Monday, January 31, 2011

Karan Singh Murder case Ends In Conviction

ದಿನಾಂಕ 09-12-09 ರಂದು ರಾತ್ರಿ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮಂಗಳೂರು ನೆಹರು ಮೈದಾನದ ಬಳಿ ಹಣಕೋಸ್ಕರ ರಾಜಸ್ಥಾನ ಮೂಲದ ಕರಣ್ ಸಿಂಗ್ ಎಂಬಾತನನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಆರೋಪಿತನಾದ ಮಹಮ್ಮದ್ ಫೈಝಾಲ್(19), ತಂದೆ:ಅಬುಬಕ್ಕರ್, ವಾಸ: ಪುದು ಗ್ರಾಮ, ಬಂಟ್ವಾಳ ತಾಲೂಕು ಈತನಿಗೆ ಮಂಗಳೂರಿನ 1ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಧೀಶರಾದ ಶ್ರೀ ಅಂಚೆಟೆ ಸಂಜೀವ ಕುಮಾರ್  ರವರು ಕಲಂ 302 ಐಪಿಸಿ ಯಂತೆ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ದಿನಾಂಕ 31-01-11 ರಂದು ತೆರೆದ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ 1,000/- ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಸಜೆ ವಿಧಿಸಿರುತ್ತಾರೆ.

ಪಾಂಡೇಶ್ವರ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದು ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ ಮಂಜುನಾಥ ಬಟ್ಪಣೆ ಮತ್ತು ಶ್ರೀ ವೆಂಕಟರಮಣ ಸ್ವಾಮಿ ರವರು ವಾದ ಮಂಡಿಸಿದ್ದರು.

No comments:

Post a Comment