Monday, January 31, 2011

Prakash Bhat Murder case Ends In Conviction

ದಿನಾಂಕ  16-10-09  ರಂದು ರಾತ್ರಿ ಪಾಂಡೇಶ್ವರ ಠಾಣಾ ಸರಹದ್ದಿನ ಮಂಗಳೂರು  ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ಹಣಕ್ಕೋಸ್ಕರ ತನ್ನ ಸಹ ಕ್ಲೀನರ್ ಪ್ರಕಾಶ್ ಭಟ್ ಎಂಬಾತನನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಆರೋಪಿ ಚಂದ್ರ @ ಚಂದ್ರಶೇಖರ(30) ತಂದೆ: ದಿ ರಾಮಪ್ಪ ಬೆಳ್ಚಡ, ವಾಸ: ದರ್ಕಾಸ್ತು ಮನೆ, ಇರಾ ಶಾಲೆ ಬಳಿ, ಇರಾ ಗ್ರಾಮ, ಬಂಟ್ವಾಳ ತಾಲೂಕು ಎಂಬಾತನಿಗೆ ಮಂಗಳೂರಿನ ತ್ವರಿತ ಗತಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ನಿಂಗೇಗೌಡ ಜಂತ್ಲಿ ರವರು ಆರೋಪಿತನ ವಿರುದ್ದ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ತೆರೆದ ನ್ಯಾಯಾಲಯದಲ್ಲಿ ದಿನಾಂಕ 03-01-11 ರಂದು ಆರೋಪಿತನಿಗೆ 5 ವರ್ಷಗಳ ಕಠಿಣ ಶಿಕ್ಷೆಯನ್ನು  ವಿಧಿಸಿರುತ್ತಾರೆ.

ಪಾಂಡೇಶ್ವರ ಠಾಣೆಯ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದು ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ ತರ್ನಹಳ್ಳಿ ರವರು ವಾದ ಮಂಡಿಸಿದ್ದರು.

No comments:

Post a Comment