Friday, February 27, 2015

Daily Crime Reports : 27-02-2015

ದೈನಂದಿನ ಅಪರಾದ ವರದಿ.
ದಿನಾಂಕ 27.02.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
0
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
4





























1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಜಶೇಖರ ರವರ ತಮ್ಮ ಅನಂದ ಕುಮಾರ್ ಮನ್ನೆಲ್ಲಿ 18 ವರ್ಷ ಎಂಬಾತನು ಪಿಯುಸಿ 2 ನೇ ವರ್ಷದ PCMB ವಿದ್ಯಾಬ್ಯಾಸ ಕಲಿಯುತ್ತಿದ್ದು, ದಿನಾಂಕ: 24.02.2015 ರಂದು ಸಂಜೆ 5.00 ಗಂಟೆಗೆ ಕಾಲೇಜು ಬಿಟ್ಟವನುಆತನು ವಾಸವಾಗಿರುವ ಪುತ್ತಿಗೆ ರಜತಾದ್ರಿ ಹಾಸ್ಟೆಲ್ ಗೂ ಹೋಗದೇ , ಮನೆಗೂ ಬಾರದೇ ರಾತ್ರಿ Rajshekar 413 @gmail.com ,ಎಂಬುದಾಗಿ ಪಿರ್ಯಾದಿದಾರರ ಮೊಬೈಲ್ ಗೆ ಈಮೇಲ್ ಮಾಡಿದ್ದು, ಮೇಲ್ ನಲ್ಲಿ ತಾನು ಒಬ್ಬಂಟಿಯಾಗಿ ಇರುವುದಾಗಿಯೂ ನಾನು ಮಾಡಿದ ಸಾಲವನ್ನು ವಾಪಾಸ್ಸು ನೀಡಬೇಕಾಗಿಯೂ, ನಾನು 10 ವರ್ಷ ಕಳೆದು ಮರಳಿ ಬರುವುದಾಗಿಯೂ ತಿಳಿಸಿ ಕಾಣೆಯಾಗಿರುವುದಾಗಿದೆ. ಕಾಣೆಯದವರ ಚಹರೆ: 1.ಎತ್ತರ- 3.8" 2.  ಎಣ್ಣೆ ಕಪ್ಪು ಮೈಬಣ್ಣ, 3. ಕೋಲು ಮುಖ , ಸಾಧಾರಣ ಶರೀರ, 4. ಬೂದು ಬಣ್ಣದ ಶರ್ಟ್ , ಕಪ್ಪು ಪ್ಯಾಂಟ್ 5. ಬಲಕೈಯ ತೋಳು ಬೆರಳಿನಲ್ಲಿ  ಉಗುರು ಚಿಕ್ಕದಗಿರುತ್ತದೆ. 6. ಕನ್ನಡ, ಇಂಗ್ಲೀಷ್ ತೆಲುಗು, ಹಿಂದಿ ಮಾತನಾಡುತ್ತಿದ್ದು, anandappu143143@gmail.com ಮತ್ತು anandanjali143143@gmail.com ಎಂಬುದಾಗಿ ಈ -ಮೇಲ್ ID ಯನ್ನು ಹೊಂದಿರುತ್ತಾನೆ.

2.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-02-2015 ರಂದು ಪಿರ್ಯಾದುದಾರರಾದ ಶ್ರೀ ಅಶ್ರಫ್ ರವರು ಡಾ| ಮುಹಮ್ಮದ್ಸಲಿಂ ಎಂಬವರನ್ನು ಅವರ ಬಾಬ್ತು KA 19 MN 8438 ನೇ ನಂಬ್ರದ ಕಾರಿನಲ್ಲಿ ಕುಳ್ಳಿರಿಸಿಕೊಂಡು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸಿಕೊಂಡು ಬರುತ್ತಾ ರಾತ್ರಿ ಸಮಯ ಸುಮಾರು 11-30 ಗಂಟೆಗೆ, ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ತಲಪಾಡಿ ಬ್ರಿಡ್ಜ್ಬಳಿ ತಲುಪುತ್ತಿದ್ದಂತೆ ಒಂದು ಗುಂಪು ರಸ್ತೆಯಲ್ಲಿ ಇರುವುದನ್ನು ಕಂಡ ಪಿರ್ಯಾದುದಾರರ ಕಾರನ್ನು ನಿಧಾನ ಮಾಡುತ್ತಿದ್ದಂತೆ ಆ ಗುಂಪಿನಲ್ಲಿದ್ದ ಮಂದಿ ಕಾರಿನ ಮುಂಭಾಗ, ಎಡ, ಬಲ ಹಾಗೂ ಹಿಂಬಾಗದ ಗಾಜುಗಳಿಗೆ ಕಲ್ಲುಗಳಿಂದ ಹೊಡೆದು ಪುಡಿ ಮಾಡಿರುತ್ತಾರೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿರುತ್ತದೆ. 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅಬ್ದುಲ್ ನಝೀರ್ ಯು.ಜಿ. ರವರು ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ಕೆ.ಸಿ. ರೋಡ್‌  ಜಂಕ್ಷನ್‌‌ನಲ್ಲಿ ಎಮ್‌.. ಎಂಟರ್ಪ್ರೈಸಸ್ಹೆಸರಿನ ಅಂಗಡಿ ಹೊಂದಿದ್ದು, ದಿನಾಂಕ 25-02-2015 ರಂದು ರಾತ್ರಿ ಪಿರ್ಯಾದುದಾರರು ಅಂಗಡಿಯ ಗ್ಲಾಸ್ ಡೋರ್ನನ್ನು ಲಾಕ್ಮಾಡಿ ಹೋಗಿದ್ದು, ಆ ನಂತರ ರಾತ್ರಿ ಸಮಯ ಕೆ.ಸಿ. ರೋಡ್ಜಂಕ್ಷನ್ನಲ್ಲಿ ಗುಂಪು ಗಲಾಟೆ ನಡೆದ ಸಮಯ ಯಾರೋ ದುಷ್ಕರ್ಮಿಗಳು ಗ್ಲಾಸ್ ಕ್ಯಾಬಿನ್ಗೆ ಕಲ್ಲು  ಮತ್ತು ಸೋಡಾ ಬಾಟ್ಲಿಗಳಿಂದ ಹೊಡೆದು ಪುಡಿ ಮಾಡಿ ಸುಮಾರು 20,000/- ನಷ್ಟವನ್ನುಂಟು ಮಾಡಿರುತ್ತಾರೆ.

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-02-2015 ರಂದು ರಾತ್ರಿ 07-00 ಗಂಟೆಯ ನಂತರದಿಂದ ದಿನಾಂಕ 26-02-2015 ರಂದು 01-15 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಒಂಭತ್ತುಕೆರೆ ಮೆರಿಡಿಯನ್ಕಾಲೇಜ್ಬಳಿಯಲ್ಲಿ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶರೀಫ್ ರವರ ಬಾಬ್ತು ತಗಡು ಶೀಟಿನಿಂದ ನಿರ್ಮಿಸಲಾದ ಚಾ, ಕಾಫಿ, ತಿಂಡಿ, ಊಟದ ಕ್ಯಾಂಟಿನ್ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟು ಇಡುವುದರಿಂದ ಕ್ಯಾಂಟಿನ್ನ ಒಳಗಿದ್ದ ರೇಶನ್‌, ಎಣ್ಣೆ, ಮೇಜು, ಕುರ್ಚಿ ಮತ್ತು ಇತರ ಸಾಮಾಗ್ರಿಗಳು ಬೆಂಕಿಯಿಂದ ಸುಟ್ಟು ಹೋಗಿ ಸುಮಾರು 1 ಲಕ್ಷ ರೂಪಾಯಿಯಷ್ಟು ನಷ್ಟವುಂಟಾಗಿರುವುದಾಗಿದೆ.

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಮುಸ್ತಾಫಾ ರವರು ತೊಕ್ಕೊಟ್ಟು ಒಳಪೇಟೆಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ದಿನಾಂಕ 25-02-2015 ರಂದು ರಾತ್ರಿ 20-30 ಗಂಟೆಗೆ ಅಂಗಡಿಯನ್ನು ಬಂದ್ಮಾಡಿ ಮನೆಗೆ ಹೋಗಿದ್ದು, ದಿನಾಂಕ 26-02-2015 ರಂದು ಬೆಳಿಗ್ಗೆ 04-00 ಗಂಟೆಯ ಹೊತ್ತಿಗೆ ಫಿರ್ಯಾದಿದಾರರು ಮನೆಯಲ್ಲಿರುವಾಗ  ಪಕ್ಕದ ಅಂಗಡಿಯವರಾದ ಮನ್ಸೂರ್ಎಂಬವರು ದೂರವಾಣಿ ಮೂಲಕ ಕರೆ ಮಾಡಿ ನಮ್ಮ ಅಂಗಡಿಗಳಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎಂದು ತಿಳಿಸಿದಂತೆ ಫಿರ್ಯಾದಿದಾರರು ಅಂಗಡಿಗೆ ಬಂದು ನೋಡಿದಾಗ ಫಿರ್ಯಾದಿದಾರರ ಇಲೆಕ್ಟ್ರಾನಿಕ್ಸೊತ್ತುಗಳು ಸುಟ್ಟು ಹೋಗಿ ಸುಮಾರು ಎರಡು ಲಕ್ಷ ರೂಪಾಯಿ ನಷ್ಟವುಂಟಾಗಿರುತ್ತದೆಅಲ್ಲದೆ ಫಿರ್ಯಾದಿದಾರರ ಅಂಗಡಿಯ ಸಾಲಿನಲ್ಲಿದ್ದ ಇತರ ಅಂಗಡಿಯವರಾದ ಯು.ಹೆಚ್. ಮಹಮ್ಮದ್, ರಫೀಕ್‌, ಯು.ಕೆ. ಹನೀಫ್‌, ಶ್ರೀಮತಿ ಆಸ್ಮಾ, ಭಗವನ್ದಾಸ್‌, ಶ್ರೀಮತಿ ಐರಿನ್ಡಿ'ಸೋಜ , ಶ್ರೀಮತಿ ಹಿಲ್ಡಾ ಮಾಂತೆರೋ, ಶ್ರೀಮತಿ ಹೈಡಾ ಮಾಂತೆರೋ, ಅಕ್ಬರ್‌, ಶ್ರೀಮತಿ ರುಕ್ಮಿಣಿ, ಯೂಸೂಫ್, ಅಬ್ದುಲ್ ನಜೀರ್, ಮೂಸಾ ಕುಂಞ, ಅಬ್ದುಲ್ಅಜೀಜ್, ಹಮೀದ್, ಮಹಮ್ಮದ್ ಮನ್ಸೂರ್‌, ಅಬ್ದುಲ್ಲತೀಫ್‌, ಇಬ್ರಾಹಿಂ, ಅಬ್ದುಲ್ಲ ಇವರುಗಳ ಅಂಗಡಿಗಳು ಕೂಡಾ ಸುಟ್ಟು ಹೋಗಿದ್ದು, ದಿನಾಂಕ 26-02-2015 ರಂದು ರಾತ್ರಿ 01-30 ಗಂಟೆಯಿಂದ 02-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ದುಷ್ಕರ್ಮಿಗಳು ಅಂಗಡಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಸುಮಾರು 21 ಲಕ್ಷ ರೂಪಾಯಿ ನಷ್ಟವುಂಟು ಮಾಡಿರುವುದಾಗಿದೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  25-02-2015 ರಂದು ರಾತ್ರಿ 22-45 ಗಂಟೆ ಸಮಯಕ್ಕೆ  ತಲಪಾಡಿ ಗ್ರಾಮದ ಕೆ.ಸಿ.ರೋಡ್ಜಂಕ್ಷನ್ನಿಂದ ಸುಮಾರು 100 ಮೀಟರ್ಮುಂದೆ ಕಿನ್ಯಾ ರೋಡ್ನಲ್ಲಿ  ಹಿಂದುಗಳು ಬಂಟಿಂಗ್ಸ್ಹಾಕುವ ವಿಚಾರದಲ್ಲಿ ಮುಸ್ಲಿಮರು ಆಕ್ಷೇಪ ವ್ಯಕ್ತ ಮಾಡಿರುವುದರಿಂದ ಒಂದು ಕಡೆಯಿಂದ ಹಿಂದುಗಳು ಮತ್ತು ಇನ್ನೊಂದು ಕಡೆಯಿಂದ ಮುಸ್ಲಿಮರು ಗುಂಪು ಸೇರಿ  ಕಲ್ಲು ಬಾಟ್ಲಿಗಳನ್ನು ಎಸೆದುಕೊಂಡು ಗಲಾಟೆ ಮಾಡುತ್ತಿರುವುದನ್ನು ಕಂಡು ಫಿರ್ಯಾದಿದಾರರಾದ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಸವೀತ್ರು ತೇಜ್ ಪಿ.ಡಿ. ರವರು ಕೆ.ಎಸ್.ಆರ್.ಪಿ. ಪಡೆಯನ್ನು ಡೀಬರ್ಸ್ಮಾಡಿ ಅಕ್ರಮಕೂಟ ಸೇರಿರುವ ಗುಂಪನ್ನು ಚದುರಿ ಹೋಗುವಂತೆ ಮೆಘಾ ಫೋನ್ನಲ್ಲಿ  ತಿಳಿಸಿದರೂ, ಚದುರದೇ  ಇದ್ದುದರಿಂದ  ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಎಸ್ಆರ್‌.ಪಿ ತುಕಡಿಯಿಂದ ಗಾಳಿಯಲ್ಲಿ ಅಶ್ರುವಾಯು ಸಿಡಿಸಿದ್ದು, ನಂತರ  ಉದ್ರೇಕಿತ ಗುಂಪನ್ನು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದ್ದು, ಆರೋಪಿಗಳು ಫಿರ್ಯಾದಿದಾರರ ಮತ್ತು ಸಿಬ್ಬಂದಿಗಳ ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನು ಮಾಡಿದಲ್ಲದೆ ರೊಚ್ಚಿಗೆದ್ದ ಪೊಲೀಸರನ್ನು ಕೊಂದು ಹಾಕುವಾ ಎಂದು ಹೇಳುತ್ತಾ ಫಿರ್ಯಾದಿದಾರರ ಮತ್ತು ಸಿಬ್ಬಂದಿಗಳ ಮೇಲೆ ಕಲ್ಲು ಮತ್ತು ಬಾಟ್ಲಿ ತೂರಾಟ ಮಾಡಿ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಇದರಿಂದ ಸಿಬ್ಬಂದಿಗಳು ಗಾಯಗೊಂಡಿದ್ದು, ಫಿರ್ಯಾದಿದಾರರ ಇಲಾಖಾ ಜೀಪಿನ ಗಾಜು ಪುಡಿ ಮಾಡಿರುವುದರಿಂದ ಸುಮಾರು 3 ಸಾವಿರ ರೂಪಾಯಿ ನಷ್ಟವುಂಟು ಮಾಡಿರುವುದಾಗಿದೆ.

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.01.2015 ರಂದು ಉದಯವಾಣಿ ಪತ್ರಿಕೆಯಲ್ಲಿ ಬಂದ ಉದ್ಯೋಗದ ಜಾಹಿರಾತಿನ ಮೇರೆಗೆ ಪಿರ್ಯಾದಿದಾರರು ಕಿಸಾನ್ ಕಾಲ್ ಸೆಂಟರ್ಗೆ ಅರ್ಜಿ ಸಲ್ಲಿಸಿದ್ದು ಆ ನಂತರ ಸದ್ರಿ ಜಾಹಿರಾತು ನೀಡಿದವರ ಕಡೆಯಿಂದ ಪಿರ್ಯಾದಿದಾರರು ಉದ್ಯೋಗಕ್ಕೆ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರವನ್ನು ಅಂಚೆ ಮುಖೇನ ಕಳುಹಿಸಿದ್ದಲ್ಲದೇ ಉದ್ಯೋಗದ ಭದ್ರತೆಗಾಗಿ ರೂ. 19550/- ಮತ್ತು ಜೀವ ವಿಮೆಗಾಗಿ 20000/- ಪಾವತಿಸುವಂತೆ ತಿಳಿಸಿದ್ದರಿಂದ ಪಿರ್ಯಾದಿದಾರರು ಸದ್ರಿ ಹಣವನ್ನು ಮಹೇಶ್ ಕುಮಾರ್, ಜನಪುರಿ ಶಾಖೆ, ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 2593101013457ಕ್ಕೆ ಜಮೆ ಮಾಡಿದ್ದು, ಆ ನಂತರ ಪಿರ್ಯಾದಿದಾರಿಗೆ ಯಾವುದೇ ಉದ್ಯೋಗವನ್ನು ನೀಡದೇ ಮೋಸ ಮಾಡಿರುವುದಾಗಿದೆ.

No comments:

Post a Comment