Sunday, May 19, 2013

Daily Crime Incidents for May 19, 2013


ಅಪಘಾತ ಪ್ರಕರಣ

ಸುರತ್ಕಲ್ ಠಾಣೆ

  • ದಿನಾಂಕ: 17-05-13 ರಂದು ಪಿರ್ಯಾದಿದಾರರಾದ ಸವಿನ್ ಕುಮಾರ್ (26) ತಂದೆ: ಲೋಕನಾಥ ಕರ್ಕೇರ, ವಾಸ: ಸ್ಐಟ್ ನಂಬ್ರ 51, 2ನೇ ಬ್ಲಾಕ್ ಮೀನಕಳಿಯ  ಬೈಕಂಪಾಡಿ ಮಂಗಳೂರು ರವರು ತನ್ನ ಅಣ್ಣ ಕಿರಣ್ ಎಂಬವರ ಜೊತೆ ಕುಳಾಯಿ ಶೆಟ್ಟಿ ಐಸ್ ಕ್ರೀಂ ಬಳಿ ಇರುವ ವಜ್ರದುಂಬಿ ಹೊಟೇಲ್ ನಲ್ಲಿ ಊಟ ಮಾಡಿ ನಂತರ ಬೈಕಂಪಾಡಿ ಕಡೆಗೆ ಹೋಗುವರೇ ಬಸ್ಸಿಗಾಗಿ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವಾಗ ಅಪರಾಹ್ನ  ಸುಮಾರು 3-30 ಗಂಟೆಗೆ ಸುರತ್ಕಲ್ ಕಡೆಯಿಂದ ಕೆಎ-19-ಡಿ-4299 ನೇ ಕಾರನ್ನು ಅದರ ಚಾಲಕ ಶಬೀರ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಕಡೆಯಿಂದ ಬೈಕಂಪಾಡಿ ಕಡೆಗೆ ಬರುವ ಒಂದು ಲಾರಿಯನ್ನು ಅದರ ಎಡ ಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಪೂರ್ಣ ಎಡ ಬದಿಗೆ ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರ ಜೊತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಅಣ್ಣ ಕಿರಣ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ರವರ  ತಲೆಗೆ, ಭುಜಕ್ಕೆ , ರಕ್ತಗಾಯವಾಗಿದ್ದು ಚಿಕಿತ್ಸೆಗೆ ಅದೇ ಕಾರಿನಲ್ಲಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸವಿನ್ ಕುಮಾರ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಮೊ. ನಂ. 139/2013 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಟೋಪಣ್ಣ ಬಿ.ಟಿ (ಪ್ರಾಯ 30), ತಂದೆ ಬರ್ಮಪ್ಪ, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಮೇದೂರು ಅಂಚೆ ಮತ್ತು ಗ್ರಾಮ, ಹಿರೆಕೆರೂರು ತಾಲೂಕು, ಹಾವೇರಿ ಜಿಲ್ಲೆ ರವರು ಚಾಲಕರಾಗಿರುವ ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನೇಯದ್ದನ್ನು ನಿನ್ನೆ ದಿನ ದಿನಾಂಕ 17-05-2013 ರಂದು ಸಂಜೆ 5-30 ಗಂಟೆಗೆ ಟ್ಯಾಂಕರ್ನ್ನು ಪಿರ್ಯಾದಿದಾರರು ಬಾಡಿಗೆಗೆ ವಾಸವಿರುವ  ಹೊನ್ನಕಟ್ಟೆಯ ಮನೆಯ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಎದ್ದು ನೋಡಿದಾಗ ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಟ್ಯಾಂಕರ್ ಲಾರಿ ಅಲ್ಲಿ ಇರಲಿಲ್ಲ. ಕೂಡಲೇ ಅವರು ಅಲ್ಲಿ ಅಕ್ಕ-ಪಕ್ಕದವರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಲಿಲ್ಲ. ಹಾಗೂ ಈ ಬಗ್ಗೆ ಟ್ಯಾಂಕರ್ ಮಾಲಕರಿಗೆ ವಿಷಯ ತಿಳಿಸಿರುತ್ತಾರೆ. ದಿನಾಂಕ 17-05-25013 ರಂದು ಸಂಜೆ ಸುಮಾರು 5-30 ಗಂಟೆಯಿಂದ ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯೆ ಯಾರೋ ಕಳ್ಳರು ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನ್ನು ಕಳ್ಳತನ ಮಾಡಿರುವುದಾಗಿದೆ ಎಂಬುದಾಗಿ ಟೋಪಣ್ಣ ಬಿ.ಟಿ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ 140/2012 ಕಲಂ: 379  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದಿದಾರರಾದ ಕಾಶೀನಾಥ್ ರವರು ಮಂಗಳೂರು ದಕ್ಷಿಣ ದಕ್ಕೆಯಲ್ಲಿ ಬೋಟ್ ರಿಪೇರಿ ಕೆಲಸ ಮಾಡಿಕೊಂಡಿರುತ್ತಾರೆ ಈ ದಿನ ದಿನಾಂಕ 18-05-2013 ರಂದು  ಮಂಗಳೂರು ನಗರದ ಫ್ರೆಂಡ್ಸ್ ಬಾರ್ನ ಪಕ್ಕದ ಗೂಡ್ಸ್ ರೈಲ್ವೆ ನಿಲ್ದಾಣದ ಬಳಿಯ ದಂಡೆಯೊಂದರ ಬಳಿ ಜನ ಸೇರಿದ್ದು, ಅದನ್ನು ನೋಡಿದ ಫಿಯರ್ಾದುದಾರರು ಹೋಗಿ ನೋಡಿದಾಗ, ಸುಮಾರು 35 ರಿಂದ 40 ವರ್ಷ ಪ್ರಾಯದ ಒರ್ವ ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಸದ್ರಿ ವ್ಯಕ್ತಿಗಿದ್ದ ಯಾವುದೋ ಕಾಯಿಲೆಯಿಂದ ಯಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಕಾಶೀನಾಥ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 43/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಪ್ರಕಾಶ್ ರವರು   ದಿನಾಂಕ 18-05-2013 ರಂದು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಸುಮಾರು 13-30 ಗಂಟೆ ಸಮಯಕ್ಕೆ ವೆನ್ಲಾಕ್ ಅಸ್ಪತ್ರೆಯ ಆವರಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ, ದಿನಾಂಕ 17-05-2013 ರಂದು ಮಲೇರಿಯಾ ಖಾಯಿಲೆ ಬಗ್ಗೆ ಅಸ್ಪತ್ರೆಯಲ್ಲಿ ದಾಖಲಾಗಿ, ದಿನಾಂಕ 18-05-2013 ರಂದು ಬೆಳಿಗ್ಗೆ 6-00 ಗಂಟೆಗೆ ಕಾಣೆಯಾಗಿದ್ದ ಧರ್ಮ ಪ್ರಾಯ 38 ವರ್ಷ ಎಂಬವರಾಗಿದ್ದು, ಮೃತ ಧರ್ಮ ಎಂಬಾತನಿಗಿದ್ದ  ಮೆಲೇರಿಯಾ ಖಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಬೇರೆ ಯಾವುದೋ ಖಾಯಿಲೆಯಿಂದಾಗಿ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಪ್ರಕಾಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 44/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಶ್ರೀಮತಿ ಪುಷ್ಪ ರವರ ಅಕ್ಕನ ಮಗನಾದ ಸಂತೋಷ್ ಕುಮಾರ್ ಪ್ರಾಯ 36 ವರ್ಷ ರವರು ಮಂಗಳೂರಿನ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಟೆಂಡರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ತನ್ನ ಮನೆಯಾದ ಕುಂಬ್ಳೆಯಲ್ಲಿ ದಿನಾಂಕ 16-05-13 ರಂದು ತನ್ನ ಹೆಂಡತಿ ಶ್ರೀಮತಿ ಸುಕನ್ಯ ಜೊತೆ ಗಲಾಟೆ ಮಾಡಿ ಚಿಕ್ಕಮ್ಮನ ಮನೆಯಾದ ಜಪ್ಪು ಬಪ್ಪಾಲ್ಗೆ ಬಂದಿರುತ್ತಾರೆ. ಈ ದಿನ ದಿನಾಂಕ 18-05-13 ರಂದು ಸಂಜೆ ಸುಮಾರು 15-00 ಗಂಟೆಯ ವೇಳೆಗೆ ಮನೆಯಲ್ಲಿ ಫ್ಯಾನಿಗೆ ಶಾಲ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಗಂಡ ಹೆಂಡತಿಯ ನಡುವಿನ ಮನಸ್ತಾಪದಿಂದ ಬೇಸತ್ತುಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕುತ್ತಿಗೆಗೆ ನೇಣೂ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶ್ರೀಮತಿ ಪುಷ್ಪ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 45/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Saturday, May 18, 2013

Daily Crime Incidents For May 18, 2013


ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;

  • ದಿನಾಂಕ 17-05-13 ರಂದು ಫಿರ್ಯಾದುದಾರರ ಜೊತೆ ಕೆಲಸ ಮಾಡುವ ಲಚ್ಮಯ್ಯ ರವರು ರಾತ್ರಿ ಊಟ ಮಾಡಿ ಗುಡ್ಲಕ್ ಎಂಬ ಬೋಟಿನಲ್ಲಿಯೇ ಮಲಗಿದ್ದು, ರಾತ್ರಿ ಸುಮಾರು   11-30 ಗಂಟೆಗೆ ಯಾರೋ ನೀರಿಗೆ ಬಿದ್ದ ಶಬ್ದವಾದಾಗ ಫಿರ್ಯಾದುದಾರರು ಹಾಗೂ ಇತರರು ನೋಡಿದಲ್ಲಿ ತಮ್ಮ ಜೊತೆ ಮಲಗಿದ್ದ ಲಚ್ಮಯ್ಯ ರವರು ಕಂಡು ಬರಲಿಲ್ಲ. ಕೂಡಲೇ ಫಿರ್ಯಾದುದಾರರು ಹಾಗೂ ಇತರ ಇಬ್ಬರು ನೀರಿನಲ್ಲಿ ಮುಳುಗಿ ಹಿಡುಕಾಡಿದಲ್ಲಿ ಲಚ್ಮಯ್ಯ ರವರ ದೇಹ ನೀರಿನಲ್ಲಿ ಪತ್ತೆಯಾಗಿರುತ್ತದೆ. ಕೂಡಲೇ ಇವರನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ತಂದು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ  ಕರೆ ತಂದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಲಚ್ಮಯ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ  ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶವಾಗಿದೆ ಎಂಬುದಾಗಿ ನಶಿವಾನಂದ, ಪ್ರಾಯ: 27 ವರ್ಷತಂದೆ: ನಾಗಪ್ಪವಾಸ: ಮಾರೈನ್ ಮನೆ, ಮಾಯಿನ್ ಕುರುವೆ ಅಂಚೆ, ಬೆಳ್ನಿ ಗ್ರಾಮ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 42/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನೀರ್ಲಕ್ಷತನದಿಂದ ಗಾಯ;

ಬಜಪೆ ಠಾಣೆ;

  • ಫಿರ್ಯಾದಿದಾರರು ತನ್ನ ಶಾಲಾ ರಜಾ ಸಮಯದಲ್ಲಿ ಆರೋಪಿತರ ಬಾಬ್ತು ಮಂಗಳೂರು ತಾಲೂಕು, ಬಡಗ  ಎಕ್ಕಾರು ಗ್ರಾಮದ ಅರಸುಲೆ ಪದವು ಎಂಬಲ್ಲಿರುವ ಆರೋಪಿಗಳ ಬಾಬ್ತು ಶ್ರೀ ದುಗರ್ಾ ಇಂಡಸ್ಟ್ರೀಸ್  ಎಂಬ ಇಂಟರ್ ಲಾಕ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14-05-2013 ರಂದು ಮಧ್ಯಾಹ್ನ 1-00 ಗಂಟೆ ಸಮಯಕ್ಕೆ ಮಿಕ್ಸಿಂಗ್ ಮೆಷಿನ್ ನಲ್ಲಿ ಕೆಲಸ ಮಾಡುತಿರುವ ಸಮಯ ಅದರ ತಗಡು ವಿರುದ್ಧ ದಿಕ್ಕಿನಲ್ಲಿ ತಿರುಗಿದಾಗ ಅದನ್ನು ಸರಿಪಡಿಸಲು ಫಿರ್ಯಾದಿದಾರರು ಬಲಕೈ ಹಾಕಿದಾಗ, ಸದ್ರಿ ಮೆಷಿನ್ ನ ಬ್ಲೇಡ್ ಬಲಕೈಯ ಮಧ್ಯದ ಮೂರು ಬೆರಳಿಗೆ ತಾಗಿ ಬೆರಳುಗಳ ತುದಿಯ ಭಾಗ ತುಂಡಾಗಿದ್ದು, ಇದಕ್ಕೆ ಹಾಲಿ ಪ್ಯಾಕ್ಟರಿಯ ಮಾಲಕರಾದ ಮಹೇಶ್ ಮತ್ತು ಮೆನೇಜರ್ ಜಯಶೀಲ ಕಾಂಚನ್ ಎಂಬವರ ಕೆಲಸದ ಬಗ್ಗೆ ಕಾಮರ್ಿಕರ ಸುರಕ್ಷತೆಯ ಬಗ್ಗೆ ಕೈಗೆ ಧರಿಸಲು ಗ್ಲೌಸ್ ಮತ್ತಿತರ ಸಾಮಾಗ್ರಿ ನೀಡದೇ ನಿಲಕ್ಷ್ಯ ವಹಿಸಿರುವುದೇ ಕಾರಣ ಎಂಬುದಾಗಿ ಜೋಯೆಲ್ ಫೆನರ್ಾಂಡಿಸ್, 18 ವರ್ಷ, ತಂದೆಃ ರೊನಾಲ್ಡ್ ಫೆನರ್ಾಂಡಿಸ್, ವಾಸ: ಮಚ್ಚಾರು ಕೋಡಿ ಮನೆ, ಬಡಗ ಎಕ್ಕಾರು ಗ್ರಾಮ, ನೀರುಡೆ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 147/2013 ಕಲಂ: 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Friday, May 17, 2013

Daily Crime Incidents For May 17, 2013


ಕಳವು ಪ್ರಕರಣ:

ಪೂರ್ವ ಪೊಲೀಸ್ ಠಾಣೆ;

  • ದಿನಾಂಕ 16-05-2013 ರಂದು 11-50 ಗಂಟೆಯಿಂದ  12-45 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆ ಉ್ಪಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯ ಎದುರುಗಡೆ ಶಿ್ಭೂ. ನಾರಾಯಣ ಎಂಬ ಹೆಸರಿನ 15-9-472/1 ಡೋರ್,ನಂಬ್ರದ ಪಿರ್ಯಾದಿದಾರರಾದ ಶ್ರಿಮತಿ.ಮಮತ ಕೆ ಗಂಡ:ದಿ.ಕಮಲಾಕ್ಷ ಪ್ರಬಖ್ಪ್ಮ, ವಾಸ: ಆ.ಓಠ.15-9-472/1 ಶಿ್ಭೂ ನಾರಾಯಣ, ಸಿಟಿ ಆಸ್ಪತ್ರೆ ಎದುರುಗಡೆ, ಕದಿ ಬಾಬ್ತು ವಾಸ್ತವ್ಯದ ಮನೆಯ ಎದುರು ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡರಿಸಿ ಒಳ ಪ್ರವೇಶಿಸಿ ಮಾಸ್ಟರ್ ಬೆಡ್ರೂಮಿನ ಕಪಾಟಿನಿಂದ ವಿವಿಧ ನಮೂನೆಯ 12 ಳ  ಪವನ್ ಚಿನ್ನಾಭರಣ, ನಗದು ಹಣ ಉ್ಪ್ರ.20000/- ಹಾಗೂ ಸಾಮ್ಸಂಗ್ ಕಂಪನಿಯ ಮೊಬೈಲ್ ಸೆಟ್-1,  ಹೀಗೆ ಒಟ್ಟು 2,67,240/-ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರಿಮತಿ.ಮಮತ ಕೆ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.74/2013 ಕಲಂ. 454, 380 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ:

ಪೂರ್ವ ಪೊಲೀಸ್ ಠಾಣೆ;

  • ಫಿಯರ್ಾದಿದಾರರಾದ .ಪ್ರವೀಣ್ ಕುಮಾರ್ ಶೆಟ್ಟಿ, ಸೂಪರವ್ಶೆಜರ್ ಎ.ಜೆ.ಆಸ್ಪತ್ರೆ, ಕುಂಟಿಕಾನ, ಮಂಗಳೂರು ರವರು ಎ.ಜೆ ಆಸ್ಫತ್ರೆಯಲ್ಲಿ ಸೂಪರ್ವೈಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ದಿನಾಂಕ 20.04.2013 ರಂದು ಈ ಮೇಲೆ ತಿಳಿಸಿದ ಶ್ರೀಮತಿ ಶಮಾ  ಎಂಬುವರು ಸದ್ರಿ ಫಿಯರ್ಾದಿದಾರರು ಕೆಲಸ ನಿರ್ವಹಿಸುತ್ತಿರುವ ಎ.ಜೆ .ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ದಿನಾಂಕ:10.05.2013 ರಂದು ಚಿಕಿತ್ಸೆ ನೀಡಿದ್ದ ಹಣ ಆಸ್ಪತ್ರೆಯ ಬಿಲ್ ರ್ರೂ.79,851/-ವನ್ನು ಪಾವತಿಸದೇ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ ಪಿಯರ್ಾದಿದಾರರಿಗೆ ಹಣವನ್ನು ಪಾವತಿಸದೇ ಮೋಸ ಮಾಡಿರುವುದಾಗಿದೆ ಎಂಬುದಾಗಿ .ಪ್ರವೀಣ್ ಕುಮಾರ್ ಶೆಟ್ಟಿ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.75/2013 ಕಲಂ. 406 ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ದಕ್ಷಿಣ ಠಾಣೆ;


  • ಪಿರ್ಯಾದಿದಾರರಾದ ಗಿರೀಶ್ (27), ತಂದೆ: ಯು ಬಿ ಭಾಸಕರ, ವಾಸ: 3ನೇ ಕ್ರಾಸ್, ಸೂಟರ್ ಫೆಟೆ, ಮಂಗಳೂರು ರವರು ಕಟ್ಟಡದ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ನಿನ್ನೆ ದಿನ ದಿನಾಂಕ:15-05-2013 ರಂದು ರಾತ್ರಿ 10-00 ಗಂಟೆಗೆ  ಫಿರ್ಯಾದುದಾರರು ತನ್ನ ಗೆಳೆಯ ಅಮರನಾಥ ಎಂಬವರೊಡನೆ ಕೆಲಸ ಮುಗಿಸಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರ ನೆರೆಯ ಹಾಗೂ  ಪರಿಚಯದವರಾದ ಧಿರಜ್, ಅಜಿತ್, ಚೇತು, ಮಿಥುನ್, ಪ್ರದೀಪ್, ರಂಜಿತ್ ಹಾಗೂ ಸಚಿನ್ ಎಂಬವರು ತಡೆದು ನಿಲ್ಲಿಸಿ, ಅವರಲ್ಲಿ ಧೀರಜ್ ಎಂಬಾತನು ತನ್ನ ಮುಖಕ್ಕೆ ಮತ್ತು ಬೆನ್ನಿಗೆ, ಅಜಿತ್ ಮತ್ತು ಚೇತು ರವರು ತನ್ನ ಶರೀರದ ಅಲ್ಲಲ್ಲಿ ಕೈಯಿಂದ ಹೊಡೆದುದಾಗಿಯೂ, ಅವರೊಂದಿಗೆ ಇದ್ದ ಮಿಥುನ್, ಪ್ರದೀಪ್ ಮತ್ತು ಸಚಿನ್ ಹಾಗೂ ರಂಜಿತ್ ರವರು ಬೇವಸರ್ಿ ರಂಡೇ ಮಕ್ಕಳೇ ನಿಮಗೆ ಬಾರೀ ಹಾಂಕರನ  ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದುದಾಗಿಯೂ. ಇದರಿಂದ ಹೆದರಿದ ತಾವು ಬೊಬ್ಬೆ ಹಾಕಿದಾಗ ಅವರು ಅಲ್ಲಿಗೆ ಬರುವ ಜನರನ್ನು ಕಂಡು ಹೊರಟು ಹೋಗಿರುತ್ತಾರೆ. ಅಲ್ಲದೇ ಹೋಗುವ ಸಮಯ ಬ್ಯಾವಸರ್ಿ ರಂಡೆ ಮಕ್ಕಳೇ ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಘಟನೆ ನಡೆಯುವ ಸಮಯ ರಾತ್ರಿ 10.00 ಗಂಟೆಯಾಗಿದ್ದು, ಅವರುಗಳನ್ನು ಉರಿಯುವ ದಾರಿದೀಪದ ಸಹಾಯದಿಂದ ನೋಡಿರುವುದಾಗಿಯೂ, ಆರೋಪಿಗಳು ಈ ಹಿಂದೆ ಅವರುಗಳ ಮೋಟಾರು ಸೈಕಲ್ಗಳನ್ನು ಸೂಟರ್ಪೇಟೆಯ ಪರಿಸರದಲ್ಲಿ ಅತೀ ವೇಗವಾಗಿ ಚಲಾಯಿಸಿದ್ದನ್ನು ಕಂಡ ಬಗ್ಗೆ ತಾವು ಹೇಳಿದ್ದರಿಂದ ಪೂರ್ವದ್ವೇಶದಿಂದ ಈ ಕೃತ್ಯ ವೆಸಗಿರುವುದಾಗಿದೆ ಎಂಬುದಾಗಿ ಗಿರೀಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ   ಮೊ.ನಂ.134/13 ಕಲಂ143, 147, 341, 323, 504, 506 ಡಿ/ತಿ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Thursday, May 16, 2013

Daily Crime Incidents For May 16, 2013


ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 15-05-13 ರಂದು  ರಾತ್ರಿ 10-00 ಗಂಟೆಗೆ ಅವರ ಪರಿಚಯದ ಬಸವರಾಜ್  ಎಂಬವರ ಜೊತೆಗೆ ಅವರ ಬಾಬ್ತು ಕೆಎ-19-ಇಬಿ-6510 ನೇ ಮೋಟಾರ್ ಸೈಕಲ್ಲಿನಲ್ಲಿ ಸಹಸವಾರರಾಗಿ ಕುಳಿತು ಸುರತ್ಕಲ್ನಿಂದ ಹೊಸಬೆಟ್ಟು ಕಡೆಗೆ ಹೋಗುತ್ತಾ ಹೊಸಬೆಟ್ಟು ಕೋರ್ದಬ್ಬು ದೈವಸ್ಥಾನದ ಹತ್ತಿರ ತಲುಪಿದಾಗ ಅವರ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಒಂದು ಪಿಕಪ್ ವಾಹನವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸಹಸವಾರಾಗಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಪಡಿಸಿ ಪಿಕಪ್ ವಾಹನ ಚಾಲಕ ಪಿಕಪ್ನ್ನು ನಿಲ್ಲಿಸದೇ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಅಪಘಾತದ  ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಪಿರ್ಯಾದಿದಾರರಿಗೆ ತೀವ್ರ ತರದ ಗಾಯ ಹಾಗೂ ಬಸವರಾಜುರವರಿಗೆ ಕೂಡಾ ತೀವ್ರ ತರದ ಗಾಯವಾಗಿದ್ದು ಬಳಿಕ ಅಲ್ಲಿ ಸೇರಿದವರು ಪಿರ್ಯಾದಿದಾರರನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಲ್ಲದೇ ಗಾಯಾಳು ಬಸವರಾಜ್ರವರನ್ನು  ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ ವಿಚಾರ ತಿಳಿದಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ ಎಂಬುದಾಗಿ ಗಂಗಾಧರ ಎಚ್ (51) ವಾಸ: ಹೊಸಬೆಟ್ಟು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 133/2013 ಕಲಂ: 279-338-304 (ಎ) ???ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




  • ದಿನಾಂಕ 14-05-13 ರಂದು  ಅವರ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-19-ಡಿ-1324 ನೇದನ್ನು ಚಲಾಯಿಸುತ್ತಾ ಹೊನ್ನಕಟ್ಟೆ ಬಸ್ ಸ್ಟಾಪ್ ಬಳಿಯಿಂದ ಕುಳಾಯಿ ಗುಡ್ಡೆ ಕಡೆಗೆ ಹೊಗುವರೇ ಮಂಗಳೂರು-ಸುರತ್ಕಲ್ ರಾ ಹೆ 66ರ ರಸ್ತೆಯನ್ನು ದಾಟುವರೇ ಸಂಜೆ 6-30 ಗಂಟೆಗೆ ರಸ್ತೆಯ ಎಡಬದಿಯಲ್ಲ ರಿಕ್ಷಾ ನಿಲ್ಲಿಸಿದ್ದ ಸಮಯ ಮಂಗಳೂರು ಕಡೆಯಿಂದ ಲಾರಿ ನಂಬ್ರ ಕೆಎ-29-9373 ನೇದನ್ನು ಅದರ ಚಾಲಕ ಪ್ರಕಾಶ್ ಹೊಸಮನಿ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷ್ಕಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಿಕ್ಷಾದಿದಂದ ಹೊರಗೆ ಎಸೆಯಲ್ಪಟ್ಟು ಅವರಿಗೆ ತಲೆಗೆ ಹಾಗೂ ಬುಜಕ್ಕೆ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದವರು ಹಾಗೂ ಲಾರಿಯ ಚಾಲಕರು ಮತ್ತು ಜಾಯ್ಸನ್ ಎಂಬವರು ಪಿರ್ಯಾದಿದಾರರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬುದಾಗಿ ಸಿರಿಲಲ್ ಅಲೆಕ್ಸಾಂಡರ್ ಮಿನಿಜಸ್  ಪ್ರಾಯ ಃ 55 ವರ್ಷ ತಂದೆಃ ಮೌರಿಸ್ ಮಿನೇಜಸ್  ವಾಸ್ಷ ಪಾತಿಮಾ ಮಂದಿರದ ಬಳಿ ವಿದ್ಯಾನಗರ ಕುಳಾಯಿ ಮಂಗಳೂರು ರವರು ನೀಡಿದ ದುರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 134/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 15-05-13 ರಂದು ಕಾವೂರಿನಿಂದ ರೂಟ್ ನಂಬ್ರ 13-ಎ ನೇ ಕೆಎ-07-5527 ನೇ ನಂಬ್ರದ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಾ ಅಪರಾಹ್ನ 14-40 ಗಂಟೆಗೆ ಕುಳಾಯಿಯ ಶೆಟ್ಟಿ ಐಸ್ಕ್ರೀಂ ಬಳಿ ಬಸ್ಸಿನ ಚಾಲಕ ಅಮನ್ರವರು ಪ್ರಯಾಣಿಕರನ್ನು ಇಳಿಸುವರೇ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಇಳಿಯುತ್ತಿರುವಾಗ ಅದರ ಕಂಡಕ್ಟರ್ ಚಾಲಕರಿಗೆ ಯಾವುದೇ ಸೂಚನೆಯನ್ನು ನೀಡುವ ಮೊದಲೇ ಚಾಲಕ ಬಸ್ಸನ್ನು ಒಮ್ಮೇಲೇ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಸದ್ರಿ ಬಸ್ಸಿನಿಂದ ಇಳಿಯುತ್ತಿದ್ದ ಪಿರ್ಯಾದಿದಾರರ ಪರಿಚಯದ ಮೈನೂಲ್ ಅಹ್ಮದ್ ಲಾಸ್ಕರ್ ಎಂಬವರು ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಯ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದು ಬಸ್ಸಿನಲ್ಲಿದವರು ಬೊಬ್ಬೆ ಹಾಕಿದಾಗ ಚಾಲಕ ಬಸ್ಸನ್ನು ನಿಲ್ಲಿಸಿದ್ದು ನೋಡಲಾಗಿ  ಆತ ತಲೆಗೆ ಗಂಬೀರ ಸ್ವರೂಪದ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಗಿದೆ ಎಂಬುದಾಗಿ ಅಬ್ದುಲ್ ಖಾದರ್ ಪ್ರಾಯ ಃ 36 ವರ್ಷ ತಂದೆ: ಡಿ.ಹೆಚ್ ಬಾವಾ  ವಾಸಃ ಮುಂಚೂರು ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಶ್ರೀನಿವಾಸ ನಗರ ಅಂಚೆ  ಚೇಳಾರು ಗ್ರಾಮ  ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 136/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ;


  • ದಿನಾಂಕ: 15-05-13 ರಂದು 21-15 ಗಂಟೆಗೆ ಬೈಕಂಪಾಡಿ ಜಂಕ್ಷನ್ ಬಳಿ ಮುಬಾರಕ್ ಹೋಟೇಲಿನ ಎದುರು ರಾ ಹೆ ಎಡಬದಿ ನಿಂತುಕೊಂಡಿರುವಾಗ ಪಣಂಬೂರು ಕಡೆಯಿಂದ ಕೆಎ-19/ಡಿ9097 ಕಂಟೈನರನ್ನು ಅದರ ಚಾಲಕ ಗೋಪಾಲ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಹಣೆಗೆ ಮೂಗಿಗೆ ಶರೀರದ ಮೇಲೆ ತರಚಿದ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಬೆಲೆರಿಯನ್ 35 ತಂದೆ: ಪಾಡ್ರಿಕ್ ಕಿಡುವು ನಾವ್ಗಾಂವ್ ಮುಂಗಾಟ್ ಡೋಲಿ ಸುಂದರಘಡ್ ಒರಿಸ್ಸಾ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ ಮೊ ನಂ: 76/13 ಕಲಂ: 279-337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ.

Wednesday, May 15, 2013

Daily Crime Incidents for May 15, 2013


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ


  • ಪಿರ್ಯಾದಿದಾರರಾದ ಸರ್ಫರಾಜ್ (25), ತಂದೆ: ಇಬ್ರಾಹಿಂ, ವಾಸ: ಕಮರ್ಾರು ಮನೆ, ಅಡ್ಯಾರ್ ಅಂಚೆ, ಮಂಗಳೂರು ರವರು ಆಟೊ ಚಾಲಕರಾಗಿ ದುಡಿಯುತ್ತಿದ್ದು, ಈದಿನ ದಿನಾಂಕ  14-05-2013 ರಂದು ಬೆಳಿಗ್ಗೆ 10-30 ಗಂಟೆಗೆ ವೆಲೆನ್ಸಿಯ ಸರ್ಕಲ್ನ  ಕೆನರಾ ಬ್ಯಾಂಕ್ ಬಳಿಯಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡುವ ಸಮಯದಲ್ಲಿ, ಪಿರ್ಯಾದಿದಾರರ ಪರಿಚಯದ ಕೆಎ 19 ಸಿ 8695 ನೇ ಆಟೊ ಚಾಲಕರಾದ ಆರೋಪಿ ಲತೀಪ್ ಎಂಬಾತನು ಅಲ್ಲಿಗೆ ಬಂದಿದ್ದು, ಆತನಲ್ಲಿ ಪಿರ್ಯಾದಿದಾರರು ವಿನಾ: ಕಾರಣ ಶಾಂತಿ ನಗರದ ಅನ್ವರ್ ಎಂಬವರಲ್ಲಿ ನಿನ್ನೆ ದಿನ ಗಲಾಟೆ ಮಾಡಿದ್ದೀಯಾ ಎಂದು ಕೇಳಿದಾಗ, ಆರೋಪಿ ಲತೀಪನು ಏಕಾಏಕಿ ತನ್ನ ಆಟೊದಿಂದ ಇಳಿದು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ  ನಾಯಿಂಡೆ ಮೋನೆ ಸೂಳೆಡೆ ಮೋನೆ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಆಟೊದಿಂದ ಎಳೆದು ಹೊರಗೆ ಹಾಕಿ ಕೈಗಳಿಂದ ಮುಖಕ್ಕೆ  ಹೊಡೆದಾಗ ಏಕೆ ಸುಮ್ಮನೆ ಹೊಡೆಯುತ್ತೀಯಾ ಎಂದು ಪಿರ್ಯಾದಿದಾರರು ಕೇಳಿದಾಗ, ನೀನು ಸಹ ಅನ್ವರ್ಗೆ ಸಪೋಟರ್್ ಮಾಡುತ್ತೀಯಾ ಎಂದು ಹೇಳಿ ಅಲ್ಲೇ ಬಿದ್ದಿದ್ದ ಒಂದು ಕಲ್ಲಿನಿಂದ ಪಿರ್ಯಾದಿದಾರರಿಗೆ ಹೊಡೆದಾಗ ಪಿರ್ಯಾದಿದಾರರು ತಪ್ಪಿಸಿದಾಗ, ಆ ಕಲ್ಲು ಆರೋಪಿಯ ಆಟೊ ರಿಕ್ಷಾದ ಎದುರಿನ ಗ್ಲಾಸಿಗೆ ತಾಗಿ ಗ್ಲಾಸು ಹುಡಿಯಾಯಿತು. ಆರೋಪಿತರು ಇನ್ನೊಂದು ಕಲ್ಲಿನಿಂದ ಹೊಡೆದು ಪಿರ್ಯಾದಿದಾರರ ಆಟೊದ ಹಿಂಬದಿ ಗ್ಲಾಸನ್ನು ಹುಡಿಮಾಡಿದ್ದಲ್ಲದೇ, ನಂತರ ಪಿರ್ಯಾದಿದಾರರನ್ನು ಹಿಡಿದು ಎಳೆದಾಡಿ ಆರೋಪಿ ಪಿರ್ಯಾದಿದಾರರ ಎಡ ಕೈಗೆ ಕಚ್ಚಿ ರಕ್ತಗಾಯವನ್ನುಂಟು ಮಾಡಿರುವುದಲ್ಲದೇ, ಇನ್ನು ಮುಂದಕ್ಕೆ ತಂಟೆಗೆ ಬಂದರೆ ಜೀವ ಸಮೇತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸರ್ಫರಾಜ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ  ಮೊ.ನಂ.133/2013, ಕಲಂ 323, 325, 427, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ


  • ದಿನಾಂಕ   14-05-2013 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿದಾರರಾದ ಮಹಮ್ಮದ್ ಅಸ್ಲಂ ರವರು ಮಂಗಳೂರು ನಗರದ ಧಕ್ಕೆಯ ಪೋಟರ್್ ರೋಡ್ನ ಬಳಿ  ಇರುವಾಗ್ಗೆ ಪ್ರಾಯ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯು ರಸ್ತೆ ಬದಿಯಲ್ಲಿ  ಬಿದ್ದು ಕೊಂಡಿರುವುದನ್ನು ಕಂಡು, ಆತನನ್ನು ಸಾರ್ವಜನಿಕರ ಸಹಾಯದಿಂದ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಲ್ಲಿ, ಅಲ್ಲಿನ ವೈಧ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತನು ಯಾವುದೋ ಕಾಯಿಲೆಯಿಂದ ಯಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ಮೃತ ಪಟ್ಟಿರಬಹುದಾಗಿದೆ. ಆದುದರಿಂದ  ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಹಮ್ಮದ್ ಅಸ್ಲಂ ಪ್ರಾಯ 32 ವರ್ಷ, ಕೆ.ಪಿ.ಇಸ್ಮಾಯಿಲ್, ಎಮ್.ಜೆ.ಎಮ್. ನಂಬ್ರ 143 ಬೆಂಗ್ರೆ ಕಸಬಾ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 41/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 8-05-2013 ರಂದು 21-00 ಗಂಟೆಗೆ ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ , ಕಾಜಿಲ ಎಂಬಲ್ಲಿ ಗೂಡ್ಸ್ ವಾಹನ ನಂ: ಕೆಎ 13-2297  ರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೆಸ್ಕಾಂ ಗೆ ಸೇರಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಗೆ ಸುಮಾರು 27530/- ರೂಪಾಯಿ ನಷ್ಟವಾಗಿರುತ್ತದೆ ಎಂಬುದಾಗಿ ಜಗದೀಶ್ ಮೂತರ್ಿ, 57 ವರ್ಷ, ತಂದೆ: ದಿ: ದೇವಿರಾಚಾರ್, ಜೂನಿಯರ್ ಇಂಜಿನಿಯರ್, ಓ & ಎಂ. ಡಿವಿಜನ್, ಮೆಸ್ಕಾಂ, ಕೈಕಂಬ ಶಾಖೆ. ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 144/2013 ಕಲಂ:279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ: 14-05-2013 ರಂದು 10-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಕೈಕಂಬ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಸಿಲ್ವಿಯಾ ವೇಗಸ್, ಪ್ರಾಯ: 47 ವರ್ಷ, ಗಂಡ: ಲ್ಯಾನ್ಸಿ ವೇಗಸ್, ವಾಸ: ಸೈಂಟ್ ಆಂಟನಿ ಕಂಪೌಂಡ್, ಡೋರ್ ನಂ: 3-35/110, ಸಂತೋಷ್ ನಗರ, ಪಚ್ಚನಾಡಿ ಗ್ರಾಮ, ಮಂಗಳೂರು ಡಿತಡಿಣ ರಸ್ತೆ ಬದಿಯಲ್ಲಿ ನಿಂತಿದ್ದಾಗ, ಮೋಟಾರು ಸೈಕಲ್ ನಂ: ಕೆಎ 19 ಇಎಫ್ 5744 ನೇದರ ಸವಾರ ಮೋಟಾರು ಸೈಕಲನ್ನು ಕಿನ್ನಿಕಂಬಳ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಗೆ ಮತ್ತಿತರ ಕಡೆ ರಕ್ತ ಗಾಯವಾಗಿದ್ದು, ಗಾಯಾಳು ಚಿಕಿತ್ಸೆಯ ಬಗ್ಗೆ   ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಸಿಲ್ವಿಯಾ ವೇಗಸ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 145/2013 ಕಲಂ: 279, 337 ಐಪಿಸಿ ಮತ್ತು ಕಲಂ: 134(ಎ) &(ಬಿ) ಐಎಂವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



 ಕಾವೂರ್ ಠಾಣೆ


  • ದಿನಾಂಕ 13-05-2013 ರಂದು ಪಿರ್ಯಾದಿದಾರರಾದ ಲಕ್ಷೀನಾರಾಯಣ ಶೆಟ್ಟಿ (49 ವರ್ಷ), ತಂದೆ: ಸುಂದರ ಶೆಟ್ಟಿ, ವಾಸ: ಶ್ರೀ ದೇವಿ ಕೃಪಾ, ಶಿವನಗರ, ಮುಲ್ಲಕಾಡು, ಕಾವೂರು ಮಂಗಳೂರು ರವರು ತನ್ನ ಮನೆಯಿಂದ ಕಾವೂರು ಜಂಕ್ಷನ್ ಗೆ ತರಕಾರಿ ತರಲು ತನ್ನ ಬಾಬ್ತು ಕೆಎ-19-ಯು-5913 ನೇ ಮೋಟಾರು ಸೈಕಲಿನಲ್ಲಿ ರಾತ್ರಿ 7-30 ಗಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಾಸ್ಥಾನದ ಬಳಿ ತಲುಪಿದಾಗ ಕಾವೂರು ಕಡೆಯಿಂದ ಬಂದ ಕೆಎ-19-ಅರ್-8874 ನೇ ಮೋಟಾರು ಸೈಕಲ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಬಲಕಾಲಿನ ಪಾದದ ಬಳಿ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಲಕ್ಷೀನಾರಾಯಣ ಶೆಟ್ಟಿ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 104/2013 ಕಲಂ  279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, May 14, 2013

Daily Crime Incidents for May 14, 2013


ಅಪಘಾತ ಪ್ರಕರಣ

ಸುರತ್ಕಲ್ ಠಾಣೆ


  • ಪಿರ್ಯಾದಿದಾರರಾದ ಅಬ್ದುಲ್ ಖಾದರ್ ಪ್ರಾಯಃ 28 ವರ್ಷ ತಂದೆಃ ಹೆಚ್.ಎ. ಇದ್ದಿನಬ್ಬ ವಾಸಃ ಕೋಡಿಕೆರೆ ಹೌಸ್ ಕುಳಾಯಿ ಅಂಚೆ  ಮಂಗಳೂರು ರವರು ದಿನಾಂಕ 12-05-13 ರಂದು ಅವರ ಹೆಂಡತಿ ಅಸ್ಮಾ ಮತ್ತು ಮಗುವಿನ ಜೊತೆಗೆ ಅವರ ಬಾಬ್ತು ಹೋಂಡಾ ಆ್ಯಕ್ಟಿವಾ ನಂಬ್ರ ಕೆಎ-19-ಯು- 4403 ರಲ್ಲಿ ಕಾಟಿಪಳ್ಳದ ಸಂಬಂದಿಕರ ಮನೆಗೆ ಹೋಗಿದ್ದು ಅಲ್ಲಿಂದ ವಾಪಾಸ್ಸು ಕೈಕಂಬ ಸುರತ್ಕಲ್ ರಸ್ತೆಯಲ್ಲಿ ಬರುತ್ತಾ ಅಪರಾಹ್ನ 12-10 ಗಂಟೆಗೆ ಹೆಚ್ಪಿಸಿಎಲ್ ಗೇಟ್ ಬಳಿಗೆ ತಲುಪುತ್ತಿದ್ದಂತೆ ಎದುರು ಕಡೆಯಿಂದ ಅಂದರೆ ಸುರತ್ಕಲ್ ರಸ್ತೆಕಡೆಯಿಂದ ಕೈಕಂಬ ರಸ್ತೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ವಿ- 4732 ನೇಯದ್ದನ್ನು ಅದರ ಸವಾರ ವೆಂಕಟೇಶಕೆಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಹೆಚ್ಪಿಸಿಎಲ್ ಗೇಟ್ ಕಡೆಗೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಆ್ಯಕ್ಟಿವಾ ಹೋಂಡಾಕ್ಕೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಪಿರ್ಯಾದಿ ಹಾಗೂ ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಮೂಗಿಗೆ ಗಲ್ಲಕ್ಕೆ ತಲೆಗೆ ಗಾಯವಾಗಿದ್ದು ಪಿರ್ಯಾದಿದಾರರ ಹೆಂಡತಿ ಹಾಗೂ ಮಗುವಿಗೆ ಯಾವುದೇ ಗಾಯವಾಗಿರುವುದಿಲ್ಲ ಅಲ್ಲದೇ ಮೋಟಾರ್ ಸೈಕಲ್ ಸವಾರ ವೇಂಕಟೇಶರವರಿಗೆ ಕೂಡಾ ಗಾಯವಾಗಿರುತ್ತದೆ. ಬಳಿಕ ಪಿರ್ಯಾದಿದಾರರನ್ನು ಚಿಕಿತ್ಸೆಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಂದ ಹೆಚ್ಚಿನ ಚಿಕತ್ಸೆಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಅಬ್ದುಲ್ ಖಾದರ್  ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 132/2013 ಕಲಂ: 279-337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 12-05-2013 ರಂದು ರಾತ್ರಿ ಸುಮಾರು 11-45 ಗಂಟೆ ಸಮಯಕ್ಕೆ ಮಂಗಳೂರು ಸವರ್ೀಸ್ ಬಸ್ಸು ನಿಲ್ದಾಣದ ಒಳಗಡೆ ಫಿಯರ್ಾದುದಾರರಾದ ವಿಜಯಗಿರಿ ಮಹಾರಾಜ ಸ್ವಾಮೀಜಿ (56), ಗುರು, ಶ್ರೀ ರಾಮಗಿರಿ ಮಹಾರಾಜ ಕುಟೀರ ನಂಬ್ರ 3, ಕೈಕಂಬ ಆಶ್ರಮ, ಬದ್ರಿನಾಥ್ ಹಿಮಾಲಯ, ಚಾಮೋರಿ ಜಿಲ್ಲೆ, ಉತ್ತರಾಂಚಲ ರವರು ಕುಳಿತುಕೊಂಡಿದ್ದಾಗ, ಆರೋಪಿಗಳಾದ ಎರಡು ಜನ ಅಪರಿಚಿತ ವ್ಯಕ್ತಿಗಳು ಫಿಯರ್ಾದುದಾರರ ಬಳಿಗೆ ಬಂದು, ಫಿಯರ್ಾದುದಾರರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕೊಡುವರೇ ಕೇಳಿದಾಗ, ಫಿಯರ್ಾದುದಾರರು ನನ್ನ ಮೊಬೈಲ್ ಫೋನು ನಿಮಗೆ ಯಾಕೆ ಬೇಕು ಎಂದು ಕೇಳಿದಾಗ, ಆರೋಪಿಗಳ ಪೈಕಿ ಒಬ್ಬಾತನು ಫಿಯರ್ಾದುದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದಿದ್ದು, ನಂತರ ಆರೋಪಿಗಳು ಫಿಯರ್ಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಫಿಯರ್ಾದುದಾರರನ್ನು ಬೆದರಿಸಿ, ಅಪ್ರಮಾಣಿಕತನದಿಂದ ಅವರ ವಶದಲ್ಲಿದ್ದ ಮೊಬೈಲ್ ಫೋನ್ನ್ನು  ಬಲತ್ಕಾರದಿಂದ ಕಸಿದುಕೊಳ್ಳಲು  ಪ್ರಯತ್ನಿಸಿರುವುದಾಗಿದೆ. ಆರೋಪಿಯು ಫಿಯರ್ಾದುದಾರರಿಗೆ ಕೆನ್ನೆಗೆ ಹೊಡೆದ ಪರಿಣಾಮ ಫಿಯರ್ಾದುದಾರರಿಗೆ ನೋವು ಉಂಟಾಗಿದ್ದು, ಈ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ವಿಜಯಗಿರಿ ಮಹಾರಾಜ ಸ್ವಾಮೀಜಿ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ  ಮೊ.ನಂ.131/2013 ಕಲಂ  393, 504, 323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ


  • ದಿನಾಂಕ : 11-05-2013 ರಂದು 3-00 ಗಂಟೆಗೆ ಆರೋಪಿತರಾದ ದಿನೇಶ, ಹರೀಶ, ಸಂತೋಷ ಹಾಗೂ ಗೋಪಾಲ ನಾಯ್ಕ್ ಹಾಗೂ ಇತರ 6 ಜನ ಒಟ್ಟು ಸೇರಿ ಸಮಾನ ಉದ್ದೇಶಿತರಾಗಿ ಪಿರ್ಯಾದಿ ಜೋನ್‌ ಅಗಸ್ಟಿನ್‌ರವರನ್ನು ಕುರಿತು ಬೇವಾರ್ಸಿ ನೀನು ಕೇರಳದವನು ನಮ್ಮ ಊರಿನಲ್ಲಿ ಬಂದು ಗತ್ತು ತೋರಿಸುವುದು ಬೇಡ ಎಂಬಿತ್ಯಾದಿಯಾಗಿ ಅವಾಚ್ಯವಾಗಿ ಬೈದು ಇವರ ಪೈಕಿ ದಿನೇಶನು ಕೈಯಿಂದ ಹಲ್ಲೆ ಮಾಡಿ ದೂಡಿ ಹಾಕಿ ಕಾಲಿನಿಂದ ಒದ್ದುದಲ್ಲದೇ ಇತರರು ಕೈಗಳಿಂದ ಹಲ್ಲೆ ಮಾಡಿ ಪಿರ್ಯಾದಿದಾರರ ತಲೆಗೆ, ಹಣೆಗೆ, ಬೆನ್ನಿಗೆ, ಕೈಕಾಲುಗಳಿಗೆ ಗುದ್ದಿದ ನೋವು ಹಾಗೂ ತರಚಿದ ಗಾಯ ಉಂಟು ಮಾಡಿರುವುದಲ್ಲದೇ ಮನೆಯ ಗೇಟನ್ನು ಕಿತ್ತು ಬಿಸಾಡಿರುತ್ತಾರೆ. ಈ ಕೃತ್ಯಕ್ಕೆ ಪಿರ್ಯಾದಿಯ ಮನೆಯ ಪೈಂಟಿನ ಕೆಲಸದ ಲೆಕ್ಕಚಾರದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿರುವುದಾಗಿದೆ ಎಂಬುದಾಗಿ ಜೋನ್‌ ಅಗಸ್ಟಿನ್‌ (54) ತಂದೆ : ದಿ/ ಅಗಸ್ಟಿನ್‌, ವಾಸ : ಜೆ ಬಿ ಗಾರ್ಡನ್‌ , ಕೆಲ್ಲಪುತ್ತಿಗೆ  5 ಸೆಂಟ್ಸ್‌ ಕಾಲೋನಿ, ಧರೆಗುಡ್ಡೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾ ಅ.ಕ್ರ 103/2013 ಕಲಂ : 143, 147, 148, 323, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



  • ದಿನಾಂಕ : 11-05-2013 ರಂದು 15-00 ಗಂಟೆಗೆ ದರೆಗುಡ್ಡೆ ಗ್ರಾಮದ 5 ಕಾಲೋನಿ ಜೆ.ಪಿ ಗಾರ್ಡನ್ ಕೆಲ್ಲಪುತ್ತಿಗೆ ಎಂಬಲ್ಲಿ  ಆರೋಪಿ ಜೋನ್‌ ಅಗಸ್ಟಿನ್‌ ಎಂಬವರ   ಮನೆಯ ಪೈಂಟಿಗ್‌ ಗುತ್ತಿಗೆ ವಿಚಾರದಲ್ಲಿ ಪಿರ್ಯಾದಿದಾರರಾದ  ದಿನೇಶ, ಮತ್ತು ಪಿರ್ಯಾದಿಯ ತಮ್ಮನು ಕೇಳಲು ಹೋದಾಗ ಆರೋಪಿ ಜೋನ್‌ ಅಗಸ್ಟಿನ್‌ ಎಂಬಾತನು ಬೇವರ್ಸಿ ಬೊಳಿ ಮಗ ನೀನು ಭಾರಿ ಹಣ ಕೇಳುತ್ತಿಯ ಎಂದು ಮರದ ದೊಣ್ಣೆಯಿಂದ ಪಿರ್ಯಾದಿಯ ಕೈಗೆ ಹಾಗೂ ತಮ್ಮನ ಬಲ ಕಾಲಿಗೆ ಹೊಡೆದುದಲ್ಲದೇ ಪಿರ್ಯಾದಿಯ ಬೈಕಿನ ಡೂಮ್‌ಗೆ ಹೊಡೆದಿರುತ್ತಾನೆ ಎಂಬುದಾಗಿ ದಿನೇಶ (28), ತಂದೆ : ಕರುಣಾಕರ, ವಾಸ : ಪೂಜಾ ನಿವಾಸ, ಮೂಡುಮಾರ್ನಾಡು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 104/2013 ಕಲಂ : 324, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 

Monday, May 13, 2013

Daily Crime Incidents for May 13, 2013


ಅಪಘಾತ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 11-05-2013 ರಂದು 21-30 ಗಂಟೆಗೆ  ಫಿರ್ಯಾದಿದಾರರಾದ ನಾರಾಯಣ ಸಪಲಿಗ, 50 ವರ್ಷ, ತಂದೆ: ದಿ: ರಅಮ ಸಪಲಿಗ, ವಾಸ:ಬೀಬಿ ಲಚ್ಚಿಲ್ ಮನೆ, ಅದ್ಯಪಾಡಿ ಗ್ರಾಮ, ಮಂಗಳೂರು ತಾಲೂಕು ರವರು  ತನ್ನ ಮಿತ್ರನಾದ ಮಂಜುನಾಥ ಎಂಬವರ ಮೋಟಾರು ಸೈಕಲ್ನಲ್ಲಿ ಬಜಪೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಅವರ ಎದುರಿನಿಂದ  ಸುಧಾಕರನ್ ಎಂಬವರು ಅವರ ಬಾಬ್ತು ಮೋಟಾರು ಸೈಕಲ್ ನಂ:ಕೆಎ 19 ಕೆ 7163 ನೇದರಲ್ಲಿ ಕೈಕಂಬ ಕಡೆಗೆ ಹೋಗುತ್ತಿದ್ದು,   ಮಂಗಳೂರು ತಾಲೂಕಿನ ಪಡುಪೆರಾರ ಗ್ರಾಮದ ಬಲವಂಡಿ ದ್ವಾರದ ಬಳಿ ತಲುಪುತ್ತಿದ್ದಂತೇ ಎದುರಿನಿಂದ ಅಂದರೆ, ಕೈಕಂಬ ಕಡೆಯಿಂದ ಬಜಪೆ ಕಡೆಗೆ ಪಿಕ್ ಅಪ್ ವಾಹನ ನಂ: ಕೆಎ 19 ಡಿ 7744 ನ್ನು ಅದರ ಚಾಲಕರು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುಧಾಕರನ್ ರವರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ತರದ ಗಾಯವಾಗಿದ್ದು, ಗಾಯಾಳುವನ್ನು ಅದೇ ಪಿಕ್ ಅಪ್ ವಾಹನದಲ್ಲಿ ಕುಳ್ಳಿರಿಸಿ ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಯ ಕುರಿತು ಸಾಗಿಸಿದ್ದಲ್ಲಿ  ಸದ್ರಿಯವರು ರಾತ್ರಿ 22-10 ಗಂಟೆಗೆ ಮೃತಪಟ್ಟಿರುತ್ತಾರೆ ಎ<ಬುದಾಗಿ ನಾರಾಯಣ ಸಪಲಿಗ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 142/2013 ಕಲಂ: 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 12/05/2013 ರಂದು ಪಿರ್ಯಾದಿದಾರರಾದ ಗಣೇಶ್ ಶೆಟ್ಟಿ (26), ತಂದೆ: ಜಯರಾಮ ಶೆಟ್ಟಿ, ವಾಸ: ಗಂಡೊಟ್ಟು ಮನೆ, ಕೆಂಜಾರು ಅಂಚೆ, ಮಳವ್ರರು ಗ್ರಾಮ, ಮಂಗಳೂರು ತಾಲೂಕು ರವರು ತನ್ನಶಿಪ್ಟ್ ಕಾರು ನಂಬ್ರ ಕೆ.ಎ.19 ಎಂ.ವಿ.2496 ನೇಯದರಲ್ಲಿ ಕುಡುಪಿನಿಂದ ಕಟೀಲಿಗೆ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 3.30 ಗಂಟೆಗೆ ಪೆಮರ್ುದೆ ಗ್ರಾಮದ ಪೆಮರ್ುದೆ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಎದುರಿನಿಂದ ಬಂದ ಪಲ್ಸರ್ ಬೈಕ್ ನಂಬ್ರ ಕೆ.ಎ.19 ಇ.ಇ. 1819 ನೇಯದರ ಸವಾರನು ತನ್ನ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಗ್ಲಾಸ್, ಸೈಡ್ ಮಿರರ್, ಹಾಗೂ ಎರಡೂ ಡೋರ್ ಗಳು ಜಖಂ ಗೊಂಡಿರುತ್ತದೆ ಎಂಬುದಾಗಿ ಗಣೇಶ್ ಶೆಟ್ಟಿ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 143/13 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 


ಹಲ್ಲೆ ಪ್ರಕರಣ

ಕಾವೂರ್ ಠಾಣೆ


  • ಪಿರ್ಯಾದಿದಾರರಾದ ನವೀನ್ ಕೆ.ಎಸ್, ವಾಸ: ದೇರೆಬೈಲು ಕೊಂಚಾಡಿ, ಮಂಗಳೂರು ರವರು ತನ್ನ ಕುಟುಂಬದ ಕಾರ್ಯದ ನಿಮಿತ್ತ  ಸೋದರಿಯ ಮನೆಯಾದ ಮೂಡುಶೆಡ್ಡೆಗೆ  ದಿನಾಂಕ 11-05-2013 Rm ರಂದು ರಾತ್ರಿ 10-00 ಗಂಟೆಗೆ  ಕಾರನ್ನು ನೆರೆಮನೆಯ ಪೂರ್ಣಿಮಾ ಎಂಬವರ ಮನೆಯ ಗೇಟಿನ ಮುಂದೆ  ಪಾರ್ಕ್ ಮಾಡಿದ್ದು, ಈ ಬಗ್ಗೆ  ಪೂರ್ಣಿಮಾ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ನಂತರ ಹರೀಶ್ , ಜಯಂತಾ, ಮತ್ತು ಇತರರು ಬಂದು ಪಿರ್ಯದಿದಾರರಿಗೆ ಹಲ್ಲೆ ನಡಸಿರುತ್ತಾರೆ. ಈ ಬಗ್ಗೆ ಪಿರ್ಯದಿದಾರರ ಪತ್ನಿ ಶ್ರೀಮತಿ ಭವಾನಿರವರು ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ, ಹೊರಗಿನಿಂದ ಜನವನ್ನು ಕರೆಯಿಸಿ ಪಿರ್ಯಾದಾರರ ಭಾವ ಜನಾರ್ಧನ ರವರಿಗೆ ಮಾರಣಾಂತಿಕ ಹಲ್ಲೆ ಗೊಳಿಸಿ , ಪಿರ್ಯಾದಿದಾರರ ವಾಹನವನ್ನು ಜಖಂ ಗೊಳಿಸಿರುತ್ತಾರೆ. ಜನಾರ್ಧನರವರಿಗೆ ಬಲಕೈ ಹೆಬ್ಬರಳಿಗೆ ಗಾಯವಾಗಿದ್ದು, ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ಹೊರರೋಗಿ ಚಿಕಿತ್ಸೆ ನೀಡಿರುತ್ತಾರೆ. ಪಿರ್ಯಾದಿದಾರರ ಕಾರಿಗೆ ಸುಮಾರು ರೂ 5000/- ನಷ್ಟ ಉಂಟಾಗಿರುತ್ತದೆ ಎಂಬುದಾಗಿ ನವೀನ್ ಕೆ.ಎಸ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 102/2013 ಕಲಂ  323, 324, 354, 504, 427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 12-05-2013 ರಂದು ಸಂಜೆ 5-45 ಗಂಟೆಗೆ ಮನೆಯ ಅಂಗಳದಲ್ಲಿ ಮನೆಯವರೊಂದಿಗೆ  ಕುಳಿತಿದ್ದ  ಸಮಯ ಪಿರ್ಯಾದಿದಾರರಾದ ಮೋಹಿನಿ (25 ವರ್ಷ), ತಂದೆ: ಚಂದ್ರಶೇಖರ, ವಾಸ: ಕೃತಿಕಾ ನಿಲಯ, ಗೆಡುಕಲ್ಲು ಬಳಿ, ದೇರೆಬೈಲು, ಕೊಂಚಾಡಿ, ಮಂಗಳೂರು ರವರ ಪರಿಚಯದ ಅವಿನಾಶ್, ಆಶಿಶ್, ಕಿರಣ್, ಜೆ.ಪಿ, ಬಿಜ್ಜು, ಅಮರ್, ಕಿರಣ್, ಚೇತನ್ ಎಂಬ ಹೆಸರಿನ 2 ಜನ, ಕೋಟಿ ಹಾಗೂ ಇತರ ಇಬ್ಬರು ವ್ಯಕ್ತಿಗಳು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ  ಮಾಡಿ, ಅದರಲ್ಲಿ ಅವಿನಾಶ್ ಎಂಬವರು ತುಕರಾಮ ಎಲ್ಲಿದ್ದಾನೆ ಎಂದು ಕೇಳಿದರು. ಪಿರ್ಯಾದಿದಾರರು ನಿವ್ಯಾರು ಎಂದು ಕೇಳಿದಾಗ ಪಿರ್ಯಾದಿದಾರನ್ನು ದೂಡಿ, ತಲವಾರು ತೋರಿಸಿ ಸೂಳೆಮಗನೆ, ನಾಯಿಮಗ ತುಕರಾಮ್ ನೀನು ಹೊರಗೆ ಬಾ ಎಂದು ಅವಾಚ್ಯ ಶಬ್ದದಿಂದ ಬೈದು ಮನೆಯ ಒಳಗೆ ಬರಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಮತ್ತು ಮನೆಯವರು ಬಾಗಿಲನ್ನು ಮುಚ್ಚಿದರು. ಈ ಸಮಯ ಪಿರ್ಯಾದಿದಾರರ ಮಾವ ಹರಿಯಪ್ಪ ಪೂಜಾರಿ ಹಾಗೂ ಅತ್ತೆ ಗುಲಾಬಿರವರು ಈ ರೀತಿ ಯಾಕೆ ಮಾಡುತ್ತೀರಿ ಎಂದು ಕೇಳಿದಾಗ ಅವರಿಗೆ ಕೈಯಿಂದ ಹೊಡೆದಿರುತ್ತಾರೆ. ಈ ಸಮಯ ಮನೆಯ ಎದುರಿನ 3 ಕಿಟಕಿಯ ಗ್ಲಾಸ್ ಗಳನ್ನು ಹಾಗೂ ಗೋಡೆಯ ಟೈಲ್ಸ್ ಗೆ ತಲವಾರಿನಿಂದ ಹೊಡೆದು ಜಖಂಗೊಳಿಸಿರುತ್ತಾರೆ. ಪಿರ್ಯಾದಿದಾರರು ಮತ್ತು ಮನೆಯವರು ಬೊಬ್ಬೆ ಹಾಕಿದಾಗ ಅಪಾದಿತರು ತುಕರಾಮನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಹಾಕಿ ಹೋಗಿರುತ್ತಾರೆ ಎಂಬುದಾಗಿ ಮೋಹಿನಿ ಯವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ 103/2013 ಕಲಂ 143, 147, 148, 447, 354, 323, 504, 506, 427 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.