Tuesday, March 31, 2015

Daily Crime Reports : 31-03-2015

ದೈನಂದಿನ ಅಪರಾದ ವರದಿ.
ದಿನಾಂಕ 31.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
1
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
3






















  




1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಅರುಣ್ ರವರು ರಿಕ್ಷಾ ಚಾಲಕರಾಗಿದ್ದು, ದಿನಾಂಕ 30-03-2015 ರಂದು 23:00 ಗಂಟೆಗೆ ಮನೆಯಲ್ಲಿ ಮಲಗಿದ್ದ ಸಮಯ ಪಿರ್ಯಾಧಿದಾರರ ಮನೆಯ ಸಮೀಪ ಇರುವ ಪಿರ್ಯಾಧಿದಾರರ ಅಕ್ಕ ವಿದ್ಯಾ ರವರ ಮನೆಯಿಂದ ರಾತ್ರಿ ಸುಮಾರು 23:45 ಗಂಟೆಗೆ ಜೋರಾಗಿ ಬೊಬ್ಬೆ ಕೇಳಿ ಪಿರ್ಯಾಧಿದಾರರು ಮನೆಯಿಂದ ಹೊರಗಡೆ ಬಂದು ನೋಡಿದಾಗ ಪಿರ್ಯಾಧಿದಾರರಿಗೆ ಗುರುತು ಪರಿಚಯವಿರುವ ಜಗ್ಗ ಯಾನೆ ತಲವಾರ ಜಗ್ಗ, ಮಹೇಶ್, ಕೀರ್ತನ್, ದೀಕ್ಷಿತ್, ರಾಜೇಶ್ ಹಾಗೂ ಮೋಹಿತ್ ಎಂಬವರು ಅಕ್ರಮ ಕೂಟ ಸೇರಿ ಮನೆ ಮುಂದೆ ಇದ್ದ ಪ್ಲಾಸ್ಟಿಕ್ ಬಕೆಟ್ಗಳನ್ನು ತಲವಾರು, ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಯಿಂದ ಹುಡಿ ಮಾಡಿ ಬಳಿಕ ಜಗ್ಗ ಯಾನೆ ತಲವಾರ ಜಗ್ಗ, ಮಹೇಶ್ ಹಾಗೂ ಕೀರ್ತನ್ ಎಂಬವರು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿಯ ಅಕ್ಕನವರಲ್ಲಿ ಅಭಿ ಎಲ್ಲಿ? ಆತನನ್ನು ಕೊಲ್ಲದೆ ಬಿಡುವುವುದಿಲ್ಲ ಎಂದು ಬೆದರಿಸಿ ಜಗ್ಗನು ಕೈಯಲ್ಲಿದ್ದ ತಲವಾರಿನಿಂದ ಮನೆಯ ಕಿಟಕಿ ಗ್ಲಾಸಿಗೆ ಹೊಡೆದು ಜಖಂಗೊಳಿಸಿದಾಗ, ಪಿರ್ಯಾಧಿದಾರರು ಈ ಬಗ್ಗೆ ವಿಚಾರಿಸಿದಾಗ "ನೀನು ಕೇಳಲು ಯಾರು"? ಎಂದು ಅವಾಚ್ಯ ಶಬ್ದಗಳಿಂದ ಬೈದು ಜಗ್ಗನು ತಲವಾರಿನಿಂದ ಕಡಿಯಲು ಮುಂದಾದಾಗ ಪಿರ್ಯಾಧಿದಾರರು ತಪ್ಪಿಸಿದ ಪರಿಣಾಮ ಪಿರ್ಯಾಧಿದಾರರ ಬಲಕೈಯ ಅಂಗೈಗೆ ತಲವಾರಿನ ಏಟು ತಾಗಿ ರಕ್ತಗಾಯವಾಗಿರುತ್ತದೆ. ಅಲ್ಲದೆ ಜಗ್ಗನೊಂದಿಗೆ ಇದ್ದ ಇತರರು ಕೂಡಾ ಮನೆಯ ಕಿಟಕಿ ಗಾಜುಗಳಿಗೆ ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಯಿಂದ ಹೊಡೆದು ಸುಮಾರು ರೂ 15000/- ರಷ್ಟು ನಷ್ಟ ಉಂಟು ಮಾಡಿದಲ್ಲದೆ ಜಗ್ಗ ಯಾನೆ ತಲವಾರ ಜಗ್ಗನು ಇತರ ಸಹಚರರೊಂದಿಗೆ ಅಕ್ರಮ ಕೂಟ ಸೇರಿ ಮಾರಕ ಆಯುಧಗಳೊಂದಿಗೆ ಬಂದು ಪಿರ್ಯಾಧಿಯ ಅಕ್ಕನ ಮಗನಾದ ಅಭಿ ಯಾನೆ ಅಭಿಲಾಷನನ್ನು ಕೊಲ್ಲುವ ಉದ್ದೇಶದಿಂದ ಮನೆಗೆ ಬಂದು ಕೊಲೆಗೆ ಯತ್ನಿಸಿರುವುದಾಗಿದೆ. ಈ ಹಿಂದೆ ಜಗ್ಗನ ಮಗ ವರುಣನನ್ನು ಅಭಿ ಮತ್ತು ಇತರರು ಸೇರಿಕೊಂಡು ಕೊಲೆ ಮಾಡಿದ್ದು ಇದೇ ದ್ವೇಷವನ್ನು ಇಟ್ಟುಕೊಂಡು ಜಗ್ಗ ಮತ್ತು ಆತನ ಸಹಚರರು ಸೇರಿಕೊಂಡು ಈ ಕೃತ್ಯ ಮಾಡಿರುವುದಾಗಿದೆ.

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು  ಬೊಂದೆಲ್ ಕೃಷ್ಣನಗರ ನಿವಾಸಿಯಾಗಿರುವ ಶ್ರೀ ಗೋಪಿನಾಥ ಗಟ್ಟಿ ರವರಿಗೆ ದಿನಾಂಕ 28-03-2015 ರಂದು 7-00 ಗಂಟೆಯಿಂದ 7-30 ಗಂಟೆಯ ಮಧ್ಯೆ ಮೊಬೈಲ್ ದೂರವಾಣಿಯಿಂದ ಪಿರ್ಯಾದುದಾರರ ಮೊಬೈಲ್ ದೂರವಾಣಿಗೆ ಬೆದರಿಕೆ ಸಂದೇಶಗಳು ಬಂದಿರುತ್ತದೆ, ನಂತರ ಅದೇ ದಿನ ಅದೇ ನಂಬರಿನಿಂದ 9-00 ಗಂಟೆಯಿಂದ 9-30 ಗಂಟೆಯ ಮಧ್ಯೆ ಇಂಗ್ಲೀಷ್ ಅಕ್ಷರದಲ್ಲಿ ಮೆಸೇಜ್ ಮಾಡಿ ಬೆದರಿಕೆ ಕರೆ ಮಾಡಿರುವುದಾಗಿದೆ.

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2015 ರಂದು ಬೆಳಿಗ್ಗೆ ಸುಮಾರು 10-35 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹರೀಶ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-V-7652 ನೇದರಲ್ಲಿ ಸವಾರನಾಗಿ ಹೋಗುತ್ತಿರುವಾಗ ಬಂಟ್ವಾಳ ತಾಲೂಕು, ಫಜೀರು ಗ್ರಾಮದ ಇನ್ಫೋಸಿಸ್ ಗೇಟ್ ಬಳಿಯಲ್ಲಿ ಕಾರು KA-19-AA-8158ನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೇ ಬಲಕ್ಕೆ ತಿರುಗಿಸಿದಾಗ ಈ ಘಟನೆ ಸಂಭವಿಸಿದ್ದು, ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದು ಆತನ ಎಡ ಕೈಯ ಕೋಲು ಕೈಗೆ, ಉಂಗುರದ ಬೆರಳಿಗೆ ಗುದ್ದಿದ ರಕ್ತಗಾಯ, ಬಲಕಾಲಿನ ಕೋಲು ಕಾಲಿಗೆ  ತರಚಿದ ಗಾಯ ಹಾಗೂ ಕುತ್ತಿಗೆಯ ಬಲಭಾಗಕ್ಕೆ ಗುದ್ದಿದ ನೋವಾಗಿದ್ದು ಗಾಯಾಳು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ.

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-3-2015 ರಂದು ಪಿರ್ಯಾದಿದಾರರಾದ ಶ್ರೀ ದಿನೇಶ್ ಗೌಡ ರವರು ಕೆಲಸದ ನಿಮ್ಮಿತ  ಮೂಡಬಿದ್ರೆ ಪೇಟೆಗೆ ಬಂದು ವಾಪಾಸು  ಮನೆ ಕಡೆಗೆ ಹೋಗುವರೇ ಸ್ವರಾಜ್ಯ ಮೈದಾನದ ಬಳಿ ಬಸ್ಸ್ ಕಾಯುತ್ತಿರುವ ಸಮಯ ಮದ್ಯಾಹ್ನ 12-00 ಗಂಟೆಯ ಸಮಯ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಒಂದು  ಬೈಕಿನ ಸವಾರ  ಅತೀ ವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿ ಕೊಂಡು ಬಂದು ಸ್ವರಾಜ್ಯ ಮೈದಾನದಿಂದ ಸ್ವಲ್ಪ ಕೆಳಗೆ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ಕಂಬಕ್ಕೆ ಡಿಕ್ಕಿ ಹೊಡೆದನು ಆ ಸಮಯ  ಪಿರ್ಯಾದಿಯವರು ಹಾಗೂ ಇತರರು ಅಲ್ಲಿಗೆ ಹೋಗಿ ನೋಡಿದಾಗ ಬೈಕ್ ಸವಾರ ಪರಿಚಯದ ಗಣೇಶ್ ಗೌಡ ಎಂಬವನಾಗಿದ್ದು ಆತನ ತಲೆಗೆ ಗಂಬೀರ ರಕ್ತಗಾಯವಾಗಿದ್ದು ಅಲ್ಲದೇ ಬಲ ಕಾಲಿನ ಪಾದದಲ್ಲಿ ರಕ್ತ ಗಾಯವಾಗಿರುತ್ತದೆ. ಕೂಡಲೇ ಆತನನ್ನು  ಅಲ್ಲಿ ಸೇರಿದ ಜನರು ಅರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ ಬಗ್ಗೆ 108 ಅಂಬ್ಯೂಲೆನ್ಸ್ ನಲ್ಲಿ ಮಂಗಳೂರು ಜ್ಯೋತಿ ಕೆ.ಎಂ.ಸಿ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಲಾಗಿದೆ. ಈ ಅಪಘಾತವು ಬೈಕ್ಸವಾರ ಗಣೇಶ್ತನ್ನ ಬಾಬ್ತು  KA 19 EL 9175 ನೇ ದನ್ನು ಅತೀವೇಗ ಹಾಗೂ ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿರುತ್ತದೆ.

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಜೀಜ್ ನಸೀಫ್ ರವರು ಇತ್ತೀಚಿಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಗಂಜಿಮಠಎಂಬಲ್ಲಿರುವ ಅಬ್ದುಲ್ ಕಾದರ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದುಕೂಂಡಿದ್ದು ಅದನ್ನು ದಿನಾಂಕ 30-03-2015 ರಂದು ಪಿರ್ಯಾದಿದಾರರ ಹೆಂಡತಿ ಶ್ರೀ ಮತಿ ಸಮೀನಾ ಅಜೀಜ್ ಎಂಬವರು ಸ್ವಚ್ಚ  ಮಾಡಿ ಬೆಳಗ್ಗೆ  11.00 ಗಂಟೆಗೆ  ಕಸವನ್ನು ಮನೆಯ ಪಕ್ಕದಲ್ಲಿರುವ  ಏರ್ಟೆಲ್  ಕಂಪನಿಯ ಟವರಿನ ಸಮೀಪ ಹಾಕಿ ಬೆಂಕಿ  ಹಚ್ಚಲೆಂದು  ಹೋದಾಗ ಅಲ್ಲಿ ಒಂದು ಹಳದಿ ಬಣ್ಣದ ಹಳೇಯದಾದ ಪ್ಲಾಸ್ಟಿಕ್  ತೊಟ್ಟೆಯಲ್ಲಿ  7-8 ಬಾಟಲಿಗಳನ್ನು  ಮತ್ತು ಎರಡು ತಲವಾರುಗಳನ್ನು ಪ್ಲಾಸ್ಟಿಕ್  ತೊಟ್ಟೆಯಲ್ಲಿ ಸುತ್ತಿಟ್ಟಿರುವುದನ್ನು ಕಂಡು ಪಿರ್ಯಾದಿದಾರರಿಗೆ ವಿಚಾರ ತಿಳಿಸಿದ್ದು, ರಾತ್ರಿ ಮನೆಗೆ ಬಂದ ಪಿರ್ಯಾದಿದಾರರು ಅದನ್ನು ನೋಡಿ ಯಾರೋ ಕಿಡಿಗೇಡಿಗಳು ಎಲ್ಲೋ, ಯಾವೂದೋ ದುಷ್ಕೃತ್ಯವೆಸಗುವ ಉದ್ದೇಶದಿಂದ  ಅನುಮಾನಸ್ಪದ  ರೀತಿಯಲ್ಲಿ ಸ್ಫೋಟಕವಾಗಿ  ಬಳಸಲು ಪೆಟ್ರೂಲ್ ತುಂಬಿದ ಬಾಟಲಿಗಳನ್ನು ಮತ್ತು  ತಲವಾರುಗಳನ್ನು  ತಂದಿರಿಸಿರುವುದನ್ನು  ಕಂಡು ಠಾಣೆಗೆ  ದೂರು ನೀಡಿರುವುದಾಗಿದೆ.

6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2015 ರಂದು ಲಾರಿ ನಂಬ್ರ ಎಪಿ-29-ಟಿಬಿ-5932 ನೇದನ್ನು ಅದರ ಚಾಲಕ ಎನ್ ಹೆಚ್ -66 ರಲ್ಲಿ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಯಿಂದ ಸುರತ್ಕಲ್ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಸಂಜೆ 07.30 ಗಂಟೆಗೆ ಕುಳಾಯಿ ಸುನೀಲ್ ಬಾರ್ ನಿಂದ ಸ್ವಲ್ಪ ಮುಂದೆ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಢಿಕ್ಕಿಪಡಿಸಿದ ಪರಿಣಾಮ ಅವರ ತಲೆ ಕಾಲಿಗೆ ಗಂಭೀರ ತರಹದ ಗಾಯವಾಗಿ ಫಿರ್ಯಾದಿದಾರರು ಅವರನ್ನು ಸುರತ್ಕಲ್ ಪದ್ಮವತಿ ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮ್ಯತಪಟ್ಟಿರುವುದಾಗಿದೆ.

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭರತ್ ಕುಮಾರ್ ರವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 30-03-2015 ರಂದು ಪಿರ್ಯಾದಿದಾರರು ಮಂಗಳೂರು ನಗರದ ನೆಹರು  ಮೈದಾನದಲ್ಲಿ ದಿನಾಂಕ 29-03-2015 ರಂದು ನಡೆದಿದ್ದ ರಾಮೋತ್ಸವ ಕಾರ್ಯಕ್ರಮದ  ರಾವಣ ಸಂಹಾರದ   ಬಗ್ಗೆ ಅಲ್ಲಿ  ಬಿದಿದ್ದ ಸುಡು ಮದ್ದಿನ ತ್ಯಾಜ್ಯ ಹಾಗೂ  ಇತರ ಕಸಕಡ್ಡಿಗಳನ್ನು ಸ್ವಚ್ಚ  ಮಾಡುವ ಸಲುವಾಗಿ ಸಮಯ ಬೆಳಿಗ್ಗೆ 10-15  ಗಂಟೆಯ ವೇಳೆಗೆ ಸದ್ರಿ ಸ್ಥಳಕ್ಕೆ  ಬಂದಿದ್ದು, ಸದ್ರಿ ಸ್ಥಳದಲ್ಲಿ  ಕೆಲಸದ ಉಸ್ತುವಾರಿ  ಬಗ್ಗೆ  ಗುತ್ತಿಗೆ ಆಧಾರದಲ್ಲಿ ನೇಮಿಸಿದ್ದ ಶ್ರೀಮತಿ ಶಶಿಕಲಾ  ಹಾಗೂ  ಟೆಂಪೋ ಚಾಲಕ  ಸುನೀಲ್‌  ಎಂಬವರು   ಇದ್ದು,   ಸದ್ರಿ ಸ್ಥಳದಲ್ಲಿ   ಕ್ಲೀನಿಂಗ್ಕೆಲಸವನ್ನು ಮಾಡಿಸಿಕೊಂಡಿದ್ದಾಗ, ಸದ್ರಿ ಸ್ಥಳಕ್ಕೆ ಸಮಯ 10-30 ಗಂಟೆಯ ವೇಳೆಗೆ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಪಾಂಡೇಶ್ವರ ಶಿವನಗರದ ವಾಸಿಯಾದ ಗಣೇಶ @ ಬಬ್ಬ  ಎಂಬಾತನು ಒಮ್ಮೆಲೇ ಪಿರ್ಯಾದಿದಾರರು ಹಾಗೂ ಇತರರು ಕೆಲಸ ಮಾಡಿಕೊಂಡಿದ್ದಲ್ಲಿಗೆ ಬಂದು, ಪಿರ್ಯಾದಿದಾರರನ್ನು  ಉದ್ದೇಶಿಸಿ "ಇ ಮಲ್ಲ ಇಂಜಿನಿಯಾರ, ನಿಕ್ಕ್  ಕೂಡಾ ಬೆಲೆಗ್ಅಸಿಸ್ಟೆಂಟ್ಜನ ಬೋಡಾ" ಎಂದು ಅವಾಚ್ಯವಾಗಿ ಬೈಯ್ದಿದ್ದು, ಆ ವೇಳೆಯಲ್ಲಿ ಆತನಲ್ಲಿ ಪಿರ್ಯಾದಿದಾರರು ಯಾಕೆ ವಿನಾ ಕಾರಣ ಇಲ್ಲಿ ಬಂದು ಜಗಳಕ್ಕಿಳಿಯುತ್ತಿದ್ದಿಯಾ ಎಂದು ಕೇಳಿದಾಗ, ಆತನು ಪಿರ್ಯಾದಿದಾರರ  ಕೆಲಸದ ಸುಪರ್ವೈಸರ್ಆದ ಶ್ರೀಮತಿ ಶಶಿಕಲಾ ಇವರನ್ನು ಉದ್ದೇಶಿಸಿ "ಈಲಾ ಮಲ್ಲಾ ಇಂಜಿನಿಯರಾ ? ಎಂಬುದಾಗಿ ಬೈದು ಈ ಮೂಲು ಬೇಲೆ ಮಲ್ಪೆರೆ ಬಲ್ಲಿಎಂಬುದಾಗಿ ಆಕೆಯನ್ನು ಗದರಿಸಿ, ವಾಪಾಸು ಪಿರ್ಯಾದಿದಾರರ ಬಳಿಗೆ ಬಂದು ಪಿರ್ಯಾದಿದಾರರ ಅಂಗಿಯ ಕಾಲರ್ಪಟ್ಟಿ ಹಿಡಿದು  ಕೈಯಿಂದ  ಎಡಕೆನ್ನೆಗೆ  ಹೊಡೆದು "ನಿನನ್ಜೀವ ಸಹಿತ ಬುಡ್ಪುಜಿಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ, ನಂತರ  ಟೆಂಪೋ  ಡ್ರೈವರ್ಬಳಿಗೆ ಹೋಗಿಅವರನ್ನು ಉದ್ದೇಶಿಸಿ, "ಮರ್ಯಾದೆಡ್ಗಾಡಿನ್ದೆಪ್ಪು" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದುಟೆಂಪೋದ ಗೇರ್ಲಿವರ್ನ್ನು ಬೆಂಡ್ಮಾಡಿನಂತರ ಟೆಂಪೋದ ವಯರ್ನ್ನು ಕಿತ್ತು  ತೆಗೆದು  ಹಾಕಿದ್ದುಇದರಿಂದ ಅಂದಾಜು ರೂಪಾಯಿ 10,000/- ನಷ್ಟವುಂಟು ಮಾಡಿರುತ್ತಾರೆಪಿರ್ಯಾದುದಾರರು ನಿರ್ವಹಿಸಿಕೊಂಡಿದ್ದ ಸರಕಾರಿ ಕರ್ತವ್ಯಕ್ಕೆ ಆರೋಪಿ ಗಣೇಶ @ ಬಬ್ಬ ತೊಂದರೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು, ಪಿರ್ಯಾದಿದಾರರ ಜತೆಗಿದ್ದ  ಕೆಲಸಗಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು, ತೊಂದರೆ ನೀಡಿರುವುದಾಗಿದೆ.

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯೋಗೀಶ್ ಶೆಟ್ಟಿ ರವರು ಮಂಗಳೂರು  ವೆಲನ್ಸಿಯಾ ಜೆರೋಸಾ ಹೈಸ್ಕೂಲ್ ಬಳಿ ಇರುವ ಕುನಿಲ್ ನಲಪಾಡ್ ಪ್ಯಾಲೆಸ್ ನಲ್ಲಿ ವಾಚ್ ಮೆನ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 30-03-2015 ರಂದು 20-45 ಗಂಟೆಗೆ ಪ್ಲಾಟಿನ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕರ್ತವ್ಯದಲ್ಲಿ ತಿರುಗಾಡುತ್ತಿದ್ದ ಸಮಯ ಆರೋಪಿಗಳಾದ ಹಫೀಝ್, ಜಲಾಲ್, ಜಸಿಂತ್ ಹಾಗೂ ಇನ್ನೋರ್ವ ಯುವಕ ಬಂದು, ಫಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ "ನೀನು ಫ್ಲಾಟಿನ ಮಾಲಕನ, ಫ್ಲಾಟನಲ್ಲಿ ರಾತ್ರಿ ಸಮಯ ತಿರುಗಾಡಬೇಡಿ ಎಂದು ಹೇಳಲು ನೀನು ಯಾರು? " ಎಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಹಫೀಝ್ ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಫಿರ್ಯಾದುದಾರರ ಬಲ ಹಾಗೂ ಎಡ ಹಣೆಯ ಭಾಗಕ್ಕೆ ಎಡ ಕೈಯ ಮೊಣಗಂಟಿನ ಭಾಗಕ್ಕೆ, ಎಡ ತೊಡೆಯ ಭಾಗಕ್ಕೆ ಯದ್ವ ತದ್ವಾ ಹಲ್ಲೆ ಮಾಡಿರುತ್ತಾರೆ. "ಇನ್ನೊಮ್ಮೆ ನಮ್ಮ ವಿಷಯಕ್ಕೆ ಬಂದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿಗಳು 4 ಜನರೂ ತಡ ರಾತ್ರಿ ಸಮಯದಲ್ಲಿ ಫ್ಲಾಟಿನ ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿನಾ ಕಾರಣ ತಿರುಗಾಡುತ್ತಿವರನ್ನು ತಿರುಗಾಡಬೇಡಿ ಎಂದು ಫಿರ್ಯಾದುದಾರರು ಹೇಳಿದ ದ್ವೇಷದಿಂದ ಆರೋಪಿಗಳು ಈ ಕೃತ್ಯ ಮಾಡಿರುವುದಾಗಿದೆ. ಈ ಬಗ್ಗೆ ಫಿರ್ಯಾದುದಾರರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 30-3-2015 ರಂದು ಫಿರ್ಯಾದಿದಾರರಾದ ಶ್ರೀ ಮೇಘರಾಜ್ ರವರು ಎಂದಿನಂತೆ ಕೆಲಸ ಬಿಟ್ಟು ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 7-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಮೈನ್ರೋಡ್ಭಗವತೀ ಹಾರ್ಡ್ವೇರ್ ಅಂಗಡಿಯ ಬಳಿಗೆ ತಲುಪುತ್ತಿದ್ದಾಗ ಒಬ್ಬ ನೋಡಿ ಪರಿಚಯವಿರುವ ಯುವಕನು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೈದು ಬೆದರಿಸಿ ಹೋದವನು ನಂತರ ಮತ್ತೆ ಆತನು ತಿರುಗಿ ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ಸೆಂಟ್ರಲ್ ಮಾರ್ಕೆಟಿನಲ್ಲಿ ತರಕಾರಿ ಸಾಮಾಗ್ರಿಗಳನ್ನು ಅನ್ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ  ದಿನಾಂಕ 30-03-2015 ರಂದು ಕೆಲಸ ಮುಗಿಸಿ ಮನೆಗೆ ಹೋಗುವರೇ ಮೈದಾನ ರಸ್ತೆಯಲ್ಲಿರುವ ಏರ್ ಲೈನ್ಸ್ ಹೊಟೇಲಿನ ಬಳಿ ತಲುಪಿದಾಗ ಸಮಯ ಸುಮಾರು ಬೆಳಿಗ್ಗೆ 5:30 ಗಂಟೆಗೆ ಫಿರ್ಯಾದಿದಾರರ ಮುಖ ಪರಿಚಯವಿರುವ ಹೆಸರು ವಿಳಾಸ ತಿಳಿಯದ 4 ಜನ ಯುವಕರು ಅಕ್ರಮವಾಗಿ ತಡೆದು ನಿಲ್ಲಿಸಿ ಫಿರ್ಯಾದಿದಾರರಲ್ಲಿ ತಂಬಾಕು ಇದೆಯಾ ಎಂದು ಕೇಳಿದ್ದು, ಅದಕ್ಕೆ ಫಿರ್ಯಾದಿದಾರರು ಇಲ್ಲ ಎಂದು ಹೇಳಿದಾಗ ಅವರಲ್ಲಿ ಇಬ್ಬರು ಫಿರ್ಯಾದಿದಾರರ ಕೈಯನ್ನು ಹಿಡಿದು, ಒಬ್ಬನು ಫಿರ್ಯಾದಿದಾರರ ಶರ್ಟಿನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಹಾಗೂ ರೂ 900/- ಕಿತ್ತುಕೊಂಡಿದ್ದು, ಇನ್ನೊಬ್ಬ ವ್ಯಕ್ತಿ ಕೈಯಿಂದ ಫಿರ್ಯಾದಿದಾರರ ಮುಖಕ್ಕೆ ಹೊಡೆದು, ಚೂರಿಯಿಂದ ಮುಖಕ್ಕೆ ತಿವಿದು ರಕ್ತ ಗಾಯಗೊಳಿಸಿದ್ದು, ಈ ಸಮಯ ಫಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಲ್ಲಿದ್ದ ಕೆಲವು ಜನ ಹಾಗೂ ಫಿರ್ಯಾದಿದಾರರ ತಮ್ಮ ಆಸೀಫ್ ರಿಕ್ಷಾದಲ್ಲಿ ಫಿರ್ಯಾದಿದಾರರನ್ನು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದಾಗಿದೆ.

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿನ್ನಿ ಡಿ'ಸೋಜಾ ರವರ ಮನೆಯ ಪಕ್ಕದಲ್ಲಿ ಅವರ ತಾಯಿ ಹಿಲ್ಡಾ ಕ್ಯಾಸ್ಟಲಿನೋ ರವರ ಮನೆಯಿದ್ದು  ಪಿರ್ಯಾದಿದಾರರ ತಾಯಿಯವರು ಕಳೆದ 15 ದಿನಗಳಿಂದ ಬಜ್ಪೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದು  ಆ ಸಂದರ್ಬದಲ್ಲಿ  ಪಿರ್ಯಾದಿದಾರರು ಮನೆ ನೋಡಿಕೊಳ್ಳುತ್ತಿದ್ದು ದಿನಾಂಕ: 29.03.2015 ರಂದು ಸಂಜೆ 07.00 ಗಂಟೆಗೆ ಮನೆಯ ಕೆಲಸದ ಹೆಂಗಸು ಬಂದು ಕೆಲಸ ಮುಗಿಸಿ ಅವರು ಮನೆಗೆ ಬೀಗ ಹಾಕಿ  ಹೋಗಿದ್ದು ದಿನಾಂಕ: 29.03.2015 ರಾತ್ರಿ ಸಮಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿರುವುದು ಈ ದಿನ ದಿನಾಂಕ: 30.03.2015 ರಂದು ಬೆ: 9.00ಗಂಟೆಗೆ  ಪಿರ್ಯಾದಿದಾರರು ನೋಡಿದಾಗ ತಿಳಿದು ಬಂತು ನಂತರ ಮನೆಯೊಳಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ ತಾಯಿಯ ಬಾಬ್ತು ಒಂದುವರೆ ಪವನ್‌‌ ತೂಕದ ಸುಮಾರು 20000/- ರೂಪಾಯಿ ಬೆಲೆಬಾಳುವ ಚಿನ್ನದ ನೆಕ್ಲೇಸ್‌‌  ಹಾಗೂ ಇತರ ದಾಖಲಾತಿಗಳು ಕಳವಾಗಿರುವುದಾಗಿದೆ.

CPC/WPC -2014 First Provisional Selection List

 

To view the First Provisional Selection List, click below link.

https://s3-ap-southeast-1.amazonaws.com/mlrcity/PROCEEDINGS++PROVISIONAL+LIST.pdf

 

To view the result sheet, click below link.

 https://s3-ap-southeast-1.amazonaws.com/mlrcity/MERIT+LIST.pdf

Monday, March 30, 2015

Daily Crime Reports : 30-03-2015

ದೈನಂದಿನ ಅಪರಾದ ವರದಿ.

ದಿನಾಂಕ 30.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

9

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2015 ರಂದು ರಾತ್ರಿ 21-45 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸಚಿನ್ ಎಂಬವರು ತನ್ನ ಜಿನಸು ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 28-03-2015 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಲ್ಲಿರುವ ಸಮಯ ಪಕ್ಕದ ಸೆಲೂನ್ ಅಂಗಡಿಯ ಶ್ರೀ ರಮೇಶ್  ಎಂಬವರು ಪೋನ್ ಕರೆ ಮಾಡಿ ನಿಮ್ಮ ಅಂಗಡಿಯ ಶಟ್ಟರ್ ಒಂದು ಕಡೆ ತೆರೆದಿದ್ದು, ಬಂದು ನೋಡಿ ಎಂದು ತಿಳಿಸಿದಾಗ ಪಿರ್ಯಾದುದಾರರು ತನ್ನ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶಟ್ಟರ್ ನ ಒಂದು ಕಡೆ ಬೀಗ ಮುರಿದಿದ್ದು, ಇನ್ನೊಂದು ಕಡೆಯ ಬೀಗವನ್ನು ಕೀ ಯ ಸಹಾಯದಿಂದ ತೆಗೆದು ನೋಡಿದಾಗ ಅಂಗಡಿಯಲ್ಲಿದ್ದ, ಚಾಕಲೇಟ್ , ಕೇಕ್ , ಜ್ಯೂಸ್ ಮತ್ತು ಇತರ ವಸ್ತುಗಳು ಕಳವಾಗಿದ್ದು, ಕಳವಾದ ಸೊತ್ತಿನ  ಅಂದಾಜು ಬೆಲೆ 10,000/- ಆಗಬಹುದು.

 

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2015 ರಂದು ಮಂಗಳೂರು ತಾಲೂಕು ದೇರೆಬೈಲ್ ಗ್ರಾಮದ ಮಾಲೆಮಾರ್ ನೆಕ್ಕಿಲಗುಡ್ಡೆ ಎಂಬಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಆಯೋಜಿಸಲಾದ ನಾಟಕವನ್ನು ನೋಡುವರೇ ಪಿರ್ಯಾದುದಾರರಾದ ಶ್ರೀ ಲೋಹಿತ್ ರವರು ಬಂದಿದ್ದು, ಅಲ್ಲಿ ಅವರಿಗೆ ಸ್ನೇಹಿತರಾದ ಮಿಥುನ್, ರೀತು @ ರಿತೇಶ್, ಯತೀಶ್ ಎಂಬವರು ಇದ್ದರು, ರಾತ್ರಿ ಸುಮಾರು 12-30 ಗಂಟೆಗೆ ಕಾರ್ಯಕ್ರಮ ಮುಗಿದು ಎಲ್ಲ ಸಾರ್ವಜನಿಕರು ತೆರಳಿದ್ದು ಪಿರ್ಯಾದುದಾರರು ಮತ್ತು ಆತನ ಸ್ನೇಹಿತರು ಅಲ್ಲೇ ನಿಂತು ಮಾತಾನಾಡುತ್ತಿದ್ದರು, ಅಲ್ಲಿಗೆ ಕಾರ್ಯಕ್ರಮ ಆಯೋಜಿಸಿರುವ ಪ್ರಭಾಕರ್ ನೆಕ್ಕಿಲಗುಡ್ಡೆ, ನಿಶಾಂತ್ ಕಾವೂರು ಮತ್ತು ನೋಡಿ ಗುರುತಿರುವ ಮೂವರು ಬಂದರು, ಅ ಸಮಯ ರಿತೇಶ್ ಪ್ರಭಾಕರ್ ಬಳಿ ತನ್ನಿಂದ ಈ ಹಿಂದೆ ಸಾಲವಾಗಿ ಪಡೆದ ಹಣವನ್ನು ವಾಪಾಸು ನೀಡದೇ ಇದ್ದ ಬಗ್ಗೆ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಯಿತು, ಆಗ ಪ್ರಭಾಕರ್ ರವರು ಅಲ್ಲಿಂದ ಸ್ವಲ್ಪ ದೂರ ಹೋಗಿ ಪುನಃ ಅವರ ಬಳಿಗೆ ಬಂದು ತನ್ನ ಕೈಯಲ್ಲಿದ್ದ ತಲವಾರಿನಿಂದ ರಿತೇಶನಿಗೆ ಕಡಿದಾಗ ಜೊತೆಗಿದ್ದ ನಿಶಾಂತ್ ಕೂಡ ಆತನ ಕೈಯಲ್ಲಿದ ತಲವಾರಿನಿಂದ ಕಡಿದನು, ಅಷ್ಟರಲ್ಲಿ ಜೊತೆಯಲ್ಲಿದ್ದ ಎಲ್ಲರೂ ರಿತೇಶನಿಗೆ ಕಡಿಯಲಾರಂಭಿಸಿದಾಗ ಪಿರ್ಯಾದುದಾರರು ಮತ್ತು ಆತನ ಜೊತೆಗಿದ್ದ ಮಿಥುನ್, ಯತೀಶ್ ರವರು ಅಡ್ಡ ತಡೆದಾಗ ಅವರಿಗೂ ಕೂಡಾ ಕಡಿದ ಏಟು ಬಿತ್ತು ಪಿರ್ಯಾದುದಾರರ ಬಲ ಕೈ ತಟ್ಟಿಗೆ, ಬಲಭುಜಕ್ಕೆ, ಯತೀಶ್ ಎಂಬವರಿಗೆ ಕೈ, ಕಾಲಿಗೆ, ಮಿಥುನ್ ರವರಿಗೆ ಬೆನ್ನಿಗೆ, ಕಣ್ಣಿನ ಬದಿಗೆ, ಕುತ್ತಿಗೆಯ ಬಲ ಬದಿಗೆ ಗಾಯಗಳಾದವು, ರಿತೇಶನಿಗೆ ಹೊಟ್ಟೆಯ ಭಾಗಕ್ಕೆ ತೀವ್ರವಾದ ಗಾಯವಾಗಿದ್ದು, ಗಾಯದ ತೀವ್ರತೆ ತಾಳಲಾರದೇ ಸ್ಥಳದಲ್ಲಿಯೇ ಬಿದ್ದನು, ಇದನ್ನು ಗಮನಿಸಿದ ಹಲ್ಲೆಕೋರರು ತಮ್ಮಲ್ಲಿದ್ದ ಆಯುಧ ಸಮೇತ ಪರಾರಿಯಾಗಿದ್ದು, ರಿತೇಶ್ ಸ್ಥಳದಲ್ಲಿಯೇ ಮೃತನಾಗಿರುತ್ತಾನೆ, ಗಾಯಾಳುಗಳ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಘಟನೆಗೆ ಮೃತ ರಿತೇಶ್ ಮತ್ತು ಪ್ರಭಾಕರನ ಜೊತೆಗಿದ್ದ ಹಣದ ವ್ಯವಹಾರವೇ ಆಗಿರುತ್ತದೆ ಈ ಘಟನೆಯು ರಾತ್ರಿ ಸುಮಾರು 1-30 ಗಂಟೆಗೆ ಆಗಿರಬಹುದು.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎ. ಬದ್ರುದ್ದೀನ್ ರವರು ತನ್ನ ಬಾಬ್ತು ಮೊಟಾರ್ ಸೈಕಲ್ ಕೆಎ19-ಇಕೆ-2004 ನೇಯದರಲ್ಲಿ ದೇರಳಕಟ್ಟೆಯಿಂದ ಮುಡಿಪು ಕಡೆಗೆ ಸವಾರಿ ಮಾಡಿಕೊಂಡು ದಿನಾಂಕ 27.03.2015 ರಂದು ಸಂಜೆ 5:45 ಗಂಟೆಗೆ ಬಂಟ್ವಾಳ ತಾಲೂಕು, ಫಜೀರು ಗ್ರಾಮದ ಕಂಬ್ಳಪದವು ದೇವಿನಗರ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಮುಡಿಪು ಕಡೆಯಿಂದ ಕೊಣಾಜೆ ಕಡೆಗೆ ಹಿರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಅದರ ಸವಾರ ಶೇಖ್ ಮುಸ್ತಾಕ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಕ್ಕೆ ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಬಲಕೈ ನಡುಬೆರಳಿಗೆ ಬೆನ್ನಿನ ಭುಜಕ್ಕೆ ಕೀಲು ಮುರಿತದ ಗಾಯ ಹಾಗೂ ಹೊಟ್ಟೆಗೆ ಬೆನ್ನಿಗೆ ಗುದ್ದಿದ ನೋವು ಬಲಕಾಲಿನ ಮಂಡಿಗೆ ರಕ್ತಗಾಯವಾಗಿದ್ದು ಆರೋಪಿಗೆ ಬಲಕಾಲಿನ ಪಾದಕ್ಕೆ ಕೀಲು ಮುರಿದ ಗಾಉ ಸೊಂಟಕ್ಕೆ ಮತ್ತು ಬಲಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿ ಕೊಡಿಯಾಲ್ ಬೈಲು ಯೆನಪೋಯ ಆಸ್ಪತ್ರೆಯಲ್ಲಿ ಮತ್ತು ಆರೋಪಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಮದ್ಯಾಹ್ನ ಸುಮಾರು 12-15 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ ರವರು ಕಾರ್ನಾಡು ಸಿ.ಎಸ್.ಐ ಶಾಲೆಯಲ್ಲಿ ಕ್ಲಾಸು ಬಿಟ್ಟ ನಂತರ ಕಾರ್ನಾಡು ಗ್ರಾಮದ, ಕಾರ್ನಾಡು ಗಾಂಧಿ ಮೈದಾನದ ಬಳಿ ಇರುವಾಗ, ಅದೇ ಕ್ಲಾಸಿನ ವಿದ್ಯಾರ್ಥಿನಿ ಕೂಡಾ ಬಂದಿದ್ದು, 'ನೀನು ಕ್ಲಾಸಿನಲ್ಲಿ ಯಾಕೆ ಕೂಗಿದ್ದು' ಎಂದು ಸಮಾಧಾನ ಪಡಿಸುತ್ತಿರುವ ಸಮಯ ಸುಮಾರು 13-45ರ ವೇಳೆಗೆ 4 ಜನ ಯುವಕರು ಬಂದು, ಕೈಯಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಕೆಎ-19--6061ನೇ ನಂಬ್ರದ ಆಟೋ ರಿಕ್ಷಾದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಿಸಿಕೊಂಡು ಕಾರ್ನಾಡು ದರ್ಗಾದ ಬಳಿಗೆ ಹೋಗಿ , ರಿಕ್ಷಾದಿಂದ ಎಳೆದುಹಾಕಿದ್ದು, ಅದೇ ಸಮಯಕ್ಕೆ ಕೆಎ-20-ಎನ್-7277 ನೇ ಮಾರುತಿ ಕಾರಿನಲ್ಲಿ , ಹಾಗೂ ಬೈಕ್ ಸ್ಕೂಟಿರಿನಲ್ಲಿ ಬಂದ ಸುಮಾರು 20 ರಷ್ಟು ಯುವಕರು ಪಿರ್ಯಾದಿದಾರರ ಶರ್ಟ್ಹಿಡಿದು ಕೈಯಿಂದ ತಲೆಗೆ, ಬೆನ್ನಿಗೆ, ಎದೆಗೆ ಹೊಡೆದು, ಕಾಲಿನಿಂದ ತುಳಿದು ಅವಾಚ್ಯ ಶಭ್ದಗಳಿಂದ ಬೈದು, ಹಲ್ಲೆ ನಡೆಸಿದವರಲ್ಲಿ ಪರಿಚಯವಿದ್ದು, ಅವರಲ್ಲಿ ಜಮಾಲ್, ಸಿರಾಜ್, ಶಾಹಿದ್, ರಿಫಾನ್, ಶಮೀರ್, ಅಲ್ಪಾಜ್, ರಜಾಕ್, ತೌಸಿಕ್, ಶಾಕಿರ್, ಶರೀಫ್, ಮುಸ್ತಾಫ, ತೌಸಿಫ್ ಕೊಲ್ನಾಡು ಹಾಗೂ ಗಡ್ಡ ಶರೀಫ್ ಆಗಿದ್ದು ಇತರರನ್ನು ಕೂಡಾ ನೋಡಿದರೆ ಗುರುತಿಸುವುದಾಗಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಪಿರ್ಯಾದಿದಾರರಿಗೆ ಆರೋಪಿಗಳು ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿ ಕೈಯಿಂದ ಮತ್ತು ಮರದ ರೀಪಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ವಿದ್ಯಾರ್ಥಿನಿ ಯು ಶಾಲೆ ಬಿಟ್ಟ ಮೇಲೆ ಮದ್ಯಾಹ್ನ 13-45 ಗಂಟೆ ಸಮಯಕ್ಕೆ ಕಾರ್ನಾಡು ಗ್ರಾಮದ ಮೀನು ಮಾರ್ಕೆಟ್ ಬಳಿಯ ಜೆರಾಕ್ಸ್ ಅಂಗಡಿ ಬಳಿಯಲ್ಲಿ ಹೊರಗಡೆ ಇರುವಾಗ, ಪಿರ್ಯಾದಿದಾರರ ಶಾಲೆಯ ಕ್ಲಾಸ್ಮೇಟ್ ಹುಡುಗ ವಿದ್ಯಾರ್ಥಿನಿಯನ್ನು ಕೈಯಿಂದ ಎಳೆದು ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ ಪ್ರವೀಣ್ ಆರ್ ಕೋಟ್ಯಾನ್ ವಾಸ: ಅಳಿಯೂರು. ಎಂಬವನು ಆತನ ಮೊಬೈಲ್ ದೂರವಾಣಿಯಿಂದ ಬ್ರೇಕಿಂಗ್ ನ್ಯೂಸ್ 'ಡಿ.ಕೆ.ರವಿ ಸಾವಿನಿಂದ ಮನನೊಂದು ಸಿ.ಎಂ.ಸಿದ್ದರಾಮಯ್ಯ ಹೃದಯಾಘಾತದಿಂದ ಅಸ್ಪತ್ರೆಯಲ್ಲಿ ನಿಧನ ಹಲವು ಗಣ್ಯರ ಸಂತಾಪ' ಎಂಬುದಾಗಿ ಸಿ.ಎಂ.ಸಿದ್ದರಾಮಯ್ಯ ರವರ ಭಾವಚಿತ್ರದ ಜೊತೆಯಲ್ಲಿ ಲೈವ್ ಪಬ್ಲಿಕ್ ಟಿವಿ ದಿನಾಂಕ 23-3-2015 ಎಂದು ಟಿವಿ ಯಲ್ಲಿ ವರದಿ ಬಂದಿದೆ ಎನ್ನುವ ರೀತಿ ಸುಳ್ಳು ವರದಿಯನ್ನು ಸೃಷ್ಠಿಸಿ ವಾಟ್ಸ್ ಅಪ್ ಮೂಲಕ ಜನರಿಗೆ ಪ್ರಚಾರ ಮಾಡಿ ಗೊಂದಲ ಉಂಟು ಮಾಡಿರುವುದಾಗಿ ಪಿರ್ಯಾದಿದಾರರಾದ ಶ್ರೀ ಸುಂದರ ಪೂಜಾರಿ ಉಪಾಧ್ಯಕ್ಷರು, ಹಿಂದುಳಿದ ವರ್ಗಗಳ ವಿಭಾಗ ಮೂಡಬಿದ್ರೆ ಎಂಬವರು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಹುಡುಗಿಯು ಪರಿಶಿಷ್ಠ ಜಾತಿಯ ಆದಿದ್ರಾವಿಡ ಜಾತಿಗೆ ಸೇರಿದವರಾಗಿದ್ದು ಪಿರ್ಯಾದುದಾರರ ಜಾತಿಯವರೇ ಆದ ಆರೋಪಿ ಅನಿಲ್ಎಂಬಾತನು ಪಿರ್ಯಾದುದಾರರನ್ನು ಅವರ ವಾಸದ ಮನೆಯಾದ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿಂದ  ವಿವಾಹವಾಗುವುದಾಗಿ ಪುಸಲಾಯಿಸಿ ಮಂಗಳೂರು ತಾಲೂಕು ಅಲಂಗಾರು ಎಂಬಲ್ಲಿಗೆ  ದಿನಾಂಕ; 01-01-2015 ರಂದು ಕರೆದುಕೊಂಡು ಬಂದು ಸದ್ರಿ ದಿನ ರಾತ್ರಿ ವೇಳೆಯಿಂದ ದಿನಾಂಕ: 15-02-2015 ರ ರಾತ್ರಿ ಅವದಿಯಲ್ಲಿ ಪಿರ್ಯಾದುದಾರರಿಗೆ ಅತ್ಯಾಚಾರವೆಸಗಿರುವುದಲ್ಲದೇ ದಿನಾಂಕ: 15-02-2015 ರಂದು ಆರೋಪಿಯು ಪಿರ್ಯಾದುದಾರರಿಗೆ ಅವಾಚ್ಯ ಶಬ್ಬದಿಂದ ಬೈದು ಅವಮಾನಪಡಿಸಿ ಕೈಯಿಂದ ಬೆನ್ನಿಗೆ ಥಳಿಸಿ ವಾಸ್ತವ್ಯವಿದ್ದ ಅಲಂಗಾರು ಎಂಬಲ್ಲಿಯ ಮನೆಯಿಂದ ಹೊರಗೆ ಹಾಕಿರುವುದಾಗಿ ಆರೋಪಿಯ ಈ ಕೃತ್ಯದಿಂದ ಪಿರ್ಯಾದು ದಾರರು ಖಿನ್ನತೆಗೊಳಗಾಗಿ ತೀರಾ ನೊಂದುಕೊಂಡಿರುವುದಾಗಿದೆ.

 

8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.03.2015 ರಂದು  ಸಮಯ ಸುಮಾರು ಮದ್ಯಾಹ್ಣ  12.45 ಗಂಟೆಗೆ ಸ್ಕೂಟರ್ ನಂಬ್ರ  KA19-EE-1635  ನ್ನು ಅದರ ಸವಾರ ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಾ ಬಿಕರ್ನಕಟ್ಟೆ ಮನೋಹರ್ ಹೋಟೆಲ್ ಎದುರು  ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ (ಪ್ರಾಯ 70 ವರ್ಷ) ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಸೊಂಟದ ಬಲಭಾಗ ಹಾಗೂ ಎದೆಯ ಬಲಭಾಗಕ್ಕೆ ಗುದ್ದಿದ ನೋವು ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.

 

9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16/03/2015 ರಂದು ಸಮಯ ಸುಮಾರು 15:30 ಗಂಟೆಗೆ  ಫಿರ್ಯಾದುದಾರರಾದ ಶ್ರೀ ಆರ್. ಎಶ್ವರಾಜ್ ರವರ   ಬಾಬ್ತು  ಸ್ಕೂಟರ್ ನಂಬ್ರ KA-19-EC-4959ನೇ ದರಲ್ಲಿ ಫಿರ್ಯಾದುದಾರರ  ಮಗ ಸಾಯಿ ನಾರಯಣ್(22) ರವರು  ಬಿಶಪ್ ವಿಕ್ಟರ್ ರಸ್ತೆಯಿಂದ ಕೆ ಎಮ್ ಸಿ ಅತ್ತಾವರ ಕಡೆಗೆ ಹೋಗುವರೇ , ಎದುರುಗಡೆಯಿಂದ ಸ್ಕೂಟರ್ ನಂಬ್ರ KL-14-N-291 ನೇ ದರ ಸವಾರ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್ ಅನ್ನು ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ  ಮಗ  ಸಾಯಿ ನಾರಯಣ್(22) ರವರ   ಸ್ಕೂಟರಗೆ ಡಿಕ್ಕಿ ಮಾಡಿದ ಪರಿಣಾಮ  ಕಾಂಕ್ರಿಟ್ ರಸ್ತೆಗೆ ಬಿದ್ದು ಪ್ರಜ್ನಾಹಿನ ಸ್ತಿತಿಯಲ್ಲಿ  ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿರುವುದಾಗಿದೆ.

 

10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಪೆಲ್ಸಿ ಡಿಸೋಜಾ ರವರ ಮಗನಾದ ರೋಹನ್ ಡಿಸೋಜಾ ಎಂಬವರು ಸಹಸವಾರರಾಗಿ ವರ್ಜಿಲ್ ಎಂಬವರು ಸವಾರರಾಗಿ ಕೆಎ- 19 ಈಎಲ್- 7940 ನೇ ದ್ವಿಚಕ್ರ ವಾಹನವನ್ನು ಪಿರ್ಯಾದಿದಾರರ ಅಸೌಖ್ಯದಲ್ಲಿದ್ದ ಸಂಬಂದಿಕರೊಬ್ಬರು ಎ ಜೆ ಆಸ್ಪತ್ರೆಯಲ್ಲಿದ್ದವರಿಗೆ ರಕ್ತ ದಾನ ಮಾಡಲು ಕಿನ್ನಿಗೋಳಿಯಿಂದ ಹೊರಟು ಪಕ್ಷಿಕೆರೆ ಎಂಬಲ್ಲಿ ತಲುಪಿದಾಗ ನಾಯಿಯೊಂದು ಅಡ್ಡ ಬದ್ದ ಪರಿಣಾಮ ಅದನ್ನು ತಪ್ಪಿಸುವ ಪ್ರಯತ್ನದಲ್ಲಿ ಬೈಕ್ ಸಮೇತ ರಸ್ತೆಗೆ ಬಿದ್ದು ಸವಾರನಿಗೆ ಸಣ್ಣಪುಟ್ಟ ಗಾಯವಾಗಿ ಸಹಸವಾರನಾದ ರೋಹನ್ ಡಿಸೋಜಾ ರವರಿಗೆ ತಲೆಗೆ ಗುದ್ದಿದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು; ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ, ನಂತರ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಪಿರ್ಯಾದಿದಾರರು ಗಾಯಾಳು ಮಗನ ಆರೈಕೆಯಲ್ಲಿದ್ದು ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರಲ್ಲಿ ಅಭಿಪ್ರಾಯ ಕೇಳಿದ್ದೂ; ಅಪಘಾತಪಡಿಸಿದ ಬೈಕ್ ಸವಾರ ಠಾಣೆಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.

 

11.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಮಧ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನೀರಜ್ ವಿ. ಕುಮಾರ್ ರವರು ಎನ್ ಎಮ್ ಪಿ ಟಿ ಆಡಳಿತ ಕಛೇರಿಯಲ್ಲಿ ಕೆಲಸ ಮುಗಿಸಿ ತನ್ನ ಜೊತೆ ರಾಜೇಶ ಎಂಬವರೊಂದಿಗೆ ಪಣಂಬೂರು ಜಂಕ್ಷನ್ ಬಳಿ ರಸ್ತೆ ದಾಟಲು ನಿಂತಿದ್ದಾಗ ಬೈಕಂಪಾಡಿ ಕಡೆಯಿಂದ ಕೆಎ- 19 ಬಿ- 6017 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಆಪಾದಿತ ಚಾಲಕ ಜೋಸೆಫ್ ಎಂಬವರು ಪಣಂಬೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ; ರಾ.ಹೆ 66 ರಲ್ಲಿ ಬಲಗಡೆಯಿಂದ ಬರುತಿದ್ದ ಟ್ಯಾಂಕರ್ ನಂಬ್ರ ಟಿ ಎನ್- 28 ಎ ಡಿ- 3468 ನೇಯದನ್ನು ಎಡಭಾಗದಲ್ಲಿ ಓವರ್ ಟೇಕ್ ಮಾಡಿಕೊಂಡು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ  ಯಾವುದೇ ಸೂಚನೆ ನೀಡದೆ ಪಣಂಬೂರು ಜಂಕ್ಷನ್ ನಲ್ಲಿ ಏಕಾಏಕಿಯಾಗಿ ಬಲಕ್ಕೆ ತಿರುಗಿಸಿದಾಗ ರಸ್ತೆ ದಾಟಲು ನಿಂತಿದ್ದ ರಾಜೇಶ ಎಂಬವರಿಗೆ ಮತ್ತು ತನ್ನ ಬಲಭಾಗದಲ್ಲಿ ಬರುತ್ತಿದ್ದ ಟ್ಯಾಂಕರಿಗೂ ಡಿಕ್ಕಿ ಹೊಡೆದ ಪರಿಣಾಮ ರಾಜೇಶ ರವರು ರಸ್ತೆಗೆ ಬಿದ್ದು, ಎಡಗಾಲಿಗೆ ಮೂಳೆಮುರಿತದ ಗಂಭೀರ ಗಾಯವಾಗಿ ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಟ್ಯಾಂಕರನ ಮುಂಭಾಗ ಜಖಂಗೊಂಡಿರುತ್ತದೆ.

 

12.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ಪಿರ್ಯಾದಿದಾರರಾದ ಶ್ರೀ ಬಿನೀಷ್ ಸಿ ದೀಪ್ ರವರು ಸಮಯ 13:00 ಗಂಟೆಗೆ ಅವರು ಕೆಲಸ ಮಾಡುವ  ಕಂಪನಿಯಾದ ಜಿ4ಎಸ್ ಸೆಕ್ಯುರ್ ಕಂಪನಿಯಿಂದ ಕೆ ಎ 19 ಎಕ್ಸ್ 3410 ನೇ ನಂಬ್ರದ ಹೊಂಡ ಪ್ಲೆಝರ್ ಬೈಕಿನಲ್ಲಿ ಸವಾರಿ ಮಾಡಿಕೊಂಡು ತನ್ನ ಮನೆಯ ಕಡೆಗೆ ಹೋಗುವಾಗ ಮಾಲೆಮಾರ್ ಅಯ್ಯಪ್ಪ ದೇವಸ್ಥಾನದ ಸಮೀಪ ಗೂಡ್ಸ್ ಆಟೋ ಒಂದು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅವರಿದ್ದ  ಬೈಕಿಗೆ ಡಿಕ್ಕಿ ಪಡಿಸಿದ್ದು ಅಲ್ಲಿಂದ  ಗೂಡ್ಸ್ಆಟೋ  ಚಾಲಕ ಗೂಡ್ಸ್ಆಟೋ ಸಮೇತ ಪರಾರಿಯಾಗಿದ್ದು, ಇದರ ಪರಿಣಾಮ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಮುಖದ ಎಡ ಬಾಗಕ್ಕೆ ,ಕೆನ್ನೆಗೆ ತರಚಿದ ಗಾಯವಾಗಿದ್ದು, ಬಲ ಕೈ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ತೆಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

13.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಫಿರ್ಯಾದಿದಾರರಾದ ಶ್ರೀ ಝಹೀರ್ ಅಹಮ್ಮದ್ ಖಾನ್ ರವರು ಮತ್ತು ಫಳ್ನೀರ್ ನಿವಾಸಿ ಮುಕ್ತರ್ ಅಹ್ಮದ್ ಎಂಬವರೊಂದಿಗೆ ಸೇರಿಕೊಂಡು ಸುಮಾರು 10 ವರ್ಷಗಳಿಂದ ನಗರದ ರಾವ್ & ರಾವ್ ಸರ್ಕಲ್ ನಲ್ಲಿ ಕಿಂಗ್ ಶೂಸ್ ಎಂಬ ಫೂಟ್ ವೇರ್ ಅಂಗಡಿ ಇಟ್ಟುಕೊಂಡು ಬ್ಯುಸಿನೆಸ್ ಮಾಡಿಕೊಂಡಿರುವುದಾಗಿದೆ. ವ್ಯವಹಾರ ಮಾಡಿಕೊಂಡ ಸಮಯ ಲಾಭಾಂಶದಲ್ಲಿ ಶೇಕಡಾ 70% ರಷ್ಟು ಮುಕ್ತರ್ ಅಹ್ಮದ್ ನಿಗೆ ಮತ್ತು ಉಳಿದ 30% ರಷ್ಟು ಲಾಭಾಂಶವನ್ನು ಪಿರ್ಯಾದಿದಾರರಿಗೂ ಕೊಡಬೇಕೆಂದು ನಮ್ಮಿಬ್ಬರಲ್ಲಿ ಮಾತಿನ ಒಪ್ಪಂದವಾಗಿರುತ್ತದೆ. ಆದರೆ ಮುಕ್ತರ್ ಅಹ್ಮದ್ ರವರು ಪಿರ್ಯಾದಿದಾರರಿಗೆ 23 ತಿಂಗಳಿನಿಂದ ಲಾಭಾಂಶ ನೀಡಿರುವುದಿಲ್ಲ ಆದಾ ಕಾರಣ ಪಿರ್ಯಾದಿದಾರರು ದಿನಾಂಕ 28-03-2015 ರಂದು ದೂರು ಠಾಣೆಯಲ್ಲಿ ನೀಡಿದ್ದು, ಠಾಣೆಯಲ್ಲಿ ಸಮಕ್ಷಮ ವಿಚಾರಣೆ ನಡೆಸಿರುತ್ತಾರೆ, ಈ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಹಿಂಬರಹ ನೀಡಿ ಕಳುಹಿಸಿಕೊಟ್ಟಿರುತ್ತಾರೆ. ಬಳಿಕ ಪಿರ್ಯಾದಿದಾರರು ದಿನಾಂಕ 28.03.2015 ರಂದು ಸಂಜೆ ಸುಮಾರು 4.45 ಗಂಟೆ ಸಮಯಕ್ಕೆ ಕಿಂಗ್ ಶೂ ಅಂಗಡಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮುಕ್ತರ್ ಅಹ್ಮದ್ ನು ಅಂಗಡಿಯ ಬೀಗ ಮುರಿಯಲು ಪ್ರಯತ್ನಿಸುತ್ತಿದ್ದನು. ಆ ಸಮಯ ವಿಚಾರಿಸಲು ಹೋದಾಗ ಮುಕ್ತರ್ ಅಹ್ಮದ್ ನು ಪಿರ್ಯಾದಿದಾರರನ್ನು ತಡೆದು ತನ್ನ ಕೈಯಲ್ಲಿದ್ದ ಸುತ್ತಿಗೆಯಿಂದ ಪಿರ್ಯಾದಿದಾರರ ಕೈ ಗಂಟಿಗೆ ಮತ್ತು ಬಲಭುಜಕ್ಕೆ ಹೊಡೆದಿರುತ್ತಾನೆ. ಅಲ್ಲದೇ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾನೆ. ಕೂಡಲೇ ಪಿರ್ಯಾದಿದಾರರು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.03.2015 ರಂದು  ಮಧ್ಯಾಹ್ನ ಸುಮಾರು 12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ. ಜಯ ಶೆಟ್ಟಿ ರವರು ತನ್ನ ಬಾಬ್ತು ಕೆಎ-19-ಇಜಿ-7402 ನೇದಲ್ಲಿ ಪಿರ್ಯಾದಿದಾರರು ಸವಾರರಾಗಿದ್ದುಕೊಂಡು ತನ್ನ ಮನೆ ಕಡೆಯಿಂದ ಕರ್ಬಿಸ್ಥಾನದ ಬಳಿ ಇರುವ  ಶ್ರೀ ಆದಿ ಮಾಯೆ ದೇವಸ್ಥಾನದ ಕಡೆಗೆ ಹೋಗುವರೇ ಮೊಗರು ಕರ್ಬಿಸ್ಥಾನ ದ್ವಾರದ ಕಡೆ ಹೋಗಲು ಸ್ಕೂಟರಿನ ಬಲಭಾಗದ ಇಂಡಿಕೇಟರ್‌‌ನ್ನು  ಹಾಕಿಕೊಂಡು ಕರ್ಬಿಸ್ಥಾನ ಕಡೆಗೆ ತಿರುಗಿಸುತ್ತಿರುವ ಸಮಯ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಮೊಗರು ಕಡೆಯಿಂದ ಮೋಟರ್‌‌ ಸೈಕಲ್‌‌ ಒಂದನ್ನು ಅದರ ಸವಾರರು ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್‌‌ನ ಬಲಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌‌ ಸಮೇತ ಡಾಂಬರು ರಸ್ತೆಗೆ ಬಿದ್ದು ಅವರ ಪಿರ್ಯಾದಿದಾರರ ಬಲಕೈಗೆ ಗುದ್ದಿದನೋವು ಹಾಗೂ, ಬಲಭಾಗದ ಸೊಂಟಕ್ಕೆ ಗುದ್ದಿದನೋವು ಹಾಗೂ ಬಲಕಾಲಿನ  ಪಾದದ ಮೇಲೆ ರಕ್ತಗಾಯ ಉಂಟಾಗಿರುತ್ತದೆ, ಅಪಘಾತ ಉಂಟುಮಾಡಿದ ಮೋಟಾರ್‌‌ ಸೈಕಲ್‌‌ನ ನಂಬ್ರ: KA-19-W-5666 ಹಾಗೂ ಸವಾರರ ಹೆಸರು ಪರುಶುರಾಮ ಆಗಿರುತ್ತದೆ.

 

15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.03.2015 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಾಂತಾ ರವರು ಬಸ್ಸು ನಂಬ್ರ ಕೆಎ-19-ಎಇ-4993 ರಲ್ಲಿ ಪಿರ್ಯಾದಿದಾರರು ಹಾಗೂ  ಅವರ ಗಂಡ ಪಕೀರಪ್ಪ ಹಾಗೂ ಅವರೊಂದಿಗೆ ಕೆಲಸ ಮಾಡುವ ನಂದಿನಿ ಹಾಗೂ ಆಕೆಯ ಮಗು ಹನುಮಂತ ರವರುಗಳೊಂದಿಗೆ  ಪ್ರಯಾಣಿಕರಾಗಿ ಕುಳಿತುಕೊಂಡು ಜ್ಯೋತಿನಗರ ಕಡೆಯಿಂದ ಎಕ್ಕೂರು ಕಡೆಗೆ  ಕೆಲಸದ ಬಗ್ಗೆ  ಹೋಗುವರೇ ಎಕ್ಕೂರು ಬಸ್ಸು ನಿಲ್ದಾಣದ ಬಳಿ ತಲುಪುತ್ತಿದ್ದಂತೆ  ವೇಗವಾಗಿ ಹೋಗುತ್ತಿದ್ದ  ಬಸ್ಸಿಗೆ ಬಸ್ಸಿನ ಚಾಲಕರು ಏಕಾಏಕಿ ಬ್ರೇಕ್‌‌ ಹಾಕಿದ ಪರಿಣಾಮ ಡ್ರೈವರ್‌‌‌ನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರು ಮತ್ತು ನಂದಿನಿಯವರ ಮಗ ಹನುಮಂತ ಸೀಟಿನಿಂದ ಜ್ಯಾರಿ ಬಸ್ಸಿನ  ಒಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗುದ್ದಿದ ನೋವು ಹಾಗೂ ನಂದಿನಿಯವರ ಮಗು ಹನುಮಂತನ  ಎಡಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತದ ಗಂಭೀರಸ್ವರೂಪದ ನೋವುಂಟಾಗಿರುತ್ತದೆ ಈ ಅಪಘಾತಕ್ಕೆ ಬಸ್ಸು ಚಾಲಕನ ಅತಿವೇಗದ ಚಾಲನೆಯೇ ಕಾರಣವಾಗಿರುತ್ತದೆ.

 

16.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.03.2015 ರಂದು ಬೆಳಿಗ್ಗೆ ಸಮಯ ಸುಮಾರು 4.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯದುಕೃಷ್ಣಾ ರವರ  ಗೆಳೆಯ ರತುಲ್‌‌ ಎಂಬವರು ಅವರ ಬೈಕ್‌‌ ನಂಬ್ರ: ಕೆಎಲ್‌‌-58-ಸಿ-7268 ನೇದರಲ್ಲಿ ಸವಾರರಾಗಿದ್ದುಕೊಂಡು ಪಿರ್ಯಾದಿದಾರರ ರೂಮ್‌‌ ಇರುವ ಕಣ್ಣೂರು ಕಡೆಗೆ ಬಂದು  ಪಿರ್ಯಾದಿದಾರರು ಹಾಗೂ ರತುಲ್‌‌ ಉಪಾಹರ ಸೇವಿಸಲು ಮಂಗಳೂರು ಕಡೆಗೆ ಹೋಗಲು ಆತನ ಬೈಕ್ನ ಹಿಂಬದಿಯಲ್ಲಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ರತುಲ್‌‌ ರವರು ಬೈಕನ್ನು ಚಲಾಯಿಸುತ್ತಿದ್ದು ಸಮಯ ಸುಮಾರು ಮುಂಜಾನೆ 4.50 ಗಂಟೆಗೆ ಅಶೋಕ್‌‌ ಲೈಲ್ಯಾಂಡ್‌‌ನ ಶೋ ರೂಂನ ಎದುರುಗಡೆ ರಸ್ತೆಯಲ್ಲಿ ತಲುಪುತ್ತಿದ್ದಂತೆ  ಅವರ ಹಿಂದುಗಡೆಯಿಂದ ಲಾರಿಯೊಂದನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹಿಂಬದಿ ಸವಾರನಾಗಿ ಕುಳಿತಿದ್ದ  ಬೈಕಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಹಾಗೂ ಬೈಕ್‌‌ ಸವಾರ ರತುಲ್‌‌ ಮೋಟಾರ್ಸೈಕಲ್‌‌ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ  ಪಿರ್ಯಾದಿದಾರರ ಬಲಕೈ ತಟ್ಟಿಗೆ ರಸ್ತೆಗಾಯ ಹಾಗೂ ಕುತ್ತಿಗೆಯ ಎಡಭಾಗಕ್ಕೆ ರಕ್ತಗಾಯ ಉಂಟಾಗಿದ್ದು, ಹಾಗೂ ರತುಲ್‌‌ ರವರ ತಲೆಯ  ಬಲಭಾಗಕ್ಕೆ ಗಂಭೀರ ಸ್ವರೂಪದ  ರಕ್ತಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯ ಹಾಗೂ ಬಾಯಿಯಿಂದ ರಕ್ತ ಬರುತ್ತಿದ್ದು ಅಪಘಾತ ಮಾಡಿದ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.