Tuesday, March 19, 2013

Daily Crime Incidents For March 19,2013

ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ; 

  • ದಿನಾಂಕ  17-03-13 ರಂದು ಪಿರ್ಯಾದಿದಾರರ ಅಣ್ಣ ರಾಕೇಶ್ ಬಂಗೇರಾರವರು  ಅವರ ಬಾಬ್ತು ಅಕ್ಟಿವ್ ಹೋಂಡಾ  ವಾಹನ ನಂಬ್ರ ಕೆಎ-19-ಡಬ್ಲ್ಯೂ 7661 ರಲ್ಲಿ ಹಳೆಯಂಗಡಿ ಕಡೆಯಿಂದ ಮುಕ್ಕ ಜಂಕ್ಷನ್  ಕಡೆಗೆ ಬರುತ್ತಿದ್ದಾಗ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಕೆಎ-19-ಇಡಿ-3048 ನೇ ಮೋಟಾರ್ ಸೈಕಲನ್ನು ಅದರ ಸವಾರ ಜಗನ್ನಾಥ ಎಂಬವರು ಹಿಂಬದಿಯಲ್ಲಿ ಸಹ ಸವಾರ ಗಿರೀಶ್ ಎಂಬವರನ್ನು ಕುಳ್ಳಿರಿಸಿಕೊಂಡು ರಾತ್ರಿ 20-30 ಗಂಟೆಗೆ ಮುಕ್ಕ ಜಂಕ್ಷನ್ನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಕ್ಟಿವ್ ಹೊಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ರಸ್ತೆಗೆ ಬಿದ್ದು ಪಿರ್ಯಾದಿದಾರರ ಅಣ್ಣ ರಾಕೇಶ್ ಬಂಗೇರಾರವರಿಗೆ ತಲೆಗೆ ಕಾಲಿಗೆ ರಕ್ತಗಾಯ ಹಾಗೂ ಜಗನ್ನಾಥ ಮತ್ತು ಸಹಸವಾರ ಗಿರೀಶ್ರವರಿಗೆ ಗಾಯವಾಗಿರುತ್ತದೆ. ಎಂಬುದಾಗಿ ವರುಣ್ ಬಂಗೇರಾ  ಪ್ರಾಯ ಃ 28 ವರ್ಷ ತಂದೆಃ ದಿ| ಉಮೇಶ ಕೃಷ್ಣಿ ನಿಕೇತನಾ  ವಾಸಃ ಡೋರ್ ನಂಬ್ರ 2-29 ಸಸಿಹಿತ್ಲು ಅಂಚೆ 574180 ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ವರುಣ್ ಬಂಗೇರಾ  ಪ್ರಾಯ ಃ 28 ವರ್ಷ ತಂದೆಃ ದಿ| ಉಮೇಶ ಕೃಷ್ಣಿ ನಿಕೇತನಾ  ವಾಸಃ ಡೋರ್ ನಂಬ್ರ 2-29 ಸಸಿಹಿತ್ಲು ಅಂಚೆ 574180 ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 75/2013 ಕಲಂ: 279-337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ.

ಪಣಂಬೂರು ಠಾಣೆ ;

  • ದಿನಾಂಕ 18-03-13 ರಂದು ಪಿಯರ್ಾದಿದಾರರು ತನ್ನ ಬಾಬ್ತು ಕೆಎ-19ಡಿ-3877 ನೇ ಟಾಟಾ ಏಸ್ ನ್ನು ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಿಂದ ಮಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದು, ಅತಿಯಾದ ವಾಹನ ಸಂಚಾರ ಇದ್ದುದರಿಂದ ಪಣಂಬೂರು ಸರ್ಕಲ್ ನಿಂದ ಸ್ವಲ್ಪ ಹಿಂದೆ ಪಿಯರ್ಾದಿದಾರರು ಗಾಡಿಯನ್ನು ನಿಲ್ಲಿಸಿದ್ದು, ಹಿಂದಿನಿಂದ ಕೆಎ-19ಎಂಬಿ-1436ನೇ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಂತಿದ್ದ ಟಾಟಾ ಏಸ್ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದ ಹಿಂಬದಿಯ ಚೇಸ್ ಮತ್ತು ಹಿಂಬದಿಯ ಭಾಗ ಜಖಂಗೊಂಡಿರುತ್ತದೆ.  ಹಾಗೂ ಕಾರಿನ ಮುಂಭಾಗ ಜಖಂ ಗೊಂಡಿರುತ್ತದೆ ಎಂಬುದಾಗಿ ಲಕ್ಷ್ಮಣ  (24) ತಂದೆಃ ಹೊನ್ನಪ್ಪ ಪೂಜಾರಿ, ವಾಸಃ ಪೆರ್ಲಗುರಿ ಮನೆ, ನೆಕ್ಕಿಲಾಡಿ ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ 37/2013 ಕಲಂಃ  279 ಕಅ ರಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ,

No comments:

Post a Comment