್ (ಇಂಜಿನ್ ನಂ. 21ಸಿಜೆ056767 ಮತ್ತು ಚೇಸಿಸ್ ನಂ.ಎಂಇ121ಸಿಒಜೆಎಇ2056702) ನೇ ಮೋಟಾರು ಸೈಕಲಿನಲ್ಲಿ ಬೆಳಿಗ್ಗೆ ತೊಕ್ಕೊಟಿನಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 8-20 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ನಾಗನಕಟ್ಟೆ ಎಂಬಲ್ಲಿಗೆ ತಲುಪುವಾಗ್ಗೆ ಅವರ ಎದುರುಗಡೆಯಿಂದ ಕೆಎ-19-ಬಿ-7287 ನೇ ಟಿಪ್ಪರ್ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೋ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಫಿರ್ಯಾದಿದಾರರ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಎಡ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿ ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ತೊಕ್ಕೊಟು ಸಹರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2015 ರಂದು ಫಿರ್ಯಾದಿದಾರರಾದ ಶ್ರೀ ಜಯಂತ್ ರವರು ಎಂದಿನಂತೆ ಮರೋಳಿಯಲ್ಲಿರುವ ವಾಟರ್ ಟೆಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಮನೆಗೆ ಹೋಗುವಾಗ ಸುಮಾರು 6.40 ಗಂಟೆಗೆ ಪಿರ್ಯಾದಿದಾರರು ಕಾಂತರಬೆಟ್ಟು ಮಜಲು ಬಳಿ ತಲುಪಿದಾಗ ಅಲ್ಲಿ ಹತ್ತಿರದ ಮೈದಾನದಲ್ಲಿ ಆಟ ವಾಡುತ್ತಿದ್ದ ಪಿರ್ಯಾದಿದಾರರಿಗೆ ಪರಿಚಯಸ್ಥರಾದ ಅಫ್ರಾನ್ ಮತ್ತು ಇನ್ನೊಬ್ಬ ಬಂದು ಏಕಾಏಕಾಯಿಯಾಗಿ  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ದಾರಿಗೆ ಅಡ್ಡನಿಂತು ಅಂಗಿಯನ್ನು ಎಳೆದು, ಕೈಯಿಂದ ಮುಖಕ್ಕೆ ಮತ್ತು ಎದೆಯ ಬಾಗಕ್ಕೆ ಹೊಡೆದ ಪರಿಣಾಮ ಪಿರ್ಯಾದುದಾರರ  ಎದೆಯ ಭಾಗಕ್ಕೆ ಗುದ್ದಿದ ನೋವು ಉಂಟು ಮಾಡಿರುವುದಲ್ಲದೇ ಇನ್ನೂ ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿರುವುದಾಗಿದೆ.

11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-01-2015 ರಂದು ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಅನಿಲ್ರಾಜ್ಎಂಬವರು ತನ್ನ ಹೊಸ ಡಿಸ್ಕವರಿ ಬೈಕನ್ನು ಸವಾರಿ ಮಾಡುತ್ತಾ ಹೊಟೇಲ್ಮೋತಿಮಹಲ್ಎದುರುಗಡೆ ಹೋಗುತ್ತಿದ್ದಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ ಬೈಕಿನ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದು ಫಿರ್ಯಾದಿದಾರರಿಗೆ ಗಾಯವಾಗಿದ್ದು ಅಲ್ಲದೇ ಬೈಕ್ಕೂಡಾ ಜಖಂಗೊಂಡಿದ್ದು ಸಾರ್ವಜನಿಕರು ಸೇರಿ, ಆರೈಕೆ ಮಾಡಿ ಮೋಟಾರು ಸೈಕಲನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬೈಕು ನಿಲ್ಲಿಸಿದ ಸ್ಥಳಕ್ಕೆ ರಾತ್ರಿ ಸುಮಾರು 11-00 ಗಂಟೆಗೆ ಹೋದಾಗ ಬೈಕು ಕಾಣಿಸದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಬೈಕ್ವಿವರ: ಹೊಸ ಬಜಾಜ್ಡಿಸ್ಕವರಿ ಮೋಟಾರು ಸೈಕಲ್ನೋಂದಣಿ ಸಂಖ್ಯೆ ಆಗಿರುವುದಿಲ್ಲ ಇಂಜಿನ್ನಂ. PAZWFK37156, ಚಾಸಿಸ್ನಂ. MD2A57BZ7FWK00013, ಮೋಡೆಲ್‌ 2015 ಬಣ್ಣಕಪ್ಪು ಮೌಲ್ಯ ರೂ. 45,000/-.

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.01.2015 ರಂದು ಸಂಜೆ 4.40 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಾದೇವಪ್ಪ ಹೂಗಾರ್ ರವರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎ-40-ಎಫ್-908 ನೇ ಕೆಎಸ್ಆರ್ಟಿಸಿ ಬಸ್ಸಿಗೆ ಮೇರಿ ಹಿಲ್ ಬಸ್ಸ್ ಸ್ಟಾಪನಲ್ಲಿ  ರೂಟ್ ನಂಬ್ರ: 19,  ಕೆಎ-19-ಡಿ-5665 ನೇ ಕೆನರಾ ಹೆಸರಿನ ಬಸ್ಸನ್ನು ಅದರ ಚಾಲಕರು ಮುಂದೆ ಹೋಗದಂತೆ ಅಡ್ಡ ನಿಲ್ಲಿಸಿ, ಕೆಎ-19-ಡಿ-5665 ನೇ ಬಸ್ಸಿನ ನಿರ್ವಾಹಕರು ಪಿರ್ಯಾದುದಾರರು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ಸಿನ ಮುಂದಿನ ಬಾಗಿಲ ಬಳಿಗೆ ಹೋಗಿ ಪಿರ್ಯಾದಿದಾರರ ಮೈ ಮೇಲೆ ಕೈ ಹಾಕಿ ಶರ್ಟ್‌‌ನ್ನು ಎಳೆದು ಶರ್ಟಿನ ಬಲ ಬದಿಯ ಜೇಬಿನಲ್ಲಿದ್ದ 2.000 ರೂಪಾಯಿ ಮತ್ತು ಮೂಬೈಲ್ ಪೋನನ್ನು ಎಳೆದುಕೊಂಡು ಇನ್ನೂ ಮುಂದಕ್ಕೆ ಇಲ್ಲಿ ಜನ ಹತ್ತಿಸಿದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್ಆರ್‌‌ಟಿಸಿ ಬಸ್ಸಿನ ಚಾಲಕರಾದ ಗುರುವಯ್ಯ ಮಠಪತಿ ಎಂಬವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.