Tuesday, May 13, 2014

Daily Crime Reports 09-05-2014

ದೈನಂದಿನ ಅಪರಾದ ವರದಿ.

ದಿನಾಂಕ 09.05.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

2

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  8.5.2014 ರಂದು ಫಿರ್ಯಾದಿದಾರರಾದ   ಶ್ರೀ ಸುರೇಶ್ ರವರು  ತನ್ನ ಬಾಬ್ತು   ಟವೇರಾ ಕಾರು ನಂಬರ್  ಕೆಎ  19 ಡಿ 4316ನೇದರಲ್ಲಿ ಬಾಡಿಗೆದಾರರನ್ನು ಕರೆದುಕೊಂಡು  ಮಂಗಳೂರು ಕಡೆಯಿಂದ  ಕಾಪು ಕಡೆಗೆ  ಹೋಗುವರೇ  ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ  ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ  ಕಾರ್ನಾಡು ಬೈಪಾಸ್ ಬಳಿಯಿಂದ ರಾ ಹೆದ್ದಾರಿ66 ರಲ್ಲಿ ಸ್ವಲ್ಪ ಮುಂದೆ  ತಲುಪಿದಾಗ  ಹಿಂದುಗಡೆಯಿಂದ  ಅಂದರೆ  ಮಂಗಳೂರು ಕಡೆಯಿಂದ  ಉಡುಪಿ ಕಡೆಗೆ  ಕೆಎ 20 ಸಿ 3326ನೇ  ಬಸ್ಸಿನ ಚಾಲಕ   ಆರೋಪಿ  ಗಣಪತಿ ಎಂಬಾತನು ತನ್ನ  ಬಾಬ್ತು ಬಸ್ಸನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರ  ಬಾಬ್ತು ಟವೇರಾ ವಾಹನಕ್ಕೆ  ಹಿಂದಿನಿಂದ  ಢಿಕ್ಕಿ ಹೊಡೆದ  ಪರಿಣಾಮ   ಕಾರಿನ  ಹಿಂಭಾಗ  ಜಖಂ  ಆಗಿರುತ್ತದೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  8.5.2014 ರಂದು  ಫಿರ್ಯಾದಿದಾರರಾದ  ಶ್ರೀ ಯೋಗೀಶ್  ಶೆಟ್ಟಿಯವರು  ಮದುವೆ  ಕಾರ್ಯಕ್ರಮದ ನಿಮಿತ್ತ  ತನ್ನ  ಕುಟುಂಬದವರೊಂದಿಗೆ ಸುರತ್ಕಲ್ ತಡಂಬೈಲ್  ಬಂಟರ ಭವನಕ್ಕೆ  ಕೆಎ  19 ಡಿ 1497ನೇ  ಮಿನಿ ಬಸ್ಸಿನಲ್ಲಿ  ತೆರಳುವಾಗ್ಗೆ ಸಮಯ  ಬೆಳಿಗ್ಗೆ  ಸುಮಾರು 11.30 ಗಂಟೆಗೆ  ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ  ಹಳೆಯಂಗಡಿ  ರಾಹೆ  66 ರಲ್ಲಿ  ಕೆನರಾ ಬ್ಯಾಂಕ್  ಎದುರುಗಡೆ ತಲುಪುವಾಗ್ಗೆ ಕೆಎ  19 ಡಿ 1497ನೇ  ಮಿನಿ ಬಸ್ಸಿನ ಚಾಲಕ  ಆರೋಪಿ ತಿಲಕ್ ಎಂಬಾತನು  ಎದುರುಗಡೆಯಿಂದ  ತೆರಳುತ್ತಿದ್ದು  ಆಲ್ಟೋ ಕಾರನ್ನು  ಓವರ್ ಟೇಕ್  ಮಾಡಿ   ಅತೀ ವೇಗ  ಮತ್ತು ಅಜಾಗರೂಕತೆಯಿಂದ ತನ್ನ ಬಾಬ್ತು ಮಿನಿ  ಬಸ್ಸನ್ನು ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ರಾಹೆ  66 ರಲ್ಲಿ  ಡಿವೈಡರ್  ಮಧ್ಯೆ  ಎಡಮಗ್ಗುಲಿಗೆ ಮಗುಚಿ  ಬಿದ್ದ  ಪರಿಣಾಮ  ಮಿನಿಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  ಸುಕಮತಿ ಶೆಟ್ಟಿ ಪ್ರಾಯ  48 ವರ್ಷ  ಪುಷ್ಪಾ ಪ್ರಾಯ  58 ವರ್ಷ  ಹಾಗೂ  ಮತ್ತಿತ್ತರಿಗೆ ಗಾಯಗಳಾಗಿದ್ದು ಚಿಕಿತ್ಸೆ  ಬಗ್ಗೆ  ಗಾಯಾಳು ಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಸಂತೋಷ್ ರವರು ಕಳೆದ ಸುಮಾರು 5-6 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕಟ್ಟಡಗಳ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಈಗ ಸುಮಾರು 2 ತಿಂಗಳಿನಿಂದ ಮಂಗಳೂರಿನ ಸುರೇಶ್ಅತ್ವಾರ್ಎಂಬವರ ಮಹಾಲಕ್ಷ್ಮೀ ಕನ್ಸ್ಟ್ರಕ್ಷನ್ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಮಂಗಳೂರು ತಾಲೂಕು ಬಡಗಮಿಜಾರು ಗ್ರಾಮದಲ್ಲಿರುವ ಮೈಟ್ಕಾಲೇಜ್ಕ್ಯಾಂಪಸ್ನ ಒಳಗೆ ವಿದ್ಯಾರ್ಥಿ ಹಾಸ್ಟೆಲ್ಕಟ್ಟಡದಲ್ಲಿ ಕೆಲಸ ನಡೆಯುತ್ತಿದ್ದ ಸಮಯ ಪಿರ್ಯಾದಿದಾರರೊಂದಿಗೆ ಹೆಲ್ಪರ್ಕೆಲಸ ಮಾಡುವ ಸಮೀಮ್ ಎಂಬವನು ಉತ್ತರ ಪ್ರದೇಶದವನಾಗಿದ್ದು ಆತನು ಕಟ್ಟಡದ 3 ನೇ ಅಂತಸ್ತಿನಲ್ಲಿ ನೀರು ಬಿಟ್ಟು ಕ್ಯೂರಿಂಗ್ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 3-45 ಗಂಟೆಗೆ ಮಹಡಿಯ ಬದಿಯಲ್ಲಿ ಯಾವುದೇ ತಡೆಗೋಡೆ ಇಲ್ಲದ ಕಾರಣ ಆಯ ತಪ್ಪಿ ನೆಲ ಅಂತಸ್ತಿಗೆ ಬಿದ್ದು ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದು ಕೆಲಸಗಾರರಿಗೆ ಸೂಕ್ತ ಸುರಕ್ಷತಾ ಕ್ರಮ ಹಾಗೂ ರಕ್ಷಣಾ ಸಲಕರಣೆಗಳನ್ನು ಒದಗಿಸದೇ ಕಂಪೆನಿಯ ಮಾಲಿಕರಾದ ಸುರೇಶ್ಅತ್ವಾರ್ಮತ್ತು ಮೇಲ್ವಿಚಾರಕ ಕೃಷ್ಣ ಖಾರ್ವಿಯವರ ನಿರ್ಲಕ್ಷತನವೇ ಈ ತಕ್ಷೀರಿಗೆ ಕಾರಣವಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಡಿ. ಅರುಣ್‌  ಬೆಂಗಳೂರಿನಲ್ಲಿ ಖಾಯಂ ವಿಳಾಸದಾರರಾಗಿದ್ದು ಹಾಗೂ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯಲ್ಲಿ ಇರುತ್ತಾರೆ ಅವರ ಪತ್ನಿ ಮೂಡಬಿದ್ರೆ ಒಂದು ಮನೆಯನ್ನು ಬಾಡಿಗೆಗೆ ದಿನಾಂಕ : 23-04-2014 ರಿಂದ ವಾಸ ಇರುತ್ತಾರೆ. ವಾಸ ಇರುವ ಸಮಯದಲ್ಲಿ ದಿನಾಂಕ : 01-05-2014 ರಂದು ರಾತ್ರಿ ಪಿರ್ಯಾದಿದಾರರ ಹೆಂಡತಿ ಮಲಗಿರುವ ಸಮಯದಲ್ಲಿ ಯಾರೋ ಕಳ್ಳರು ಅಡುಗೆಯ ಕೋಣೆಯ ಮುಖಾಂತರ ಒಳಗೆ ಬಂದು ಮನೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಬಂಗಾರದ ಸರ - 1 , ಸುಮಾರು 10 ಗ್ರಾಂ ವುಳ್ಳ ಕಿವಿಯೋಲೆಗಳು ಮತ್ತು ಹೆಚ್ಪಿ ಲಾಪ್ಟಾಪ್‌ -1 ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಸ್ವತ್ತಿನ ಅಂದಾಜು ಮೌಲ್ಯ 94,000 ಆಗಬಹುದು.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೇವ್ಜಿಬೈ ಹೆಚ್. ಪಾಟೇಲ್ ರವರು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ಪಣಂಬೂರು ಡಿಕ್ಸಿ ಶಿಫಿಂಗ್ ಕಂಪೆನಿಯ ಯಾರ್ಡ ಸಮೀಪ ಟಿಂಬರ್ ಯಾರ್ಡನ್ನು ಹೊಂದಿದ್ದು ದಿನಾಂಕ 19/03/2014 ರಂದು ಕೇರಳದ ISSA SAW MILL KERALA ಇವರಿಗೆ ಪಿರ್ಯಾದಿದಾರರ ಯಾರ್ಡಿನಲ್ಲಿ ಇರುವ 1258/50 CUBIC FEET 27 ROUND LOG BRAMA TEAK WOOD ನ್ನು CUBIC FEET ಗೆ 3400 ರೂಪಾಯಿಯಂತೆ ಕೇರಳದ ಟಿಂಬರ್ ಬ್ರೊಕರ್ ಆದ ಜುಬೇರ್ ಎಂಬವರು ಖರಿದೀಸಿದ್ದು ಅವುಗಳನ್ನು 7 ದಿನಗಳ ಒಳಗೆ ಪಿರ್ಯಾದಿದಾರರ ಯಾರ್ಡಿನಿಂದ ಸಾಗಿಸ ಬೇಕಾಗಿಯೂ ತಪ್ಪಿದಲ್ಲಿ CUBIC FEET ಗೆ 500 ರೂಪಾಯಿಗಳಂತೆ ಹೆಚ್ಚಿಗೆ ದರವನ್ನು ನೀಡ ಬೇಕಾಗಿ ಪಿರ್ಯಾದಿದಾರರು ತಿಳಿಸಿದ್ದು. ಅಲ್ಲದೇ ಮರವನ್ನು ಕೇರಳ ರಾಜ್ಯ ಸರಕಾರಕ್ಕೆ ಸಲ್ಲಿಸ ಬೇಕಾಗಿದ್ದ ಸಿ,ಎಸ್,ಟಿ ಮತ್ತು ಕರ್ನಾಟಕ ರಾಜ್ಯ ಸರಕಾರದ vat ತೆರಿಗೆಯ ಬಾಬ್ತು ಹಣವನ್ನು ಡೆಪೋಸಿಟ್ ಇಡಬೇಕಾಗಿ ಪಿರ್ಯಾದಿದಾರರು ತಿಳಿಸಿದ್ದು ಅದಕ್ಕೆ ಸಂಬಂದ ಪಟ್ಟವರು ಒಪ್ಪಿಗೆಯನ್ನು ನೀಡಿದ್ದರು ಆದರೇ ಜುಬೇರ ರವರು ಮರದ ಲೋಗನ್ನು ಸಾಗಿಸದೆ ಪಿರ್ಯಾದಿದಾರರ ಯಾರ್ಡಿನಲ್ಲೇ ಇರಿಸಿದ್ದು ಪಿರ್ಯಾದಿದಾರರು ಹಲವಾರು ಬಾರಿ ಅವರಿಗೆ ಸೊತ್ತನ್ನು ಕೊಂಡು ಹೋಗುವಂತೆ ತಿಳಿಸಿದರೂ ಟಿಂಬರನ್ನು ಕೊಂಡು ಹೋಗದೆ ಇದ್ದು ದಿನಾಂಕ 02/05/2014 ರಂದು ಜುಬೈರ್ ರವರು ಪಿರ್ಯಾದಿದಾರರಿಗೆ ಫೋನ್ ಮಾಡಿ ಸೊತ್ತನ್ನು ಕೊಂಡು ಹೋಗುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಈ ಮೂದಲು ಮಾಡಿಕೊಂಡ ಬಾಯ್ದಾರೆ ಒಪ್ಪಂದವನ್ನು ಪೊರೈಸಿ ಸೊತ್ತನ್ನು ಕೊಂಡು ಹೋಗುವಂತೆ ತಿಳಿಸಿದಾಗ ಜುಬೇರ್ ರವರು ದಿನಾಂಕ 05/05/2014 ರಂದು ಮಂಗಳೂರಿಗೆ ಬಂದು ಜೊತೆಯಲ್ಲಿ ಕುಳಿತು ಮಾತನಾಡಿ ಸೊತ್ತನ್ನು ಕೊಂಡು ಹೋಗುವುದಾಗಿ ಹೇಳಿದ್ದರು ಪಿರ್ಯಾದಿದಾರರು ಮತ್ತು ಜುಬೇರ್ ರವರು ಮಾಡಿಕೊಂಡ ಬಾಯ್ದಾರೆ ಒಪ್ಪಂದವನ್ನು ಜುಬೇರ್ ಉಲ್ಲಂಘಿಸಿ ದಿನಾಂಕ 02/05/2014 ರಂದು ಮಧ್ಯಾಹ್ನದ ನಂತರ ಪಿರ್ಯಾದಿದಾರರ ಬೈಕಂಪಾಡಿ ಯಾರ್ಡಿಗೆ ಬಂದು ಅಲ್ಲಿ ಇರಿಸಿದ್ದ  27 BARMA  TEAK WOOD LOG ನ್ನು ಜುಬೈರ್ ಮತ್ತು ಪಿರ್ಯಾದಿದಾರರ ರೈಟರ್ ಆದ ವಿವೇಕಾನಂದ ಪೂಜಾರಿ ಮತ್ತು ಕೆ.ಎಲ್ 57 ಎಫ್ 1759 ಮತ್ತು ಕೆ, 19 ಸಿ 1340 ನಂಬ್ರದ ಲಾರಿಯ ಚಾಲಕ ಮತ್ತು ಮಾಲಕರು ಸೇರಿ ಯಾವುದೇ ಬಿಲ್ಲು ವಗೈರೆ ಇಲ್ಲದೆ ಲಾರಿಯಲ್ಲಿ ಹೆರಿಕೊಂಡು ಕೇರಳಕ್ಕೆ ಸಾಗಿಸಿ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ.

 

6.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-04-14 ರಂದು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ದೀಪಕ್ ಪೆಟ್ರೋಲ್ ಬಂಕಿನ ಬಳಿ ಇರುವ ಮೆ. ಟ್ರಾನ್ಸ್ ಲಿಂಕ್ಸ್ ಲಾರಿ ಆಪೀಸಿನ ಎದುರುಗಡೆಯಿಂದ ಆರೋಪಿತರುಗಳು ಕೆಎ-16ಬಿ-7991ನೇ ನಂಬ್ರದ ಟ್ರಕ್ ನಲ್ಲಿ  14640 ಎಂಟಿ  ಬೆಲೆ 234240 ರೂ ಮೌಲ್ಯದ ಮೆಟ್ ಕೋಕ್ ನ್ನು ಕಿರ್ಲೋಸ್ಕರ್ ಪರಸ್ ಇಂಡಸ್ಟ್ರೀಸ್ ಕಂಪೆನಿಗೆ ತಲುಪಿಸದೆ ಮೆಟ್ ಕೋಕ್ ನ್ನು ಯಾರಿಗೋ ಮಾರಾಟ ಮಾಡಿ ಪಿರ್ಯಾದಿದಾರರಿಗೆ ಮತ್ತು ಕಿರ್ಲೋಸ್ಕರ್ ಪರ್ರಸ್ ಇಂಡಸ್ಟ್ರೀಸ್ ಕಂಪೆನಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.05.2014  ರಂದು ಬೆಳಿಗ್ಗೆ 9:00 ಗಂಟೆಗೆ  ಪಿರ್ಯಾದಿದಾರರಾದ ಶ್ರಿ ವಾಮನ ಮೂಲ್ಯ ರವರು  ಮೇರ್ಲದಲಪದವು  ರಾಜೇಶ್ವರ್‌  ಶಾಲಾ ಮುಂಭಾಗದಲ್ಲಿ  ನಡೆದುಕೊಂಡು ಹೋಗುತ್ತಿರುವ  ಸಮಯ  ನೋಂದಣೆ  ಆಗದ  ಪಲ್ಸರ್ಮೋಟಾರು  ಸೈಕಲ್ನ್ನು  ಅದರ ಸವಾರನು ರಾಜೇಶ್ವರ್ಶಾಲೆಯ  ಎದುರುಗಡೆಯಿಂದ ಸದ್ರಿ  ಮೋಟಾರು  ಸೈಕಲ್ನ್ನು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಬಿದ್ದಿದ್ದು  ಪಿರ್ಯಾದಿದಾರರ  ಎಡ ಕಾಲಿಗೆತೊಡೆಗೆ  ಗುದ್ದಿದ ಗಾಯವಾಗಿರುತ್ತದೆ, ಅಲ್ಲದೆ ಬೈಕ್ಸಾವರನ ಹಿಂಬದಿ  ಕುಳಿತ  ಮಾರೇಶ್‌  ಎಂಬವರಿಗೆ ಮೂಗಿಗೆ ಗುದ್ದಿದ ಗಾಯವಾಗಿರುತ್ತದೆಗಾಯಗೊಂಡವರನ್ನು  ಮಂಗಳೂರು ತೇಜಸ್ವೀನಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದು  ಪಿರ್ಯಾದಿದಾರರನ್ನು  ವೈದ್ಯರು  ಪರೀಕ್ಷಿಸಿ  ಒಳರೋಗಿಯಾಗಿ  ದಾಖಲಿಸಿರುತ್ತಾರೆ.

No comments:

Post a Comment