Tuesday, August 20, 2013

Theft Gold Ornaments Recovered

        ದಿನಾಂಕ 18/19-08-2013 ರಂದು ರಾತ್ರಿ ಸಮಯ ಪಣಂಬೂರು ಎಸಿಪಿ  ರವಿಕುಮಾರ್ . ಎಸ್ ರವರು  ಹೆಚ್.ಸಿ. ಉಲ್ಲಾಸ್ , ಎಹಚ್.ಸಿ  ಗೋಪಾಲ; ಕೃಷ್ಣ ರವರೊಂದಿಗೆ  ರೌಂಡ್ಸ್ ನಲ್ಲಿ ಇರುವ ಸಮಯ ರಾತ್ರಿ ಸುಮಾರು 4-10 ಗಂಟೆಯ ವೇಳೆಗೆ ಮೂಡಬಿದ್ರೆ   ಪೇಟೆಯಲ್ಲಿರುವ ಹನುಮಾನ್ ದೇವಸ್ಧಾನದ ಎದುರು   ರಸ್ತೆಯಲ್ಲಿ   ಇಬ್ಬರು ಅಪರಿಚಿತರು  ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದು ಕೊಂಡು ಹೋಗುತ್ತಿರುವುದನ್ನು ಕಂಡು  ಎಸಿಪಿ ಪಣಂಬೂರು ರವರು ಅವರನ್ನು ವಿಚಾರಿಸುವರೇ ಜೀಪನ್ನು ನಿಲ್ಲಿಸಿದಾಗ  ಇಬ್ಬರು ಅಪರಿಚಿತರು  ಅಲ್ಲಿಂದ ಓಡಿ ತಪ್ಪಿ ಕೊಂಡಿದ್ದು  ಈ ವಿಚಾರವನ್ನು   ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಿಗೆ ತಿಳಿಸಿ , ಪೊಲೀಸ್ ನಿರೀಕ್ಷಕ ಎ.ಕೆ. ತಿಮ್ಮಯ್ಯ ಮತ್ತು  ಪಿಎಸ್ಐ ರಮೇಶ್ ಕುಮಾರ್   ಹಾಗೂ ಸಿಬ್ಬಂದಿಗಳು ಒಟ್ಟು ಸೇರಿ ಕೊಂಡು ಆರೋಪಿಗಳ ಹುಡುಕಾಟ ಮಾಡುವ ಸಮಯ ಎಸಿಪಿ ರವರಿಗೆ   ಪೊದೆಯಲ್ಲಿ  ಕಳ್ಳರು ಬಿಸಾಡಿ ಹೋದ ಎರಡು ಬ್ಯಾಗ್ ಗಳು ಪತ್ತೆಯಾಗಿದ್ದು ಈ ಬ್ಯಾಗ್ ನಲ್ಲಿ  ಸುಮಾರು 675 ಗ್ರಾಂ  ಚಿನ್ನಾಭರಣಗಳು ಪತ್ತೆಯಾಗಿದ್ದು ಈ ಬಗ್ಗೆ  ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಮೊ.ನಂಬ್ರ 174/2013 ಕಲಂ: 102 ಸಿಆರ್ ಪಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಪೊಲೀಸರು ಸ್ವಾದೀನ ಪಡಿಸಿದ ಚಿನ್ನಾಭರಣಗಳನ್ನು  ಲಕ್ಷೀ ಜ್ಯುವೆಲರಿಯ ಮಾಲಕರು  ಗುರುತಿಸಿದ್ದು   ದಿ: 18/19-08-2013  ರ ರಾತ್ರಿ  ಜುವೆಲರಿ ಅಂಗಡಿಯ ಹಿಂಬದಿಯಿಂದ ಕನ್ನ ಕೊರೆದು ಲಾಕರ್ ನ್ನು ಗ್ಯಾಸ್ ಕಟ್ಟರ್ ಮೂಲಕ ರಂದ್ರ ಕೊರೆದು  ಒಳಗಿದ್ದ  ಚಿನ್ನಾಭರಣಗಳನ್ನು  ಕಳವು ಮಾಡಿರುವುದಾಗಿದೆ.  ಈ ಬಗ್ಗೆ  ಠಾಣಾ ಮೊ.ನಂಬ್ರ 174/2013 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ  ಈ ಘಟನೆ ನಡೆದ ಒಂದೆರಡು ಗಂಟೆಗಳಲ್ಲಿ   ಕಳವು ಸೊತ್ತುಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

No comments:

Post a Comment